<p>ಪ್ರದೇಶ ಪಕ್ಷವಾಗಿ ರಾಜ್ಯ ಸಂಸ್ಥಾ ಕಾಂಗ್ರೆಸ್ ರೂಪಾಂತರ?</p>.<p>ಬೆಂಗಳೂರು, ನ. 19– ಮೈಸೂರು ರಾಜ್ಯದಲ್ಲಿ ಸಂಸ್ಥಾ ಕಾಂಗ್ರೆಸ್ ಪ್ರದೇಶ ಪಕ್ಷವಾಗಿ ಪರಿವರ್ತನೆಯಾಗುವ ಸಂಭವವಿದೆಯೇ?</p>.<p>ಪಕ್ಷದ ನಾಯಕರಲ್ಲಿ ಪಕ್ಷದ ಭವಿಷ್ಯದ ಸ್ವರೂಪ ಹಾಗೂ ಮಾರ್ಗ ಕುರಿತು ನಡೆಯುತ್ತಿರುವ ತೀವ್ರ ಚರ್ಚೆಯಲ್ಲಿ ಈ ಅಂಶ ಪ್ರಧಾನವಾಗಿ ಪ್ರಸ್ತಾಪದಲ್ಲಿದೆ.</p>.<p>ಎಲ್ಲ ದೃಷ್ಟಿಗಳಿಂದ ಈ ಮಾರ್ಗ ಸೂಕ್ತವೆಂದೆನಿಸಿದರೆ, ರಾಜ್ಯದಲ್ಲಿ ಸಂಸ್ಥಾ ಕಾಂಗ್ರೆಸ್ಸನ್ನು ಪ್ರದೇಶ ಪಕ್ಷವನ್ನಾಗಿ ಏಕೆ ಪರಿವರ್ತಿಸಬಾರದು ಎಂಬ ಯೋಚನೆ ಹೊಸದೇನೂ ಅಲ್ಲ.</p>.<p>ಕಳ್ಳತನ ಕಲಿಸುವ ಶಾಲೆ!</p>.<p>ಮದರಾಸು, ನ. 19– ಚಿಕ್ಕ ಹುಡುಗರಿಗೆ ಕಳ್ಳತನದಲ್ಲಿ ಶಿಕ್ಷಣ ನೀಡುವ ತರಬೇತಿ ಶಾಲೆಯೊಂದನ್ನು ತಮಿಳುನಾಡಿನ ತಿರುಚಿನಾಪಳ್ಳಿಯ ತಿರುಪೆರಂಬೂರಿನಲ್ಲಿ ವೃತ್ತಿಗೆ ಹಳಬರಾದವರು ಹಾಗೂ ಖದೀಮ ಅಪರಾಧಿಗಳು ನಡೆಸುತ್ತಿದ್ದಾರೆ.</p>.<p>ಕಳೆದ ಶುಕ್ರವಾರ ಇಲ್ಲಿನ ಸೆಂಟ್ರಲ್ ಸ್ಟೇಷನ್ನಿನಲ್ಲಿ ಹನ್ನೆರಡು ವರ್ಷದ ಬಾಲಕರನ್ನು ಬಂಧಿಸಿದಾಗ ನಗರದ ರೈಲ್ವೆ ಪೊಲೀಸರಿಗೆ<br />ಈ ‘ಶಾಲೆ ಇರುವುದರ’ ಸುಳಿವು ಗೊತ್ತಾಯಿತು.</p>.<p>ತಿರುಪೆರಂಬೂರಿನಲ್ಲಿ ತಮಗೆ ಮತ್ತು ಇತರ ಬಾಲಕರಿಗೆ ತರಬೇತಿ ನೀಡಿ ‘ವೃತ್ತಿಯಲ್ಲಿ ಹಿರಿಯರಾದವರಿಗೆ’ ನೆರವು ನೀಡಲು ಮದರಾಸಿಗೆ ಕಳುಹಿಸಲಾಯಿತೆಂದು ಬಾಲಕರು ಪೊಲೀಸರಿಗೆ ತಪ್ಪೊಪ್ಪಿಗೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರದೇಶ ಪಕ್ಷವಾಗಿ ರಾಜ್ಯ ಸಂಸ್ಥಾ ಕಾಂಗ್ರೆಸ್ ರೂಪಾಂತರ?</p>.<p>ಬೆಂಗಳೂರು, ನ. 19– ಮೈಸೂರು ರಾಜ್ಯದಲ್ಲಿ ಸಂಸ್ಥಾ ಕಾಂಗ್ರೆಸ್ ಪ್ರದೇಶ ಪಕ್ಷವಾಗಿ ಪರಿವರ್ತನೆಯಾಗುವ ಸಂಭವವಿದೆಯೇ?</p>.<p>ಪಕ್ಷದ ನಾಯಕರಲ್ಲಿ ಪಕ್ಷದ ಭವಿಷ್ಯದ ಸ್ವರೂಪ ಹಾಗೂ ಮಾರ್ಗ ಕುರಿತು ನಡೆಯುತ್ತಿರುವ ತೀವ್ರ ಚರ್ಚೆಯಲ್ಲಿ ಈ ಅಂಶ ಪ್ರಧಾನವಾಗಿ ಪ್ರಸ್ತಾಪದಲ್ಲಿದೆ.</p>.<p>ಎಲ್ಲ ದೃಷ್ಟಿಗಳಿಂದ ಈ ಮಾರ್ಗ ಸೂಕ್ತವೆಂದೆನಿಸಿದರೆ, ರಾಜ್ಯದಲ್ಲಿ ಸಂಸ್ಥಾ ಕಾಂಗ್ರೆಸ್ಸನ್ನು ಪ್ರದೇಶ ಪಕ್ಷವನ್ನಾಗಿ ಏಕೆ ಪರಿವರ್ತಿಸಬಾರದು ಎಂಬ ಯೋಚನೆ ಹೊಸದೇನೂ ಅಲ್ಲ.</p>.<p>ಕಳ್ಳತನ ಕಲಿಸುವ ಶಾಲೆ!</p>.<p>ಮದರಾಸು, ನ. 19– ಚಿಕ್ಕ ಹುಡುಗರಿಗೆ ಕಳ್ಳತನದಲ್ಲಿ ಶಿಕ್ಷಣ ನೀಡುವ ತರಬೇತಿ ಶಾಲೆಯೊಂದನ್ನು ತಮಿಳುನಾಡಿನ ತಿರುಚಿನಾಪಳ್ಳಿಯ ತಿರುಪೆರಂಬೂರಿನಲ್ಲಿ ವೃತ್ತಿಗೆ ಹಳಬರಾದವರು ಹಾಗೂ ಖದೀಮ ಅಪರಾಧಿಗಳು ನಡೆಸುತ್ತಿದ್ದಾರೆ.</p>.<p>ಕಳೆದ ಶುಕ್ರವಾರ ಇಲ್ಲಿನ ಸೆಂಟ್ರಲ್ ಸ್ಟೇಷನ್ನಿನಲ್ಲಿ ಹನ್ನೆರಡು ವರ್ಷದ ಬಾಲಕರನ್ನು ಬಂಧಿಸಿದಾಗ ನಗರದ ರೈಲ್ವೆ ಪೊಲೀಸರಿಗೆ<br />ಈ ‘ಶಾಲೆ ಇರುವುದರ’ ಸುಳಿವು ಗೊತ್ತಾಯಿತು.</p>.<p>ತಿರುಪೆರಂಬೂರಿನಲ್ಲಿ ತಮಗೆ ಮತ್ತು ಇತರ ಬಾಲಕರಿಗೆ ತರಬೇತಿ ನೀಡಿ ‘ವೃತ್ತಿಯಲ್ಲಿ ಹಿರಿಯರಾದವರಿಗೆ’ ನೆರವು ನೀಡಲು ಮದರಾಸಿಗೆ ಕಳುಹಿಸಲಾಯಿತೆಂದು ಬಾಲಕರು ಪೊಲೀಸರಿಗೆ ತಪ್ಪೊಪ್ಪಿಗೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>