ಹೊರನಾಡ ಕನ್ನಡಿಗರ ಸ್ಥಿತಿ ‘ಪರಿತ್ಯಕ್ತ ಸ್ತ್ರೀಯಂತೆ’
ಬೆಂಗಳೂರು, ಡಿ. 30– ಗಡಿನಾಡ ಕನ್ನಡಿಗರ ಬವಣೆ ಮನ ಕರಗುವಂತಿದ್ದರೆ, ದೂರದ ಹೊರನಾಡ ಕನ್ನಡಿಗರದ್ದು ಬೇರೆ ರೀತಿಯ ಸಮಸ್ಯೆ. ಜಿಲ್ಲಾ ಪ್ರತಿನಿಧಿ ಗಳದ್ದು ಮತ್ತೊಂದು ಬಗೆ. ಕೆಲವರು ದುಃಖ ತೋಡಿಕೊಂಡರೆ ಮತ್ತೆ ಕೆಲವರು ಪರಿಷತ್ತಿನಿಂದ ತಾವು ನಿರೀಕ್ಷಿಸಿರುವ ಸಹಾಯಗಳ ಬಗ್ಗೆ ಸಲಹೆಗಳನ್ನಿತ್ತರು. ‘ಗಡಿಭಾಗದ ಜನರ ಪರಿಸ್ಥಿತಿ ಪರಿತ್ಯಕ್ತ ಸ್ತ್ರೀಯಂತಾಗಿದೆ’ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.