<p><strong>ಸಂಸತ್ತಿಗೆ ಮಹಾಜನ್ ವರದಿ; ರಾಜ್ಯ ಎಂ.ಪಿಗಳ ಟೀಕೆ</strong></p>.<p><strong>ನವದೆಹಲಿ, ನ. 12–</strong> ಆಡಳಿತ ಕಾಂಗ್ರೆಸ್ಸಿಗೆ ಸೇರದ ಸಂಸತ್ತಿನ ಮೈಸೂರು ಎಂ.ಪಿಗಳು ಇಂದು ಹೇಳಿಕೆಯೊಂದನ್ನು ನೀಡಿ, ಮಹಾಜನ್ ಆಯೋಗದ ವರದಿಯ ಬಗೆಗೆ ಸಂಸತ್ತಿನ ಬಿಚ್ಚು ಅಭಿಪ್ರಾಯ ಪಡೆಯಬೇಕೆಂಬ ರಾಜ್ಯದ ಆಡಳಿತ ಕಾಂಗ್ರೆಸ್ ಸಂಸತ್ ಸದಸ್ಯರ ಸಲಹೆಯನ್ನು ಖಂಡಿಸಿದ್ದಾರೆ.</p>.<p>ಈ ಹೇಳಿಕೆಗೆ ಸಂಸ್ಥಾ ಕಾಂಗ್ರೆಸ್, ಸ್ವತಂತ್ರ ಪಕ್ಷ ಮತ್ತು ಪಕ್ಷೇತರ ಎಂ.ಪಿಗಳು ಸಹಿ ಹಾಕಿದ್ದಾರೆ.</p>.<p>ಶ್ರೀ ಡಿ. ದೇವರಾಜ ಅರಸ್ರವರ ನಾಯಕತ್ವದಲ್ಲಿ ಆಡಳಿತ ಕಾಂಗ್ರೆಸ್ ನಿಯೋಗವೊಂದು ಪ್ರತ್ಯೇಕವಾಗಿ ಪ್ರಧಾನಿಯನ್ನು ಭೇಟಿ ಮಾಡಿದ್ದಕ್ಕೂ ಈ ಹೇಳಿಕೆಯಲ್ಲಿ ಆಕ್ಷೇಪಿಸಲಾಗಿದೆ.</p>.<p><strong>ರಾಜ್ಯ ಸಚಿವರ ಫೋನ್ ಅಕ್ರಮ ಬಳಕೆ ಶಂಕೆ</strong></p>.<p><strong>ನವದೆಹಲಿ, ನ. 12– </strong>ಮೈಸೂರು ಸರ್ಕಾರದ ಕೆಲವು ಸಚಿವರ ಖಾಸಗಿ ಟೆಲಿಫೋನ್ಗಳ ಅಕ್ರಮ ಬಳಕೆಯಾಗುತ್ತಿದೆ</p>.<p>ಎಂದು ಅನುಮಾನಿಸಲಾಗಿದ್ದು ಇದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ವಾರ್ತಾ, ಪ್ರಸಾರ ಮತ್ತು ಸಂಪರ್ಕ ಶಾಖೆ ಸಚಿವ ಶ್ರೀ ಸತ್ಯನಾರಾಯಣ ಸಿನ್ಹಾ ಅವರು ಇಂದು ಲೋಕಸಭೆಯಲ್ಲಿ ಶ್ರೀ ನಂಬಿಯಾರ್ರವರಿಗೆ ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂಸತ್ತಿಗೆ ಮಹಾಜನ್ ವರದಿ; ರಾಜ್ಯ ಎಂ.ಪಿಗಳ ಟೀಕೆ</strong></p>.<p><strong>ನವದೆಹಲಿ, ನ. 12–</strong> ಆಡಳಿತ ಕಾಂಗ್ರೆಸ್ಸಿಗೆ ಸೇರದ ಸಂಸತ್ತಿನ ಮೈಸೂರು ಎಂ.ಪಿಗಳು ಇಂದು ಹೇಳಿಕೆಯೊಂದನ್ನು ನೀಡಿ, ಮಹಾಜನ್ ಆಯೋಗದ ವರದಿಯ ಬಗೆಗೆ ಸಂಸತ್ತಿನ ಬಿಚ್ಚು ಅಭಿಪ್ರಾಯ ಪಡೆಯಬೇಕೆಂಬ ರಾಜ್ಯದ ಆಡಳಿತ ಕಾಂಗ್ರೆಸ್ ಸಂಸತ್ ಸದಸ್ಯರ ಸಲಹೆಯನ್ನು ಖಂಡಿಸಿದ್ದಾರೆ.</p>.<p>ಈ ಹೇಳಿಕೆಗೆ ಸಂಸ್ಥಾ ಕಾಂಗ್ರೆಸ್, ಸ್ವತಂತ್ರ ಪಕ್ಷ ಮತ್ತು ಪಕ್ಷೇತರ ಎಂ.ಪಿಗಳು ಸಹಿ ಹಾಕಿದ್ದಾರೆ.</p>.<p>ಶ್ರೀ ಡಿ. ದೇವರಾಜ ಅರಸ್ರವರ ನಾಯಕತ್ವದಲ್ಲಿ ಆಡಳಿತ ಕಾಂಗ್ರೆಸ್ ನಿಯೋಗವೊಂದು ಪ್ರತ್ಯೇಕವಾಗಿ ಪ್ರಧಾನಿಯನ್ನು ಭೇಟಿ ಮಾಡಿದ್ದಕ್ಕೂ ಈ ಹೇಳಿಕೆಯಲ್ಲಿ ಆಕ್ಷೇಪಿಸಲಾಗಿದೆ.</p>.<p><strong>ರಾಜ್ಯ ಸಚಿವರ ಫೋನ್ ಅಕ್ರಮ ಬಳಕೆ ಶಂಕೆ</strong></p>.<p><strong>ನವದೆಹಲಿ, ನ. 12– </strong>ಮೈಸೂರು ಸರ್ಕಾರದ ಕೆಲವು ಸಚಿವರ ಖಾಸಗಿ ಟೆಲಿಫೋನ್ಗಳ ಅಕ್ರಮ ಬಳಕೆಯಾಗುತ್ತಿದೆ</p>.<p>ಎಂದು ಅನುಮಾನಿಸಲಾಗಿದ್ದು ಇದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ವಾರ್ತಾ, ಪ್ರಸಾರ ಮತ್ತು ಸಂಪರ್ಕ ಶಾಖೆ ಸಚಿವ ಶ್ರೀ ಸತ್ಯನಾರಾಯಣ ಸಿನ್ಹಾ ಅವರು ಇಂದು ಲೋಕಸಭೆಯಲ್ಲಿ ಶ್ರೀ ನಂಬಿಯಾರ್ರವರಿಗೆ ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>