ಸಚಿವ ಶಾಣಪ್ಪ ಅವರ ಅನಿರೀಕ್ಷಿತ ರಾಜೀನಾಮೆ ಪಕ್ಷದಲ್ಲಿ ಸ್ವಲ್ಪ ಮಟ್ಟಿಗೆ ಗೊಂದಲ ಸೃಷ್ಟಿಸಿತಾದರೂ, ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರಿಗೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಕ್ತ ಅವಕಾಶ ಮಾಡಿಕೊಟ್ಟಿತು. ಶಾಣಪ್ಪ ಅವರು ನಾಮಕರಣ ಸದಸ್ಯರಾಗಿ ಪುನಃ ಅಧಿಕಾರ ವಹಿಸಿಕೊಳ್ಳುವವರೆಗೆ ಮುಖ್ಯಮಂತ್ರಿ ಅವರು ಅಬಕಾರಿ ಖಾತೆಯನ್ನು ತಾವೇ ವಹಿಸಿಕೊಳ್ಳುವರು ಎಂದು ಹೇಳಲಾಗಿದೆ.