<p><strong>ಭಾರತಕ್ಕೆ ತೇಜಾ ವರ್ಗಾವಣೆ</strong></p>.<p><strong>ಲಂಡನ್, ಡಿ. 11– </strong>ಜಯಂತಿ ನೌಕಾ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಧರ್ಮತೇಜ ಅವರನ್ನು ವಿಚಾರಣೆಗಾಗಿ ಭಾರತ ಸರ್ಕಾರಕ್ಕೆ ಒಪ್ಪಿಸಬೇಕೆಂಬ ಭಾರತ ಸರ್ಕಾರದ ಕೋರಿಕೆಗೆ ಇಲ್ಲಿನ ಬೋಸ್ಟ್ರೀಟ್ ಮ್ಯಾಜಿಸ್ಟ್ರೇಟ್ ಕೋರ್ಟ್ ಇಂದು ಸಮ್ಮತಿಸಿತು.</p>.<p>10 ಲಕ್ಷ ಪೌಂಡುಗಳ ಮೋಸದ ಆಪಾದನೆ ಬಗ್ಗೆ ಭಾರತದಲ್ಲಿ ಅವರ ವಿಚಾರಣೆ ನಡೆಯುವುದು.</p>.<p>ರಾಜಕೀಯದ ಕಾರಣದಿಂದ ಭಾರತದಲ್ಲಿ ಧರ್ಮತೇಜ ಅವರ ವಿಚಾರಣೆ ನ್ಯಾಯರೀತಿಯಲ್ಲಿ ನಡೆಯುವುದಿಲ್ಲವೆಂಬ ವಕೀಲರ ವಾದವನ್ನು ಮ್ಯಾಜಿಸ್ಟ್ರೇಟರು ತಿರಸ್ಕರಿಸಿದರು.</p>.<p><strong>ಸಾಹಿತ್ಯ ಸಮ್ಮೇಳನ: 10 ಸಾವಿರ ಮಂದಿ ಕೂಡಬಲ್ಲ ಮಂಟಪ</strong></p>.<p><strong>ಬೆಂಗಳೂರು, ಡಿ. 11–</strong> ನಗರದಲ್ಲಿ ಡಿಸೆಂಬರ್ 25ರಿಂದ 29ರವರೆಗೆ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ 10 ಸಾವಿರ ಮಂದಿ ಕೂರಲು ಅವಕಾಶವಿರುವ ಮಂಟಪದ ನಿರ್ಮಾಣ ಕಾರ್ಯ ನಡೆಯುತ್ತಿದೆ.</p>.<p>ಸಮ್ಮೇಳನದ ಸಂಬಂಧದ ವ್ಯವಸ್ಥೆಯ ಬಗ್ಗೆ ಇಂದು ವರದಿಗಾರರಿಗೆ ವಿವರ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಜಿ.ನಾರಾಯಣ ಅವರು, ಸಾವಿರಾರು ಮಂದಿ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.</p>.<p><strong>ಹೊಸ ಸಿನಿಮಾ ಲೈಸೆನ್ಸ್ ನೀಡಿಕೆ ಮೇಲೆ ನಿರ್ಬಂಧ?</strong></p>.<p><strong>ಬೆಂಗಳೂರು, ಡಿ. 11–</strong> ನಗರದಲ್ಲಿ ಚಲನಚಿತ್ರ ಮಂದಿರಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಇನ್ನು ಮುಂದೆ ಅವುಗಳ ನಿರ್ಮಾಣಕ್ಕೆ ಲೈಸೆನ್ಸ್ ಕೊಡುವುದರ ಬಗ್ಗೆ ಯೋಚಿಸಿ ತೀರ್ಮಾನಿಸಬೇಕಾಗುವುದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಇಂದು ಇಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾರತಕ್ಕೆ ತೇಜಾ ವರ್ಗಾವಣೆ</strong></p>.<p><strong>ಲಂಡನ್, ಡಿ. 11– </strong>ಜಯಂತಿ ನೌಕಾ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಧರ್ಮತೇಜ ಅವರನ್ನು ವಿಚಾರಣೆಗಾಗಿ ಭಾರತ ಸರ್ಕಾರಕ್ಕೆ ಒಪ್ಪಿಸಬೇಕೆಂಬ ಭಾರತ ಸರ್ಕಾರದ ಕೋರಿಕೆಗೆ ಇಲ್ಲಿನ ಬೋಸ್ಟ್ರೀಟ್ ಮ್ಯಾಜಿಸ್ಟ್ರೇಟ್ ಕೋರ್ಟ್ ಇಂದು ಸಮ್ಮತಿಸಿತು.</p>.<p>10 ಲಕ್ಷ ಪೌಂಡುಗಳ ಮೋಸದ ಆಪಾದನೆ ಬಗ್ಗೆ ಭಾರತದಲ್ಲಿ ಅವರ ವಿಚಾರಣೆ ನಡೆಯುವುದು.</p>.<p>ರಾಜಕೀಯದ ಕಾರಣದಿಂದ ಭಾರತದಲ್ಲಿ ಧರ್ಮತೇಜ ಅವರ ವಿಚಾರಣೆ ನ್ಯಾಯರೀತಿಯಲ್ಲಿ ನಡೆಯುವುದಿಲ್ಲವೆಂಬ ವಕೀಲರ ವಾದವನ್ನು ಮ್ಯಾಜಿಸ್ಟ್ರೇಟರು ತಿರಸ್ಕರಿಸಿದರು.</p>.<p><strong>ಸಾಹಿತ್ಯ ಸಮ್ಮೇಳನ: 10 ಸಾವಿರ ಮಂದಿ ಕೂಡಬಲ್ಲ ಮಂಟಪ</strong></p>.<p><strong>ಬೆಂಗಳೂರು, ಡಿ. 11–</strong> ನಗರದಲ್ಲಿ ಡಿಸೆಂಬರ್ 25ರಿಂದ 29ರವರೆಗೆ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ 10 ಸಾವಿರ ಮಂದಿ ಕೂರಲು ಅವಕಾಶವಿರುವ ಮಂಟಪದ ನಿರ್ಮಾಣ ಕಾರ್ಯ ನಡೆಯುತ್ತಿದೆ.</p>.<p>ಸಮ್ಮೇಳನದ ಸಂಬಂಧದ ವ್ಯವಸ್ಥೆಯ ಬಗ್ಗೆ ಇಂದು ವರದಿಗಾರರಿಗೆ ವಿವರ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಜಿ.ನಾರಾಯಣ ಅವರು, ಸಾವಿರಾರು ಮಂದಿ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.</p>.<p><strong>ಹೊಸ ಸಿನಿಮಾ ಲೈಸೆನ್ಸ್ ನೀಡಿಕೆ ಮೇಲೆ ನಿರ್ಬಂಧ?</strong></p>.<p><strong>ಬೆಂಗಳೂರು, ಡಿ. 11–</strong> ನಗರದಲ್ಲಿ ಚಲನಚಿತ್ರ ಮಂದಿರಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಇನ್ನು ಮುಂದೆ ಅವುಗಳ ನಿರ್ಮಾಣಕ್ಕೆ ಲೈಸೆನ್ಸ್ ಕೊಡುವುದರ ಬಗ್ಗೆ ಯೋಚಿಸಿ ತೀರ್ಮಾನಿಸಬೇಕಾಗುವುದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಇಂದು ಇಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>