ಕಾವೇರಿ ನೀರು ಹಂಚಿಕೆಯ 1924ರ ಒಪ್ಪಂದಕ್ಕೆ ರಾಜ್ಯ ಸರ್ಕಾರ ಬದ್ಧವಾಗುವುದೆಂದೂ ಇದನ್ನು ಬರಹದಲ್ಲಿ ನೀಡಲು ತಾವು ಸಿದ್ಧವೆಂದೂ ಕೇಂದ್ರಕ್ಕೆ ಮೈಸೂರಿನ ರಾಜ್ಯಪಾಲರು ಭರವಸೆ ನೀಡಿದ್ದಾರೆಂಬ ಪತ್ರಿಕಾ ವರದಿಯನ್ನು ಶ್ರೀ ಧರ್ಮವೀರರವರು ಪತ್ರಿಕಾಗೋಷ್ಠಿಯಲ್ಲಿ ನಿರಾಕರಿಸಿ, ‘ನಾನು ಯಾರಿಗೂ ಆ ರೀತಿ ಭರವಸೆ ನೀಡಿಲ್ಲ’ ಎಂದರು.