<h3><strong>ಭೂಕಂಪ: 16,000ಕ್ಕೂ ಹೆಚ್ಚು ಬಲಿ</strong></h3>.<p>ಗಾಂಧಿನಗರ, ಜ. 27 (ಪಿಟಿಐ, ಯುಎನ್ಐ)– ಶುಕ್ರವಾರ ಬೆಳಿಗ್ಗೆ ಭೀಕರ ಭೂಕಂಪಕ್ಕೆ ಸಿಕ್ಕಿ ತತ್ತರಿಸಿರುವ ಗುಜರಾತಿನಲ್ಲಿ ಇಂದು ಇನ್ನಷ್ಟು ಲಘು ಕಂಪನಗಳು ಸಂಭವಿಸಿದ್ದು, ಸತ್ತವರ ಸಂಖ್ಯೆ 16,000ಕ್ಕೂ ಹೆಚ್ಚಾಗಿರುವ ಸಾಧ್ಯತೆಗಳಿವೆ.</p>.<p>ಕುಸಿದುಬಿದ್ದ ಕಟ್ಟಡಗಳ ಅಡಿ ಇನ್ನೂ ಸಾವಿರಾರು ಮಂದಿ ಸಿಲುಕಿ ಹಾಕಿಕೊಂಡಿದ್ದು, ಅವರನ್ನು ಹೊರೆತೆಗೆಯುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.</p>.<p>ಭೂಕಂಪಪೀಡಿತ ಕಚ್ ಜಿಲ್ಲೆಗೆ ಭೇಟಿ ನೀಡಿ ವಾಪಸಾಗಿರುವ ಗುಜರಾತಿನ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್, ಕಚ್ ಜಿಲ್ಲೆಯೊಂದರಲ್ಲೇ 15 ಸಾವಿರಕ್ಕೂ ಹೆಚ್ಚು ಜನರು ಸತ್ತಿರುವ ಶಂಕೆ ವ್ಯಕ್ತಪಡಿಸಿದರು.</p>.<h3><strong>ಕೃಷಿ ಪಂಪ್ಸೆಟ್ಗಳಿಗೆ ವಿನಾಯಿತಿ</strong></h3>.<p>ಬೆಂಗಳೂರು, ಜ. 27– ರಾಜ್ಯದಲ್ಲಿ ಕಳೆದ ತಿಂಗಳ 29ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿದ್ದ ವಿದ್ಯುತ್ ದರ ಏರಿಕೆಯಿಂದ ರೈತರ ಕೃಷಿ ಪಂಪ್ಸೆಟ್ಗಳಿಗೆ ವಿನಾಯಿತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಈ ವಿನಾಯಿತಿ ಒಂದು ವರ್ಷದವರೆಗೆ ಜಾರಿಯಲ್ಲಿರುತ್ತದೆ.</p>.<p>ಏರಿಸಿರುವ ದರವನ್ನು ರೈತರ ಪರವಾಗಿ ಸರ್ಕಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಕ್ಕೆ (ಕೆಪಿಟಿಸಿಎಲ್) ಭರಿಸಬೇಕಾಗುತ್ತದೆ. ಈ ತೀರ್ಮಾನದಿಂದ ಒಂದು ಎಚ್ಪಿಗೆ ವರ್ಷಕ್ಕೆ ರೂ. 240ರಂತೆ ಸರ್ಕಾರ ರೈತರಿಗೆ ಸಬ್ಸಿಡಿ ನೀಡಬೇಕಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h3><strong>ಭೂಕಂಪ: 16,000ಕ್ಕೂ ಹೆಚ್ಚು ಬಲಿ</strong></h3>.<p>ಗಾಂಧಿನಗರ, ಜ. 27 (ಪಿಟಿಐ, ಯುಎನ್ಐ)– ಶುಕ್ರವಾರ ಬೆಳಿಗ್ಗೆ ಭೀಕರ ಭೂಕಂಪಕ್ಕೆ ಸಿಕ್ಕಿ ತತ್ತರಿಸಿರುವ ಗುಜರಾತಿನಲ್ಲಿ ಇಂದು ಇನ್ನಷ್ಟು ಲಘು ಕಂಪನಗಳು ಸಂಭವಿಸಿದ್ದು, ಸತ್ತವರ ಸಂಖ್ಯೆ 16,000ಕ್ಕೂ ಹೆಚ್ಚಾಗಿರುವ ಸಾಧ್ಯತೆಗಳಿವೆ.</p>.<p>ಕುಸಿದುಬಿದ್ದ ಕಟ್ಟಡಗಳ ಅಡಿ ಇನ್ನೂ ಸಾವಿರಾರು ಮಂದಿ ಸಿಲುಕಿ ಹಾಕಿಕೊಂಡಿದ್ದು, ಅವರನ್ನು ಹೊರೆತೆಗೆಯುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.</p>.<p>ಭೂಕಂಪಪೀಡಿತ ಕಚ್ ಜಿಲ್ಲೆಗೆ ಭೇಟಿ ನೀಡಿ ವಾಪಸಾಗಿರುವ ಗುಜರಾತಿನ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್, ಕಚ್ ಜಿಲ್ಲೆಯೊಂದರಲ್ಲೇ 15 ಸಾವಿರಕ್ಕೂ ಹೆಚ್ಚು ಜನರು ಸತ್ತಿರುವ ಶಂಕೆ ವ್ಯಕ್ತಪಡಿಸಿದರು.</p>.<h3><strong>ಕೃಷಿ ಪಂಪ್ಸೆಟ್ಗಳಿಗೆ ವಿನಾಯಿತಿ</strong></h3>.<p>ಬೆಂಗಳೂರು, ಜ. 27– ರಾಜ್ಯದಲ್ಲಿ ಕಳೆದ ತಿಂಗಳ 29ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿದ್ದ ವಿದ್ಯುತ್ ದರ ಏರಿಕೆಯಿಂದ ರೈತರ ಕೃಷಿ ಪಂಪ್ಸೆಟ್ಗಳಿಗೆ ವಿನಾಯಿತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಈ ವಿನಾಯಿತಿ ಒಂದು ವರ್ಷದವರೆಗೆ ಜಾರಿಯಲ್ಲಿರುತ್ತದೆ.</p>.<p>ಏರಿಸಿರುವ ದರವನ್ನು ರೈತರ ಪರವಾಗಿ ಸರ್ಕಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಕ್ಕೆ (ಕೆಪಿಟಿಸಿಎಲ್) ಭರಿಸಬೇಕಾಗುತ್ತದೆ. ಈ ತೀರ್ಮಾನದಿಂದ ಒಂದು ಎಚ್ಪಿಗೆ ವರ್ಷಕ್ಕೆ ರೂ. 240ರಂತೆ ಸರ್ಕಾರ ರೈತರಿಗೆ ಸಬ್ಸಿಡಿ ನೀಡಬೇಕಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>