‘ಪಾಕ್ ದಾಳಿಗೆ ಭಾರತದ ಪಡೆ ಜಗ್ಗಿಲ್ಲ’
ನವದೆಹಲಿ, ಮೇ 26– ಪೂರ್ವ ಬಂಗಾಳದಿಂದ ಭಾರತದ ಮೇಲೆ ದಾಳಿ ನಡೆಸುತ್ತಿರುವ ಪಾಕ್ ಸೈನಿಕರ ಮೇಲೆ ಭಾರತೀಯ ಗಡಿ ರಕ್ಷಣಾ ಪಡೆಯವರು ಸೂಕ್ತ ರೀತಿಯಲ್ಲಿ ಪ್ರತಿದಾಳಿ ನಡೆಸಿ, ಗಡಿಯನ್ನು ಉಲ್ಲಂಘಿಸಿದ ಸಂದರ್ಭಗಳಲ್ಲೆಲ್ಲ ಅವರನ್ನು ಹಿಮ್ಮೆಟ್ಟಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಸ್ವರಣ್ ಸಿಂಗ್ ಇಂದು ರಾಜ್ಯಸಭೆಗೆ ತಿಳಿಸಿದರು.