ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ: ಶುಕ್ರವಾರ, 13–11–1970

Last Updated 12 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಸಂಸತ್ತಿಗೆ ಮಹಾಜನ್‌ ವರದಿ; ರಾಜ್ಯ ಎಂ.ಪಿಗಳ ಟೀಕೆ

ನವದೆಹಲಿ, ನ. 12– ಆಡಳಿತ ಕಾಂಗ್ರೆಸ್ಸಿಗೆ ಸೇರದ ಸಂಸತ್ತಿನ ಮೈಸೂರು ಎಂ.ಪಿಗಳು ಇಂದು ಹೇಳಿಕೆಯೊಂದನ್ನು ನೀಡಿ, ಮಹಾಜನ್‌ ಆಯೋಗದ ವರದಿಯ ಬಗೆಗೆ ಸಂಸತ್ತಿನ ಬಿಚ್ಚು ಅಭಿಪ್ರಾಯ ಪಡೆಯಬೇಕೆಂಬ ರಾಜ್ಯದ ಆಡಳಿತ ಕಾಂಗ್ರೆಸ್‌ ಸಂಸತ್‌ ಸದಸ್ಯರ ಸಲಹೆಯನ್ನು ಖಂಡಿಸಿದ್ದಾರೆ.

ಈ ಹೇಳಿಕೆಗೆ ಸಂಸ್ಥಾ ಕಾಂಗ್ರೆಸ್‌, ಸ್ವತಂತ್ರ ಪಕ್ಷ ಮತ್ತು ಪಕ್ಷೇತರ ಎಂ.ಪಿಗಳು ಸಹಿ ಹಾಕಿದ್ದಾರೆ.

ಶ್ರೀ ಡಿ. ದೇವರಾಜ ಅರಸ್‌ರವರ ನಾಯಕತ್ವದಲ್ಲಿ ಆಡಳಿತ ಕಾಂಗ್ರೆಸ್‌ ನಿಯೋಗವೊಂದು ಪ್ರತ್ಯೇಕವಾಗಿ ಪ್ರಧಾನಿಯನ್ನು ಭೇಟಿ ಮಾಡಿದ್ದಕ್ಕೂ ಈ ಹೇಳಿಕೆಯಲ್ಲಿ ಆಕ್ಷೇಪಿಸಲಾಗಿದೆ.

ರಾಜ್ಯ ಸಚಿವರ ಫೋನ್‌ ಅಕ್ರಮ ಬಳಕೆ ಶಂಕೆ

ನವದೆಹಲಿ, ನ. 12– ಮೈಸೂರು ಸರ್ಕಾರದ ಕೆಲವು ಸಚಿವರ ಖಾಸಗಿ ಟೆಲಿಫೋನ್‌ಗಳ ಅಕ್ರಮ ಬಳಕೆಯಾಗುತ್ತಿದೆ

ಎಂದು ಅನುಮಾನಿಸಲಾಗಿದ್ದು ಇದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ವಾರ್ತಾ, ಪ್ರಸಾರ ಮತ್ತು ಸಂಪರ್ಕ ಶಾಖೆ ಸಚಿವ ಶ್ರೀ ಸತ್ಯನಾರಾಯಣ ಸಿನ್ಹಾ ಅವರು ಇಂದು ಲೋಕಸಭೆಯಲ್ಲಿ ಶ್ರೀ ನಂಬಿಯಾರ್‌ರವರಿಗೆ ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT