<p><strong>ಕಾಶ್ಮೀರ ಚುನಾವಣೆ: ಸದ್ಯಕ್ಕಿಲ್ಲ ಆಯೋಗದ ತೀರ್ಮಾನ</strong></p>.<p><strong>ನವದೆಹಲಿ, ನ. 10 (ಯುಎನ್ಐ)–</strong> ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸಬೇಕು ಎಂಬ ಕೇಂದ್ರ ಸರ್ಕಾರದ ಸಲಹೆಯನ್ನು ಇಂದು ಸರ್ವಾನುಮತದಿಂದ ತಿರಸ್ಕರಿಸಿದ ಚುನಾವಣಾ ಆಯೋಗ, ಅಲ್ಲಿ ಚುನಾವಣೆ ನಡೆಸಲು ಸದ್ಯಕ್ಕೆ ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ.</p>.<p>ಚುನಾವಣೆ ಸಲಹೆಯನ್ನು ತಿರಸ್ಕರಿಸುವ ಈ ನಿರ್ಧಾರ ಸಂಪೂರ್ಣವಾಗಿ ಅವಿರೋಧವಾದದ್ದು, ಯಾವುದೇ ರೀತಿಯ ಭಿನ್ನಮತ ಇರಲಿಲ್ಲ ಎಂದು ಆಯೋಗದ ಸಭೆಯ ಬಳಿಕ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ತಿಳಿಸಿದರು.</p>.<p><strong>ಸರ್ಕಾರದ ಜೊತೆ ಮಾತುಕತೆಗೆ ವೀರಪ್ಪನ್ ದೂತ</strong></p>.<p><strong>ಈರೋಡ್, ನ. 10 (ಪಿಟಿಐ)–</strong> ಕುಖ್ಯಾತ ಕಾಡುಗಳ್ಳ ಮತ್ತು ದಂತಚೋರ ವೀರಪ್ಪನ್ ತನ್ನ ಒತ್ತೆಯಲ್ಲಿರುವ ತಮಿಳುನಾಡಿನ ಮೂವರು ಅರಣ್ಯ ಸಿಬ್ಬಂದಿಯನ್ನು ಬಿಡುಗಡೆಗೊಳಿಸುವುದಕ್ಕೆ ಸಂಬಂಧಿಸಿ ಪೆರಿಯಾರ್ ಜಿಲ್ಲಾಧಿಕಾರಿ ಎನ್.ಎಸ್.ಪಳನಿಯಪ್ಪನ್ ಅವರೊಂದಿಗೆ ಸಮಾಲೋಚಿಸಲು ದೂತನೊಬ್ಬನನ್ನು ಇಂದು ಕಳುಹಿಸಿದ್ದಾನೆ.</p>.<p>ವೀರಪ್ಪನ್ನೊಂದಿಗೆ ಸಂಧಾನ ನಡೆಸಲು ಇಂದು ಮಧ್ಯಾಹ್ನ ತಮಿಳುನಾಡು ಸರ್ಕಾರ ಕಳುಹಿಸಿದ್ದ ಸರ್ಕಾರಿ ಪ್ರತಿನಿಧಿಯೊಂದಿಗೆ ಈತ ಬಂದಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಶ್ಮೀರ ಚುನಾವಣೆ: ಸದ್ಯಕ್ಕಿಲ್ಲ ಆಯೋಗದ ತೀರ್ಮಾನ</strong></p>.<p><strong>ನವದೆಹಲಿ, ನ. 10 (ಯುಎನ್ಐ)–</strong> ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸಬೇಕು ಎಂಬ ಕೇಂದ್ರ ಸರ್ಕಾರದ ಸಲಹೆಯನ್ನು ಇಂದು ಸರ್ವಾನುಮತದಿಂದ ತಿರಸ್ಕರಿಸಿದ ಚುನಾವಣಾ ಆಯೋಗ, ಅಲ್ಲಿ ಚುನಾವಣೆ ನಡೆಸಲು ಸದ್ಯಕ್ಕೆ ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ.</p>.<p>ಚುನಾವಣೆ ಸಲಹೆಯನ್ನು ತಿರಸ್ಕರಿಸುವ ಈ ನಿರ್ಧಾರ ಸಂಪೂರ್ಣವಾಗಿ ಅವಿರೋಧವಾದದ್ದು, ಯಾವುದೇ ರೀತಿಯ ಭಿನ್ನಮತ ಇರಲಿಲ್ಲ ಎಂದು ಆಯೋಗದ ಸಭೆಯ ಬಳಿಕ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ತಿಳಿಸಿದರು.</p>.<p><strong>ಸರ್ಕಾರದ ಜೊತೆ ಮಾತುಕತೆಗೆ ವೀರಪ್ಪನ್ ದೂತ</strong></p>.<p><strong>ಈರೋಡ್, ನ. 10 (ಪಿಟಿಐ)–</strong> ಕುಖ್ಯಾತ ಕಾಡುಗಳ್ಳ ಮತ್ತು ದಂತಚೋರ ವೀರಪ್ಪನ್ ತನ್ನ ಒತ್ತೆಯಲ್ಲಿರುವ ತಮಿಳುನಾಡಿನ ಮೂವರು ಅರಣ್ಯ ಸಿಬ್ಬಂದಿಯನ್ನು ಬಿಡುಗಡೆಗೊಳಿಸುವುದಕ್ಕೆ ಸಂಬಂಧಿಸಿ ಪೆರಿಯಾರ್ ಜಿಲ್ಲಾಧಿಕಾರಿ ಎನ್.ಎಸ್.ಪಳನಿಯಪ್ಪನ್ ಅವರೊಂದಿಗೆ ಸಮಾಲೋಚಿಸಲು ದೂತನೊಬ್ಬನನ್ನು ಇಂದು ಕಳುಹಿಸಿದ್ದಾನೆ.</p>.<p>ವೀರಪ್ಪನ್ನೊಂದಿಗೆ ಸಂಧಾನ ನಡೆಸಲು ಇಂದು ಮಧ್ಯಾಹ್ನ ತಮಿಳುನಾಡು ಸರ್ಕಾರ ಕಳುಹಿಸಿದ್ದ ಸರ್ಕಾರಿ ಪ್ರತಿನಿಧಿಯೊಂದಿಗೆ ಈತ ಬಂದಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>