ಬಾಂಗ್ಲಾಕ್ಕೆ ಮನ್ನಣೆ ವಿಳಂಬವಾದರೆ ಚಿರಶಾಂತಿಗೆ ಅಡ್ಡಿ
ನವದೆಹಲಿ, ಆಗಸ್ಟ್ 30– ಬಾಂಗ್ಲಾ ದೇಶಕ್ಕೆ ಮಾನ್ಯತೆ ನೀಡುವುದನ್ನು ವಿಳಂಬಗೊಳಿಸಿದರೆ ಚಿರಶಾಂತಿ ಮೂಡಿಸುವ ಮತ್ತು ಬಾಂಧವ್ಯ ಸೌಹಾರ್ದಗೊಳಿಸುವ ಯತ್ನಕ್ಕೆ ಧಕ್ಕೆ ಉಂಟಾಗುವುದೇ ಅಲ್ಲದೆ ಸಿಮ್ಲಾ ಒಪ್ಪಂದದಲ್ಲಿ ರೂಪಿಸಿರುವ ಗುರಿಗಳ ಸಾಧನೆ ವಿಳಂಬವಾಗುವುದು ಎಂದು ಭಾರತ ಪಾಕಿಸ್ತಾನ್ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದೆ.