ವಿದ್ಯಾರ್ಥಿಗಳ ಮೇಲೆ ಬೆದರುಗುಂಡು, ಲಾಠಿ ಪ್ರಹಾರ, ಅಶ್ರುವಾಯು
ಬೆಂಗಳೂರು, ಜ. 22– ‘ಕಲ್ಲೆಸೆತದಲ್ಲಿ ತೊಡಗಿದ್ದ’ ಹಿಂದಿ ವಿರೋಧಿ ವಿದ್ಯಾರ್ಥಿಗಳ ಗುಂಪನ್ನು ವಿಶ್ವವಿದ್ಯಾನಿಲಯ ಆವರಣದಿಂದ ಚದುರಿಸಲು ಪೊಲೀಸರು ‘ಆಕಾಶದತ್ತ’ ಆರು ರೌಂಡ್ ಗುಂಡು ಹಾರಿಸಿದರು. ಲಾಠಿ ಪ್ರಹಾರ ಮಾಡಿದರು, 200 ಅಶ್ರುವಾಯು ಷೆಲ್ ಪ್ರಯೋಗಿಸಿದರು. ಇಂದಿನ ಗಲಭೆಯಲ್ಲಿ 112 ಮಂದಿ ಪೊಲೀಸರೂ, 24 ಮಂದಿ ಇತರರೂ ಗಾಯಗೊಂಡರು.