ಒರಿಸ್ಸಾದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ವಿರೋಧ ಪಕ್ಷಗಳ ಸಭಾತ್ಯಾಗ
ನವದೆಹಲಿ, ಮಾರ್ಚ್ 5– ಒರಿಸ್ಸಾದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರುವ ಘೋಷಣೆ ಪತ್ರವನ್ನು ಇಂದು ರಾಜ್ಯಸಭೆಯ ಮುಂದೆ ಮಂಡಿಸಿದುದರ ವಿರುದ್ಧ ಪ್ರತಿಭಟಿಸಿ ಸಿ.ಪಿ.ಐ., ಮುಸ್ಲಿಂಲೀಗ್ ಮತ್ತು ಕೆಲವು ಪಕ್ಷೇತರರ ವಿನಾ ಇಡೀ ವಿರೋಧ ಪಕ್ಷ ಸಭಾತ್ಯಾಗ ಮಾಡುವ ಮುನ್ನ ಸಂಸ್ಥಾ ಕಾಂಗ್ರೆಸ್ ನಾಯಕ ಮಹಾವೀರ ತ್ಯಾಗಿ ಅವರು, ‘ರಾಷ್ಟ್ರಪತಿಯವರನ್ನು ವಿಚಾರಣೆಗೆ ಗುರಿಪಡಿಸಲು ವಿರೋಧ ಪಕ್ಷ ಅಲೋಚಿಸುತ್ತಿದೆ’ ಎಂದೂ ಸೂಚಿಸಿದರು.