<p id="thickbox_headline"><strong>ಲಾಲೂ ಜತೆ ಸಂಘರ್ಷ ಒಲ್ಲದ ದಳ ಧುರೀಣರು</strong></p>.<p><strong>ನವದೆಹಲಿ, ಜೂನ್ 24 (ಪಿಟಿಐ, ಯುಎನ್ಐ) – </strong>ಪಕ್ಷದ ಅಧ್ಯಕ್ಷ ಹಾಗೂ ಬಿಹಾರದ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಜತೆ ಸಂಘರ್ಷಕ್ಕೆ ಇಳಿದರೆ ಪಕ್ಷವು ವಿಭಜನೆ ಯಾಗುವ ಸಾಧ್ಯತೆ ಇರುವ ಕಾರಣ, ಪದತ್ಯಾಗಕ್ಕೆ ಲಾಲೂ ಅವರ ಮನವೊಲಿಸುವುದೇ ಉಚಿತವೆಂಬ ನಿಲುವು ದಳದ ಹಿರಿಯ ಮುಖಂಡರದು ಎನ್ನಲಾಗಿದೆ.</p>.<p>ಮೇವು ಹಗರಣದಲ್ಲಿ ಸಿಬಿಐ ಆರೋಪ ಪಟ್ಟಿ ಸಲ್ಲಿಸಿದ ಮೇಲೆ ನೈತಿಕ ಕಾರಣದಿಂದ ಲಾಲೂ ರಾಜೀನಾಮೆ ನೀಡಬೇಕು ಎಂದು ರೈಲ್ವೇ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರ ಮನೆಯಲ್ಲಿ ನಿನ್ನೆ ರಾತ್ರಿ ಸಭೆ ಸೇರಿದ್ದ ಜನತಾದಳದ ಹಿರಿಯ ನಾಯಕರು ಅಭಿಪ್ರಾಯಪಟ್ಟರಾದರೂ ಈ ಹಂತದಲ್ಲಿ ಲಾಲೂ ಅವರನ್ನು ಏಕಾಂಗಿಯನ್ನಾಗಿ ಮಾಡಬಾರದು ಎಂಬ ನಿಲುವನ್ನೂ ತಳೆದರು ಎಂದು ದಳದ ಮೂಲಗಳು ತಿಳಸವೆ.</p>.<p>‘ಲಾಲೂ ಅವರನ್ನು ಮೂಲೆಗುಂಪು ಮಾಡಿ, ದಳದ ವಿಭಜನೆಗೆ ಅವಕಾಶ ಮಾಡಿಕೊಡಬಾರದು’ ಎಂದು ಮುಖಂಡರೊಬ್ಬರು ಹೇಳಿದ್ದಾರೆ.</p>.<p><strong>ಕಾರು ಅಪಘಾತ: ಕಾಂಗ್ರೆಸ್ ಶಾಸಕ ಸಾವು</strong></p>.<p><strong>ಧಾರವಾಡ ಜೂನ್, 24 – </strong>ಧಾರವಾಡದ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀಕಾಂತ್ ರುದ್ರಪ್ಪ ಅಂಬಡಗಟ್ಟಿ ಅವರು ನಿನ್ನೆ ಮಧ್ಯರಾತ್ರಿ ಬೆಳಗಾವಿ–ಧಾರವಾಡ ರಸ್ತೆಯಲ್ಲಿ ತೇಗೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಧರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p id="thickbox_headline"><strong>ಲಾಲೂ ಜತೆ ಸಂಘರ್ಷ ಒಲ್ಲದ ದಳ ಧುರೀಣರು</strong></p>.<p><strong>ನವದೆಹಲಿ, ಜೂನ್ 24 (ಪಿಟಿಐ, ಯುಎನ್ಐ) – </strong>ಪಕ್ಷದ ಅಧ್ಯಕ್ಷ ಹಾಗೂ ಬಿಹಾರದ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಜತೆ ಸಂಘರ್ಷಕ್ಕೆ ಇಳಿದರೆ ಪಕ್ಷವು ವಿಭಜನೆ ಯಾಗುವ ಸಾಧ್ಯತೆ ಇರುವ ಕಾರಣ, ಪದತ್ಯಾಗಕ್ಕೆ ಲಾಲೂ ಅವರ ಮನವೊಲಿಸುವುದೇ ಉಚಿತವೆಂಬ ನಿಲುವು ದಳದ ಹಿರಿಯ ಮುಖಂಡರದು ಎನ್ನಲಾಗಿದೆ.</p>.<p>ಮೇವು ಹಗರಣದಲ್ಲಿ ಸಿಬಿಐ ಆರೋಪ ಪಟ್ಟಿ ಸಲ್ಲಿಸಿದ ಮೇಲೆ ನೈತಿಕ ಕಾರಣದಿಂದ ಲಾಲೂ ರಾಜೀನಾಮೆ ನೀಡಬೇಕು ಎಂದು ರೈಲ್ವೇ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರ ಮನೆಯಲ್ಲಿ ನಿನ್ನೆ ರಾತ್ರಿ ಸಭೆ ಸೇರಿದ್ದ ಜನತಾದಳದ ಹಿರಿಯ ನಾಯಕರು ಅಭಿಪ್ರಾಯಪಟ್ಟರಾದರೂ ಈ ಹಂತದಲ್ಲಿ ಲಾಲೂ ಅವರನ್ನು ಏಕಾಂಗಿಯನ್ನಾಗಿ ಮಾಡಬಾರದು ಎಂಬ ನಿಲುವನ್ನೂ ತಳೆದರು ಎಂದು ದಳದ ಮೂಲಗಳು ತಿಳಸವೆ.</p>.<p>‘ಲಾಲೂ ಅವರನ್ನು ಮೂಲೆಗುಂಪು ಮಾಡಿ, ದಳದ ವಿಭಜನೆಗೆ ಅವಕಾಶ ಮಾಡಿಕೊಡಬಾರದು’ ಎಂದು ಮುಖಂಡರೊಬ್ಬರು ಹೇಳಿದ್ದಾರೆ.</p>.<p><strong>ಕಾರು ಅಪಘಾತ: ಕಾಂಗ್ರೆಸ್ ಶಾಸಕ ಸಾವು</strong></p>.<p><strong>ಧಾರವಾಡ ಜೂನ್, 24 – </strong>ಧಾರವಾಡದ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀಕಾಂತ್ ರುದ್ರಪ್ಪ ಅಂಬಡಗಟ್ಟಿ ಅವರು ನಿನ್ನೆ ಮಧ್ಯರಾತ್ರಿ ಬೆಳಗಾವಿ–ಧಾರವಾಡ ರಸ್ತೆಯಲ್ಲಿ ತೇಗೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಧರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>