ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಸೋಮವಾರ, 3-5-1971

Last Updated 2 ಮೇ 2021, 19:30 IST
ಅಕ್ಷರ ಗಾತ್ರ

ಡಾ. ಮಹಿಷಿಗೆ ಸ್ಟೇಟ್‌ ಸಚಿವ ಸ್ಥಾನಕ್ಕೆ ಬಡ್ತಿ: ಶಂಕರಾನಂದ್‌, ಮೊಹಿಸಿನ್ ಉಪ ಸಚಿವರು

ನವದೆಹಲಿ, ಮೇ 2– ಕೇಂದ್ರದ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಉಪಸಚಿವೆಯಾಗಿದ್ದ ಡಾ. ಸರೋಜಿನಿ ಮಹಿಷಿ ಅವರಿಗೆ ಸ್ಟೇಟ್‌ ಸಚಿವ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ.

ಮೈಸೂರಿನ ಶ್ರೀ ಬಿ.ಶಂಕರಾನಂದ್‌ ಮತ್ತು ಶ್ರೀ ಎಫ್‌.ಎಚ್‌.ಮೊಹಿಸಿನ್‌ ಅವರೂ ಸೇರಿ ಒಟ್ಟು 18 ಮಂದಿ ಹೊಸಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಇವರಿಬ್ಬರಿಗೂ ಉಪಸಚಿವರ ಹುದ್ದೆ ನೀಡಲಾಗಿದೆ.

ವ್ಯವಸಾಯದಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ಮೂರು ಅಧ್ಯಯನ ತಂಡಗಳ ಪ್ರವಾಸ

ನವದೆಹಲಿ, ಮೇ 2– ಕೃಷಿ ದೃಷ್ಟಿಯಿಂದ ದೇಶದಲ್ಲಿ ಹಿಂದುಳಿದಿರುವ ಪ್ರದೇಶಗಳಲ್ಲಿ ಪ್ರವಾಸ ನಡೆಸಿ, ವ್ಯವಸಾಯ ಅಭಿವೃದ್ಧಿ
ಯಲ್ಲಿನ ಅಸಮತೆಯನ್ನು ಹೋಗಲಾಡಿಸಲು ಪರಿಹಾರ ಸೂಚಿಸುವಂತೆ ಕಿಸಾನ್‌ ಸಂಸತ್‌ ಸದಸ್ಯರನ್ನೊಳಗೊಂಡ ಮೂರು ಅಧ್ಯಯನ ತಂಡಗಳನ್ನು ಆಯ್ಕೆ ಮಾಡಲಾಗಿದೆ.ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ರೈತ ವಿಭಾಗ ಈ ನಿರ್ಧಾರ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT