ಈರೋಡ್, ನ. 20 (ಪಿಟಿಐ, ಯುಎನ್ಐ)– ಕರ್ನಾಟಕ ಮತ್ತು ತಮಿಳುನಾಡು ವಿಶೇಷ ಕಾರ್ಯಪಡೆ ಇಂದು ಅಂತಿಯೂರು ಅರಣ್ಯದಲ್ಲಿ ಹಠಾತ್ ಕಾರ್ಯಾಚರಣೆ ನಡೆಸಿ, ಇಪ್ಪತ್ತು ದಿನಗಳ ಹಿಂದೆ ಕುಖ್ಯಾತ ನರಹಂತಕ ವೀರಪ್ಪನ್ ಅಪಹರಿಸಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದ ತಮಿಳುನಾಡು ಅರಣ್ಯ ಇಲಾಖೆಯ ಮೂವರು ಸಿಬ್ಬಂದಿಯನ್ನು ಮಧ್ಯಾಹ್ನ 3.10ರ ವೇಳೆಗೆ ರಕ್ಷಿಸಿತು. ಆದರೆ, ವೀರಪ್ಪನ್ ಪರಾರಿಯಾಗಿದ್ದಾನೆ.