ಜಾತಿ, ಭಾಷಾಂಧತೆಯ ವಿರುದ್ಧ ಸತತ ಸಮರಕ್ಕೆ ಹಸನ್ ಕರೆ
ಮೈಸೂರು, ಜ. 13– ರಾಷ್ಟ್ರೀಯ ಐಕ್ಯಶಕ್ತಿ ಮತ್ತು ಪ್ರಗತಿಗೆ ಬೆದರಿಕೆ ಒಡ್ಡಿ ಅಲ್ಲಲ್ಲಿ ಅಸಹ್ಯಕರವಾಗಿ ತಲೆ ಎತ್ತುತ್ತಿರುವ ಪ್ರಾದೇಶಿಕತೆ, ಜಾತೀಯತೆ ಹಾಗೂ ಭಾಷಾಂಧತೆಯ ವಿರುದ್ಧ ದತತ ಸಮರ ಹೂಡುವಂತೆ ಕೇಂದ್ರ ಶಿಕ್ಷಣ ಸಚಿವ ಪ್ರೊ. ಎಸ್. ನೂರುಲ್ಹಸನ್ ಅವರು ಇಲ್ಲಿ ನವ ಪದವೀಧರರಿಗೆ ಕರೆ ನೀಡಿದರು.