ನವದೆಹಲಿ, ಆ. 13– ಕಾಂಗ್ರೆಸ್ಸಿನ ಎರಡು ಗುಂಪುಗಳ ನಡುವಣ ವಿರಸ ಅವು ಕಣದಿಂದ ಹಿಂದೆ ಸರಿಯಲಾಗದಂತಹ ಮಟ್ಟ ಮುಟ್ಟಿದೆ. ಶ್ರೀ ನಿಜಲಿಂಗಪ್ಪನವರು ಜನಸಂಘ ಮತ್ತು ಸ್ವತಂತ್ರ ಪಕ್ಷಗಳೊಡನೆ ಒಳಸಂಚು ನಡೆಸಿದ್ದಾರೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಮತ್ತೆ ಆರೋಪ ಉಚ್ಚರಿಸಿದ್ದರೆ, ಇನ್ನೊಂದು ಕಡೆ ಕಾಂಗ್ರೆಸ್ ಅಧ್ಯಕ್ಷರು ಅದನ್ನು ಖಂಡತುಂಡವಾಗಿ ನಿರಾಕರಿಸಿದ್ದಾರೆ.