ಐದನೆಯ ಲೋಕಸಭೆಗೆ 5 ವರ್ಷಗಳ ಅವಧಿಗೆ ಪಕ್ಷದ ನಾಯಕಿಯಾಗಿ ಆಯ್ಕೆ ಯಾದ ಬಗ್ಗೆ ಔಪಚಾರಿಕ ಪ್ರಕಟಣೆ, ಜಯ ಘೋಷಗಳ ನಂತರ ಪಕ್ಷದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ ಇಂದಿರಾ ಅವರು, ‘ಇದು ವಿಜಯೋತ್ಸವಕ್ಕೆ ಸಮಯವಲ್ಲ; ಸಮಾಜವಾದದ ಹಾದಿಯಲ್ಲಿ ರಾಷ್ಟ್ರ ಮತ್ತು ಜನತೆಯನ್ನು ಮುನ್ನಡೆಸುವ ಬೃಹತ್ ಕಾರ್ಯ ನಮ್ಮ ಮುಂದಿದೆ’ ಎಂದು ಕರೆ ನೀಡಿದರು.