<p><strong>15 ಶಾಸಕರ ಪಕ್ಷಾಂತರ: ವೀರೇಂದ್ರ ಸಂಪುಟಕ್ಕೆ ಗಂಡಾಂತರ</strong></p>.<p><strong>ಬೆಂಗಳೂರು, ಮಾರ್ಚ್ 17– </strong>ಇಂದು ಪಾದರಸ ಸದೃಶ ರಭಸದಿಂದ ನಡೆದ ಬೆಳವಣಿಗೆಯಿಂದಾಗಿ ರಾಜ್ಯದ ಮಂತ್ರಿ ಮಂಡಲ ಉರುಳಿ ಹೋಗುವ ಪರಿಸ್ಥಿತಿ ಉಂಟಾಗಿದೆ.</p>.<p>ವಿಧಾನಸಭೆಯ 15 ಮಂದಿ ಸಂಸ್ಥಾ ಕಾಂಗ್ರೆಸ್ ಸದಸ್ಯರು ಆಡಳಿತ ಕಾಂಗ್ರೆಸ್ಗೆ ಪಕ್ಷಾಂತರಗೊಂಡು, ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಬಹುಮತ ಕಳೆದು ಕೊಂಡಿದ್ದಾರೆಂದು ಆಡಳಿತ ಕಾಂಗ್ರೆಸ್ ನಾಯಕರು ಘೋಷಿಸಿದುದೇ ಅಲ್ಲದೆ ರಾಜ್ಯಪಾಲರಿಗೂ ತಿಳಿಸಿದರು.</p>.<p>ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಂಜೆ ಅವಸರದಲ್ಲಿ ಸೇರಿದ ಸಂಸ್ಥಾ ಕಾಂಗ್ರೆಸ್ ಸಭೆ ಶ್ರೀ ವೀರೇಂದ್ರ ಪಾಟೀಲ್ ಅವರ ನಾಯಕತ್ವದಲ್ಲಿ ವಿಶ್ವಾಸವನ್ನು ಪ್ರತಿಪಾದಿಸಿ, ನಾಲ್ಕು ತಿಂಗಳ ಕಾಲದ ಬಜೆಟನ್ನು ಅಂಗೀಕರಿಸಿದ ನಂತರ ಮುಂದಿನ ಮಾರ್ಪಾಡು ಕುರಿತು ಚರ್ಚಿಸಲು ತೀರ್ಮಾನಿಸಿತು.</p>.<p><strong>ಸಂಸತ್ ಕಾಂಗ್ರೆಸ್ ಪಕ್ಷದ ನಾಯಕರಾಗಿ ಇಂದಿರಾ</strong></p>.<p><strong>ನವದೆಹಲಿ, ಮಾರ್ಚ್ 17–</strong> ಮಧ್ಯಂತರ ಚುನಾವಣೆಗಳಲ್ಲಿ ಭಾರಿ ಜಯಗಳಿಸಿ ವಿಜಯೋತ್ಸಾಹದಿಂದಿರುವ ಆಡಳಿತ ಕಾಂಗ್ರೆಸ್ ಸಂಸತ್ ಪಕ್ಷವು ಭಾರಿ ಕೋಲಾ ಹಲ, ಪ್ರಶಂಸೆಗಳ ನಡುವೆ ಇಂದಿರಾ ಗಾಂಧಿ ಅವರನ್ನು ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆರಿಸಿತು.</p>.<p>ಐದನೆಯ ಲೋಕಸಭೆಗೆ 5 ವರ್ಷಗಳ ಅವಧಿಗೆ ಪಕ್ಷದ ನಾಯಕಿಯಾಗಿ ಆಯ್ಕೆ ಯಾದ ಬಗ್ಗೆ ಔಪಚಾರಿಕ ಪ್ರಕಟಣೆ, ಜಯ ಘೋಷಗಳ ನಂತರ ಪಕ್ಷದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ ಇಂದಿರಾ ಅವರು, ‘ಇದು ವಿಜಯೋತ್ಸವಕ್ಕೆ ಸಮಯವಲ್ಲ; ಸಮಾಜವಾದದ ಹಾದಿಯಲ್ಲಿ ರಾಷ್ಟ್ರ ಮತ್ತು ಜನತೆಯನ್ನು ಮುನ್ನಡೆಸುವ ಬೃಹತ್ ಕಾರ್ಯ ನಮ್ಮ ಮುಂದಿದೆ’ ಎಂದು ಕರೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>15 ಶಾಸಕರ ಪಕ್ಷಾಂತರ: ವೀರೇಂದ್ರ ಸಂಪುಟಕ್ಕೆ ಗಂಡಾಂತರ</strong></p>.<p><strong>ಬೆಂಗಳೂರು, ಮಾರ್ಚ್ 17– </strong>ಇಂದು ಪಾದರಸ ಸದೃಶ ರಭಸದಿಂದ ನಡೆದ ಬೆಳವಣಿಗೆಯಿಂದಾಗಿ ರಾಜ್ಯದ ಮಂತ್ರಿ ಮಂಡಲ ಉರುಳಿ ಹೋಗುವ ಪರಿಸ್ಥಿತಿ ಉಂಟಾಗಿದೆ.</p>.<p>ವಿಧಾನಸಭೆಯ 15 ಮಂದಿ ಸಂಸ್ಥಾ ಕಾಂಗ್ರೆಸ್ ಸದಸ್ಯರು ಆಡಳಿತ ಕಾಂಗ್ರೆಸ್ಗೆ ಪಕ್ಷಾಂತರಗೊಂಡು, ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಬಹುಮತ ಕಳೆದು ಕೊಂಡಿದ್ದಾರೆಂದು ಆಡಳಿತ ಕಾಂಗ್ರೆಸ್ ನಾಯಕರು ಘೋಷಿಸಿದುದೇ ಅಲ್ಲದೆ ರಾಜ್ಯಪಾಲರಿಗೂ ತಿಳಿಸಿದರು.</p>.<p>ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಂಜೆ ಅವಸರದಲ್ಲಿ ಸೇರಿದ ಸಂಸ್ಥಾ ಕಾಂಗ್ರೆಸ್ ಸಭೆ ಶ್ರೀ ವೀರೇಂದ್ರ ಪಾಟೀಲ್ ಅವರ ನಾಯಕತ್ವದಲ್ಲಿ ವಿಶ್ವಾಸವನ್ನು ಪ್ರತಿಪಾದಿಸಿ, ನಾಲ್ಕು ತಿಂಗಳ ಕಾಲದ ಬಜೆಟನ್ನು ಅಂಗೀಕರಿಸಿದ ನಂತರ ಮುಂದಿನ ಮಾರ್ಪಾಡು ಕುರಿತು ಚರ್ಚಿಸಲು ತೀರ್ಮಾನಿಸಿತು.</p>.<p><strong>ಸಂಸತ್ ಕಾಂಗ್ರೆಸ್ ಪಕ್ಷದ ನಾಯಕರಾಗಿ ಇಂದಿರಾ</strong></p>.<p><strong>ನವದೆಹಲಿ, ಮಾರ್ಚ್ 17–</strong> ಮಧ್ಯಂತರ ಚುನಾವಣೆಗಳಲ್ಲಿ ಭಾರಿ ಜಯಗಳಿಸಿ ವಿಜಯೋತ್ಸಾಹದಿಂದಿರುವ ಆಡಳಿತ ಕಾಂಗ್ರೆಸ್ ಸಂಸತ್ ಪಕ್ಷವು ಭಾರಿ ಕೋಲಾ ಹಲ, ಪ್ರಶಂಸೆಗಳ ನಡುವೆ ಇಂದಿರಾ ಗಾಂಧಿ ಅವರನ್ನು ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆರಿಸಿತು.</p>.<p>ಐದನೆಯ ಲೋಕಸಭೆಗೆ 5 ವರ್ಷಗಳ ಅವಧಿಗೆ ಪಕ್ಷದ ನಾಯಕಿಯಾಗಿ ಆಯ್ಕೆ ಯಾದ ಬಗ್ಗೆ ಔಪಚಾರಿಕ ಪ್ರಕಟಣೆ, ಜಯ ಘೋಷಗಳ ನಂತರ ಪಕ್ಷದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ ಇಂದಿರಾ ಅವರು, ‘ಇದು ವಿಜಯೋತ್ಸವಕ್ಕೆ ಸಮಯವಲ್ಲ; ಸಮಾಜವಾದದ ಹಾದಿಯಲ್ಲಿ ರಾಷ್ಟ್ರ ಮತ್ತು ಜನತೆಯನ್ನು ಮುನ್ನಡೆಸುವ ಬೃಹತ್ ಕಾರ್ಯ ನಮ್ಮ ಮುಂದಿದೆ’ ಎಂದು ಕರೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>