ಬೆಂಗಳೂರು, ಜೂನ್ 11– ಸಂಪುಟ ಪುನರ್ರಚನೆಯ ಹಿನ್ನೆಲೆಯಲ್ಲಿ ಶಾಸಕರ ಒತ್ತಡಗಳಿಂದ ತಪ್ಪಿಸಿಕೊಳ್ಳಲು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಹೆಗ್ಗಡದೇವನಕೋಟೆ ಬಳಿಯ ‘ಜಂಗಲ್ ಲಾಡ್ಜ್’ಗೆ ತೆರಳಿದ್ದರೆ, ವರ್ಗಾವಣೆ ಸಂಬಂಧ ಕೊನೆ ಗಳಿಗೆಯಲ್ಲಿ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ತರುತ್ತಿರುವ ಪ್ರಭಾವ– ಒತ್ತಡಗಳಿಂದ ಪಾರಾಗಲು ಸಚಿವರು ‘ನಿಗೂಢ’ ಸ್ಥಳಗಳನ್ನು ಸೇರಿದ್ದಾರೆ.