‘ಭ್ರಷ್ಟಾಚಾರ ಸಚಿವರೊಬ್ಬರ ಮೇಲೆ ನಾನು ಚಿತ್ರ ತೆಗೆಯಬಹುದೇ’ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಚಿತ್ರ ನಿರ್ಮಾಪಕ ರಾಜ್ ಬೋಸ್ಲಾ, ಈ ರೀತಿ ಪ್ರಶ್ನಿಸಿದಾಗ ಜನ ಉತ್ಸಾಹದಿಂದ ಚಪ್ಪಾಳೆ ತಟ್ಟಿದರು. ಚಪ್ಪಾಳೆ ಧ್ವನಿ ಅಡಗುತ್ತಿದ್ದಂತೆ ರಾಜ್ ಬೋಸ್ಲಾ ಹೇಳಿದರು, ‘ಅದು ಸಾಧ್ಯವಿಲ್ಲ. ಕಾರಣವೇನೆಂದರೆ, ಭ್ರಷ್ಟಾಚಾರ ಸಚಿವರು ಇರುವರೆಂದು ಸೆನ್ಸಾರಿನವರು ಒಪ್ಪಿಕೊಳ್ಳುತ್ತಾರೆ. ಆದರೆ, ಅವರನ್ನು ತೆರೆಯ ಮೇಲೆ ತೋರಿಸಲು ಅವಕಾಶ ಕೊಡುವುದಿಲ್ಲ’ ಎಂದರು.