ನವದೆಹಲಿ, ಮೇ 2– ಕೃಷಿ ದೃಷ್ಟಿಯಿಂದ ದೇಶದಲ್ಲಿ ಹಿಂದುಳಿದಿರುವ ಪ್ರದೇಶಗಳಲ್ಲಿ ಪ್ರವಾಸ ನಡೆಸಿ, ವ್ಯವಸಾಯ ಅಭಿವೃದ್ಧಿ
ಯಲ್ಲಿನ ಅಸಮತೆಯನ್ನು ಹೋಗಲಾಡಿಸಲು ಪರಿಹಾರ ಸೂಚಿಸುವಂತೆ ಕಿಸಾನ್ ಸಂಸತ್ ಸದಸ್ಯರನ್ನೊಳಗೊಂಡ ಮೂರು ಅಧ್ಯಯನ ತಂಡಗಳನ್ನು ಆಯ್ಕೆ ಮಾಡಲಾಗಿದೆ.ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ರೈತ ವಿಭಾಗ ಈ ನಿರ್ಧಾರ ಕೈಗೊಂಡಿದೆ.