<p><strong>ಚುನಾವಣಾ ಮೈತ್ರಿ ಯತ್ನ: ಎಐಸಿಸಿಯಿಂದ ಎಸ್ಸೆನ್ಗೆ ಸರ್ವಾಧಿಕಾರ</strong></p>.<p><strong>ಜವಾಹರಲಾಲ್ ನೆಹರೂ ನಗರ, ಡಿ. 6–</strong> ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತ ಕಾಂಗ್ರೆಸ್ ಪಕ್ಷವನ್ನು ಪರಾಭವಗೊಳಿಸಲು ಇತರ ಪ್ರಜಾಸತ್ತಾತ್ಮಕ ಪಕ್ಷಗಳೊಂದಿಗೆ ಚುನಾವಣಾ ಹೊಂದಾಣಿಕೆ ಏರ್ಪಡಿಸಿಕೊಳ್ಳಲು ಸಂಸ್ಥಾ ಕಾಂಗ್ರೆಸ್ ಎಐಸಿಸಿ ಇಂದು ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರಿಗೆ ಅಧಿಕಾರ ನೀಡಿತು.</p>.<p>ಎಲ್ಲ ಪ್ರಜಾಸತ್ತಾತ್ಮಕ ಪಕ್ಷಗಳ ಸಂಯುಕ್ತ ಕ್ರಮಕ್ಕೆ ಪರಮಾವಧಿ ಹೊಂದಾಣಿಕೆ ಉಂಟು ಮಾಡುವ ದಿಸೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರು ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸುವ ಅಧಿಕೃತ ರಾಜಕೀಯ ನಿರ್ಣಯಕ್ಕೆ ಸರ್ವಾನುಮತ ದೊರೆಯಲಿಲ್ಲ.</p>.<p><strong>ಕರಡು ನಿರ್ಣಯದ ಪ್ರಮುಖ ಶಿಲ್ಪಿ ವೀರೇಂದ್ರ ಪಾಟೀಲ್</strong></p>.<p><strong>ನೆಹರೂ ನಗರ, ಡಿ. 6– </strong>ಚುನಾವಣಾ ಹೊಂದಾಣಿಕೆ ಮತ್ತು ಜಂಟಿ ಕಾರ್ಯನಿರ್ವಹಣೆ ಕುರಿತ ಕರಡು ನಿರ್ಣಯವನ್ನು ರೂಪಿಸುವಲ್ಲಿ ಮೈಸೂರಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಪ್ರಮುಖ ಪಾತ್ರ ವಹಿಸಿದ್ದಾರೆಂದು ಹೇಳಲಾಗಿದೆ.</p>.<p>ಅಧಿವೇಶನದಲ್ಲಿ ನಿನ್ನೆ ಮಂಡಿಸಿ ಇಂದು ಅಂಗೀಕೃತವಾದ ಈ ನಿರ್ಣಯದ ಕರಡನ್ನು ಡಿಸೆಂಬರ್ 3ರಂದು ಕಾರ್ಯಕಾರಿ ಸಮಿತಿಯ ಮುಂದೆ ಮಂಡಿಸಲಾಗಿತ್ತು. ಚುನಾವಣಾ ಹೊಂದಾಣಿಕೆ ಬಗ್ಗೆ ಯಾವುದೇ ಬಿಗಿ ಸೂತ್ರಗಳನ್ನು ಅನುಸರಿಸಬಾರದೆಂದು ಪಾಟೀಲರು ಕಾರ್ಯಕಾರಿ ಸಮಿತಿಯ ಮನವೊಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚುನಾವಣಾ ಮೈತ್ರಿ ಯತ್ನ: ಎಐಸಿಸಿಯಿಂದ ಎಸ್ಸೆನ್ಗೆ ಸರ್ವಾಧಿಕಾರ</strong></p>.<p><strong>ಜವಾಹರಲಾಲ್ ನೆಹರೂ ನಗರ, ಡಿ. 6–</strong> ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತ ಕಾಂಗ್ರೆಸ್ ಪಕ್ಷವನ್ನು ಪರಾಭವಗೊಳಿಸಲು ಇತರ ಪ್ರಜಾಸತ್ತಾತ್ಮಕ ಪಕ್ಷಗಳೊಂದಿಗೆ ಚುನಾವಣಾ ಹೊಂದಾಣಿಕೆ ಏರ್ಪಡಿಸಿಕೊಳ್ಳಲು ಸಂಸ್ಥಾ ಕಾಂಗ್ರೆಸ್ ಎಐಸಿಸಿ ಇಂದು ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರಿಗೆ ಅಧಿಕಾರ ನೀಡಿತು.</p>.<p>ಎಲ್ಲ ಪ್ರಜಾಸತ್ತಾತ್ಮಕ ಪಕ್ಷಗಳ ಸಂಯುಕ್ತ ಕ್ರಮಕ್ಕೆ ಪರಮಾವಧಿ ಹೊಂದಾಣಿಕೆ ಉಂಟು ಮಾಡುವ ದಿಸೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರು ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸುವ ಅಧಿಕೃತ ರಾಜಕೀಯ ನಿರ್ಣಯಕ್ಕೆ ಸರ್ವಾನುಮತ ದೊರೆಯಲಿಲ್ಲ.</p>.<p><strong>ಕರಡು ನಿರ್ಣಯದ ಪ್ರಮುಖ ಶಿಲ್ಪಿ ವೀರೇಂದ್ರ ಪಾಟೀಲ್</strong></p>.<p><strong>ನೆಹರೂ ನಗರ, ಡಿ. 6– </strong>ಚುನಾವಣಾ ಹೊಂದಾಣಿಕೆ ಮತ್ತು ಜಂಟಿ ಕಾರ್ಯನಿರ್ವಹಣೆ ಕುರಿತ ಕರಡು ನಿರ್ಣಯವನ್ನು ರೂಪಿಸುವಲ್ಲಿ ಮೈಸೂರಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಪ್ರಮುಖ ಪಾತ್ರ ವಹಿಸಿದ್ದಾರೆಂದು ಹೇಳಲಾಗಿದೆ.</p>.<p>ಅಧಿವೇಶನದಲ್ಲಿ ನಿನ್ನೆ ಮಂಡಿಸಿ ಇಂದು ಅಂಗೀಕೃತವಾದ ಈ ನಿರ್ಣಯದ ಕರಡನ್ನು ಡಿಸೆಂಬರ್ 3ರಂದು ಕಾರ್ಯಕಾರಿ ಸಮಿತಿಯ ಮುಂದೆ ಮಂಡಿಸಲಾಗಿತ್ತು. ಚುನಾವಣಾ ಹೊಂದಾಣಿಕೆ ಬಗ್ಗೆ ಯಾವುದೇ ಬಿಗಿ ಸೂತ್ರಗಳನ್ನು ಅನುಸರಿಸಬಾರದೆಂದು ಪಾಟೀಲರು ಕಾರ್ಯಕಾರಿ ಸಮಿತಿಯ ಮನವೊಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>