ಸೂಕ್ತ ಸಮಯದಲ್ಲಿ ಬಾಂಗ್ಲಾದೇಶ ಮಾನ್ಯತೆ
ನವದೆಹಲಿ, ಏ. 4– ಬಾಂಗ್ಲಾದೇಶದ ಹಂಗಾಮಿ ಸರ್ಕಾರಕ್ಕೆ ಮಾನ್ಯತೆ ಮತ್ತು ಅಲ್ಲಿನ ಸ್ವಾತಂತ್ರ್ಯ ಯೋಧರಿಗೆ ನಿರ್ದಿಷ್ಟ ನೆರವು ನೀಡಬೇಕೆಂದು ಇಂದು ಅಖಿಲ ಭಾರತ ಆಡಳಿತ ಕಾಂಗ್ರೆಸ್ ಸಮಿತಿ ಅಧಿವೇಶನದಲ್ಲಿ ಉದ್ರಿಕ್ತ ಸದಸ್ಯರು ಪಟ್ಟು ಹಿಡಿದು ಆಗ್ರಹ ಮಾಡಿದರೂ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರಾಗಲಿ, ವಿದೇಶಾಂಗ ಸಚಿವ ಶ್ರೀ ಸ್ವರಣಸಿಂಗರಾಗಲಿ ಅದಕ್ಕೆ ಸ್ಪಷ್ಟ ಪ್ರತಿಕ್ರಿಯೆ ಸೂಚಿಸಲಿಲ್ಲ.