<h3>ಭೂಕಂಪ: ಗುಜರಾತ್ನಲ್ಲೇ 1,200 ಮಂದಿ ಸಾವು</h3>.<p>ಅಹ್ಮದಾಬಾದ್, ಜ. 26 (ಯುಎನ್ಐ, ಪಿಟಿಐ)– ಕಳೆದ 200 ವರ್ಷಗಳಲ್ಲಿಯೇ ಅತ್ಯಂತ ಭೀಕರ ಎನ್ನಲಾದ ಭೂಕಂಪದಲ್ಲಿ ಗುಜರಾತ್ ರಾಜ್ಯವೊಂದರಲ್ಲೇ 1,200 ಮಂದಿ ಮೃತಪಟ್ಟಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. </p>.<p>ಚೆನ್ನೈ, ಕಲ್ಕತ್ತಾ, ಮುಂಬೈ, ದೆಹಲಿ ಮುಂತಾದ ದೇಶದ ಇತರ ಭಾಗಗಳಿಂದಲೂ ಭೂಕಂಪ ಸಂಭವಿಸಿದ ವರದಿಗಳು ಬಂದಿದ್ದರೂ ಗುಜರಾತ್ ಎಲ್ಲಕ್ಕಿಂತ ಹೆಚ್ಚು ಹಾನಿಯನ್ನು ಅನುಭವಿಸಿದೆ. ಸಾವುನೋವುಗಳ ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲ. ಕೋಟ್ಯಂತರ ರೂಪಾಯಿಗಳ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.</p>.<h3>ತಲಕಾಡು: ಕಾವೇರಿ ನದಿಯಲ್ಲಿ ಈಜಲು ಹೋದ ಆರು ಯುವಕರ ಸಾವು</h3>.<p>ಟಿ. ನರಸೀಪುರ, ಜ. 26– ಕಾವೇರಿ ನದಿಯಲ್ಲಿ ಈಜಲು ಹೋದ ಬೆಂಗಳೂರಿನ 6 ಮಂದಿ ಯುವ ಪ್ರವಾಸಿಗರು ಕಾವೇರಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ದಾರುಣ ಘಟನೆ ತಾಲ್ಲೂಕಿನ ತಲಕಾಡು ಬಳಿ ಇಂದು ಮಧ್ಯಾಹ್ನ ನಡೆದಿದೆ.</p>.<p>ಗುರುಪ್ರಸಾದ್ (24), ಗೋಪಿನಾಥ (24), ನಾಗೇಂದ್ರ (25), ರವಿಕುಮಾರ್ (24), ಮಹೇಶ್ (24) ಹಾಗೂ ಮಂಜುನಾಥ್ (24) ಎಂಬುವರೇ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಚ್. ಶ್ರೀನಿವಾಸ್ ತಿಳಿಸಿದ್ದಾರೆ.</p>.<h3>ಚೆನ್ನೈಗೆ ತೆರಳಿ ಕರುಣಾನಿಧಿಗೆ ರಾಜ್ ಧನ್ಯವಾದ ಅರ್ಪಣೆ</h3>.<p>ಚೆನ್ನೈ, ಜ. 26 (ಪಿಟಿಐ)– ‘ನನ್ನ ತಂದೆಯ ಮೀಸೆ ವೀರಪ್ಪನ್ಗೆ ಇರೋದಕ್ಕಿಂತ ತುಂಬ ದೊಡ್ಡದಾಗಿತ್ತು. ವೀರಪ್ಪನ್ನನ್ನು ಹತ್ತಿರದಿಂದ ನೋಡುವ ಕುತೂಹಲ ನನಗಿತ್ತು’.</p>.<p>ನಟ ಡಾ. ರಾಜ್ಕುಮಾರ್ ಅವರು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರನ್ನು ಭೇಟಿ ಮಾಡಲು ಚೆನ್ನೈಗೆ ಹೋದಾಗ ವೀರಪ್ಪನ್ ಕುರಿತು ಹೀಗೆ ತಮಾಷೆಯಾಗಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h3>ಭೂಕಂಪ: ಗುಜರಾತ್ನಲ್ಲೇ 1,200 ಮಂದಿ ಸಾವು</h3>.<p>ಅಹ್ಮದಾಬಾದ್, ಜ. 26 (ಯುಎನ್ಐ, ಪಿಟಿಐ)– ಕಳೆದ 200 ವರ್ಷಗಳಲ್ಲಿಯೇ ಅತ್ಯಂತ ಭೀಕರ ಎನ್ನಲಾದ ಭೂಕಂಪದಲ್ಲಿ ಗುಜರಾತ್ ರಾಜ್ಯವೊಂದರಲ್ಲೇ 1,200 ಮಂದಿ ಮೃತಪಟ್ಟಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. </p>.<p>ಚೆನ್ನೈ, ಕಲ್ಕತ್ತಾ, ಮುಂಬೈ, ದೆಹಲಿ ಮುಂತಾದ ದೇಶದ ಇತರ ಭಾಗಗಳಿಂದಲೂ ಭೂಕಂಪ ಸಂಭವಿಸಿದ ವರದಿಗಳು ಬಂದಿದ್ದರೂ ಗುಜರಾತ್ ಎಲ್ಲಕ್ಕಿಂತ ಹೆಚ್ಚು ಹಾನಿಯನ್ನು ಅನುಭವಿಸಿದೆ. ಸಾವುನೋವುಗಳ ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲ. ಕೋಟ್ಯಂತರ ರೂಪಾಯಿಗಳ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.</p>.<h3>ತಲಕಾಡು: ಕಾವೇರಿ ನದಿಯಲ್ಲಿ ಈಜಲು ಹೋದ ಆರು ಯುವಕರ ಸಾವು</h3>.<p>ಟಿ. ನರಸೀಪುರ, ಜ. 26– ಕಾವೇರಿ ನದಿಯಲ್ಲಿ ಈಜಲು ಹೋದ ಬೆಂಗಳೂರಿನ 6 ಮಂದಿ ಯುವ ಪ್ರವಾಸಿಗರು ಕಾವೇರಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ದಾರುಣ ಘಟನೆ ತಾಲ್ಲೂಕಿನ ತಲಕಾಡು ಬಳಿ ಇಂದು ಮಧ್ಯಾಹ್ನ ನಡೆದಿದೆ.</p>.<p>ಗುರುಪ್ರಸಾದ್ (24), ಗೋಪಿನಾಥ (24), ನಾಗೇಂದ್ರ (25), ರವಿಕುಮಾರ್ (24), ಮಹೇಶ್ (24) ಹಾಗೂ ಮಂಜುನಾಥ್ (24) ಎಂಬುವರೇ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಚ್. ಶ್ರೀನಿವಾಸ್ ತಿಳಿಸಿದ್ದಾರೆ.</p>.<h3>ಚೆನ್ನೈಗೆ ತೆರಳಿ ಕರುಣಾನಿಧಿಗೆ ರಾಜ್ ಧನ್ಯವಾದ ಅರ್ಪಣೆ</h3>.<p>ಚೆನ್ನೈ, ಜ. 26 (ಪಿಟಿಐ)– ‘ನನ್ನ ತಂದೆಯ ಮೀಸೆ ವೀರಪ್ಪನ್ಗೆ ಇರೋದಕ್ಕಿಂತ ತುಂಬ ದೊಡ್ಡದಾಗಿತ್ತು. ವೀರಪ್ಪನ್ನನ್ನು ಹತ್ತಿರದಿಂದ ನೋಡುವ ಕುತೂಹಲ ನನಗಿತ್ತು’.</p>.<p>ನಟ ಡಾ. ರಾಜ್ಕುಮಾರ್ ಅವರು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರನ್ನು ಭೇಟಿ ಮಾಡಲು ಚೆನ್ನೈಗೆ ಹೋದಾಗ ವೀರಪ್ಪನ್ ಕುರಿತು ಹೀಗೆ ತಮಾಷೆಯಾಗಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>