<p><strong>ದೃಷ್ಟಿವೈಶಾಲ್ಯಕ್ಕೆ ನ್ಯಾಯಾಧೀಶರಿಗೆ ರಾಷ್ಟ್ರಪತಿ ಕರೆ</strong></p>.<p><strong>ನವದೆಹಲಿ, ಜ. 4– </strong>ನ್ಯಾಯಾಧೀಶರು ಕಾನೂನು ವಿಷಯ ಕುರಿತು ನೀಡುವ ತಮ್ಮ ತೀರ್ಪುಗಳಲ್ಲಿ ಅಮೆರಿಕದ ನ್ಯಾಯಧೀಶರೊಬ್ಬರು ವಿವರಿಸಿರುವಂತೆ ‘ದೃಷ್ಟಿವೈಶಾಲ್ಯ ಹಾಗೂ ಮನೋಭಾವದಲ್ಲಿ ರೂಢಿ ಮೂಲವಾಗಿದ್ದು, ಶಿಸ್ತಿನಿಂದ ಬಲಗೊಂಡಿರುವಂಥ ಅಜೇಯ ಅನಾಸಕ್ತಿ’ ಪ್ರದರ್ಶಿಸುವವರೆಂಬ ಆಶಯವನ್ನು ರಾಷ್ಟ್ರಪತಿ ವಿ.ವಿ.ಗಿರಿ ಅವರು ಇಂದು ವ್ಯಕ್ತಪಡಿಸಿದರು.</p>.<p>ಕಾಮನ್ವೆಲ್ತ್ ರಾಷ್ಟ್ರಗಳ ಶ್ರೇಷ್ಠ ನ್ಯಾಯಾಧೀಶರುಗಳ ಮೂರನೇ ಸಮ್ಮೇಳನ ಉದ್ಘಾಟಿಸಿದ ಗಿರಿ ಅವರು, ‘ಜಡ ಗ್ರಂಥವಾಗಿ ಉಳಿದಿರಬೇಕೆಂಬ ಉದ್ದೇಶದಿಂದ ಸಂವಿಧಾನ ರಚಿಸುವುದಿಲ್ಲ‘ ಎಂದರು.</p>.<p><strong>ಚುನಾವಣೆಗಾಗಿ ಅಧಿಕಾರ ದುರುಪಯೋಗ ವಿರುದ್ಧ ರಾಷ್ಟ್ರಪತಿ ಕ್ರಮಕ್ಕೆ ಆಗ್ರಹ</strong></p>.<p><strong>ನವದೆಹಲಿ, ಜ. 4– </strong>ಲೋಕಸಭೆಗೆ ನಡೆಯುವ ಮಧ್ಯಕಾಲೀನ ಚುನಾವಣೆಗಳಲ್ಲಿ ಸರ್ಕಾರವು ಅಧಿಕಾರ ದುರುಪಯೋಗಪಡಿಸಿಕೊಳ್ಳದಂತೆ ತುರ್ತುಕ್ರಮ ತೆಗೆದುಕೊಳ್ಳಬೇಕೆಂದು ಸಂಸ್ಥಾ ಕಾಂಗ್ರೆಸ್, ಜನಸಂಘ, ಎಸ್.ಎಸ್.ಪಿ ಮತ್ತು ಸ್ವತಂತ್ರ ಪಕ್ಷದ ನಾಯಕರು ಇಂದು ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಅವರನ್ನು ಭೇಟಿ ಮಾಡಿ ಒತ್ತಾಯ ಹಾಕಿದರು.</p>.<p>ರಾಷ್ಟ್ರಪತಿಗೆ ಸಲ್ಲಿಸಿದ ಮನವಿ ಪತ್ರವೊಂದರಲ್ಲಿ ಅವರು, ಸರ್ಕಾರದ ಚಟುವಟಿಕೆಗಳನ್ನು ಪರಿಶೀಲಿಸಿ ಹತೋಟಿಯಲ್ಲಿಡಲು ಶೀಘ್ರದಲ್ಲೇ ರಾಜ್ಯಸಭೆಯನ್ನು ಕರೆಯಬೇಕೆಂದು ಕೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೃಷ್ಟಿವೈಶಾಲ್ಯಕ್ಕೆ ನ್ಯಾಯಾಧೀಶರಿಗೆ ರಾಷ್ಟ್ರಪತಿ ಕರೆ</strong></p>.<p><strong>ನವದೆಹಲಿ, ಜ. 4– </strong>ನ್ಯಾಯಾಧೀಶರು ಕಾನೂನು ವಿಷಯ ಕುರಿತು ನೀಡುವ ತಮ್ಮ ತೀರ್ಪುಗಳಲ್ಲಿ ಅಮೆರಿಕದ ನ್ಯಾಯಧೀಶರೊಬ್ಬರು ವಿವರಿಸಿರುವಂತೆ ‘ದೃಷ್ಟಿವೈಶಾಲ್ಯ ಹಾಗೂ ಮನೋಭಾವದಲ್ಲಿ ರೂಢಿ ಮೂಲವಾಗಿದ್ದು, ಶಿಸ್ತಿನಿಂದ ಬಲಗೊಂಡಿರುವಂಥ ಅಜೇಯ ಅನಾಸಕ್ತಿ’ ಪ್ರದರ್ಶಿಸುವವರೆಂಬ ಆಶಯವನ್ನು ರಾಷ್ಟ್ರಪತಿ ವಿ.ವಿ.ಗಿರಿ ಅವರು ಇಂದು ವ್ಯಕ್ತಪಡಿಸಿದರು.</p>.<p>ಕಾಮನ್ವೆಲ್ತ್ ರಾಷ್ಟ್ರಗಳ ಶ್ರೇಷ್ಠ ನ್ಯಾಯಾಧೀಶರುಗಳ ಮೂರನೇ ಸಮ್ಮೇಳನ ಉದ್ಘಾಟಿಸಿದ ಗಿರಿ ಅವರು, ‘ಜಡ ಗ್ರಂಥವಾಗಿ ಉಳಿದಿರಬೇಕೆಂಬ ಉದ್ದೇಶದಿಂದ ಸಂವಿಧಾನ ರಚಿಸುವುದಿಲ್ಲ‘ ಎಂದರು.</p>.<p><strong>ಚುನಾವಣೆಗಾಗಿ ಅಧಿಕಾರ ದುರುಪಯೋಗ ವಿರುದ್ಧ ರಾಷ್ಟ್ರಪತಿ ಕ್ರಮಕ್ಕೆ ಆಗ್ರಹ</strong></p>.<p><strong>ನವದೆಹಲಿ, ಜ. 4– </strong>ಲೋಕಸಭೆಗೆ ನಡೆಯುವ ಮಧ್ಯಕಾಲೀನ ಚುನಾವಣೆಗಳಲ್ಲಿ ಸರ್ಕಾರವು ಅಧಿಕಾರ ದುರುಪಯೋಗಪಡಿಸಿಕೊಳ್ಳದಂತೆ ತುರ್ತುಕ್ರಮ ತೆಗೆದುಕೊಳ್ಳಬೇಕೆಂದು ಸಂಸ್ಥಾ ಕಾಂಗ್ರೆಸ್, ಜನಸಂಘ, ಎಸ್.ಎಸ್.ಪಿ ಮತ್ತು ಸ್ವತಂತ್ರ ಪಕ್ಷದ ನಾಯಕರು ಇಂದು ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಅವರನ್ನು ಭೇಟಿ ಮಾಡಿ ಒತ್ತಾಯ ಹಾಕಿದರು.</p>.<p>ರಾಷ್ಟ್ರಪತಿಗೆ ಸಲ್ಲಿಸಿದ ಮನವಿ ಪತ್ರವೊಂದರಲ್ಲಿ ಅವರು, ಸರ್ಕಾರದ ಚಟುವಟಿಕೆಗಳನ್ನು ಪರಿಶೀಲಿಸಿ ಹತೋಟಿಯಲ್ಲಿಡಲು ಶೀಘ್ರದಲ್ಲೇ ರಾಜ್ಯಸಭೆಯನ್ನು ಕರೆಯಬೇಕೆಂದು ಕೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>