ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ | ಮಂಗಳವಾರ, 5–1–1971

Last Updated 4 ಜನವರಿ 2021, 19:30 IST
ಅಕ್ಷರ ಗಾತ್ರ

ದೃಷ್ಟಿವೈಶಾಲ್ಯಕ್ಕೆ ನ್ಯಾಯಾಧೀಶರಿಗೆ ರಾಷ್ಟ್ರಪತಿ ಕರೆ

ನವದೆಹಲಿ, ಜ. 4– ನ್ಯಾಯಾಧೀಶರು ಕಾನೂನು ವಿಷಯ ಕುರಿತು ನೀಡುವ ತಮ್ಮ ತೀರ್ಪುಗಳಲ್ಲಿ ಅಮೆರಿಕದ ನ್ಯಾಯಧೀಶರೊಬ್ಬರು ವಿವರಿಸಿರುವಂತೆ ‘ದೃಷ್ಟಿವೈಶಾಲ್ಯ ಹಾಗೂ ಮನೋಭಾವದಲ್ಲಿ ರೂಢಿ ಮೂಲವಾಗಿದ್ದು, ಶಿಸ್ತಿನಿಂದ ಬಲಗೊಂಡಿರುವಂಥ ಅಜೇಯ ಅನಾಸಕ್ತಿ’ ಪ್ರದರ್ಶಿಸುವವರೆಂಬ ಆಶಯವನ್ನು ರಾಷ್ಟ್ರಪತಿ ವಿ.ವಿ.ಗಿರಿ ಅವರು ಇಂದು ವ್ಯಕ್ತಪಡಿಸಿದರು.

ಕಾಮನ್‌ವೆಲ್ತ್‌ ರಾಷ್ಟ್ರಗಳ ಶ್ರೇಷ್ಠ ನ್ಯಾಯಾಧೀಶರುಗಳ ಮೂರನೇ ಸಮ್ಮೇಳನ ಉದ್ಘಾಟಿಸಿದ ಗಿರಿ ಅವರು, ‘ಜಡ ಗ್ರಂಥವಾಗಿ ಉಳಿದಿರಬೇಕೆಂಬ ಉದ್ದೇಶದಿಂದ ಸಂವಿಧಾನ ರಚಿಸುವುದಿಲ್ಲ‘ ಎಂದರು.

ಚುನಾವಣೆಗಾಗಿ ಅಧಿಕಾರ ದುರುಪಯೋಗ ವಿರುದ್ಧ ರಾಷ್ಟ್ರಪತಿ ಕ್ರಮಕ್ಕೆ ಆಗ್ರಹ

ನವದೆಹಲಿ, ಜ. 4– ಲೋಕಸಭೆಗೆ ನಡೆಯುವ ಮಧ್ಯಕಾಲೀನ ಚುನಾವಣೆಗಳಲ್ಲಿ ಸರ್ಕಾರವು ಅಧಿಕಾರ ದುರುಪಯೋಗಪಡಿಸಿಕೊಳ್ಳದಂತೆ ತುರ್ತುಕ್ರಮ ತೆಗೆದುಕೊಳ್ಳಬೇಕೆಂದು ಸಂಸ್ಥಾ ಕಾಂಗ್ರೆಸ್‌, ಜನಸಂಘ, ಎಸ್‌.ಎಸ್‌.ಪಿ ಮತ್ತು ಸ್ವತಂತ್ರ ಪಕ್ಷದ ನಾಯಕರು ಇಂದು ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಅವರನ್ನು ಭೇಟಿ ಮಾಡಿ ಒತ್ತಾಯ ಹಾಕಿದರು.

ರಾಷ್ಟ್ರಪತಿಗೆ ಸಲ್ಲಿಸಿದ ಮನವಿ ಪತ್ರವೊಂದರಲ್ಲಿ ಅವರು, ಸರ್ಕಾರದ ಚಟುವಟಿಕೆಗಳನ್ನು ಪರಿಶೀಲಿಸಿ ಹತೋಟಿಯಲ್ಲಿಡಲು ಶೀಘ್ರದಲ್ಲೇ ರಾಜ್ಯಸಭೆಯನ್ನು ಕರೆಯಬೇಕೆಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT