<p id="thickbox_headline"><strong>ಕಾಂಗ್ರೆಸ್ ಬೆಂಬಲ ವಾಪಸ್; ಗುಜ್ರಾಲ್ ರಾಜೀನಾಮೆ</strong></p>.<p><strong>ನವದೆಹಲಿ, ನವೆಂಬರ್ 28– </strong>ಸಂಯುಕ್ತರಂಗ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್ ಇಂದು ಸಂಜೆ ವಾಪಸು ಪಡೆದಿದ್ದರಿಂದಾಗಿ ಪ್ರಧಾನಿ ಐ.ಕೆ. ಗುಜ್ರಾಲ್ ನೇತೃತ್ವದ 7 ತಿಂಗಳ ಸರ್ಕಾರ ಪತನವಾಯಿತು. ಪ್ರಧಾನಿ ಗುಜ್ರಾಲ್ ಅವರು ಸಲ್ಲಿಸಿದ ರಾಜೀನಾಮೆಯನ್ನು ರಾಷ್ಟ್ರಪತಿ ಅವರು ರಾತ್ರಿ ಅಂಗೀಕರಿಸಿದರು.</p>.<p>ಗುಜ್ರಾಲ್ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗೆ ಇಂದು ರಾತ್ರಿ ಸಲ್ಲಿಸಿದ್ದಾರೆ. ಅವರ ರಾಜೀನಾಮೆಯನ್ನು ಅಂಗೀಕರಿಸಿದ ರಾಷ್ಟ್ರಪತಿ ಅವರು ಮುಂದಿನ ವ್ಯವಸ್ಥೆಯಾಗುವವರೆಗೆ ಅಧಿಕಾರದಲ್ಲಿ ಮುಂದುವರಿಯಲು ಗುಜ್ರಾಲ್ ಅವರಿಗೆ ಸೂಚಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.</p>.<p><strong>lಯಾವ ಪಕ್ಷದ ಸರ್ಕಾರಕ್ಕೂ ಸಂಯುಕ್ತರಂಗದ ಬೆಂಬಲವಿಲ್ಲ</strong></p>.<p><strong>ನವದೆಹಲಿ, ನವೆಂಬರ್ 28– </strong>ಅಧಿಕಾರ ಕಳೆದುಕೊಂಡ 160 ಸದಸ್ಯ ಬಲವುಳ್ಳ ಹದಿನಾಲ್ಕು ಪಕ್ಷಗಳ ಸಂಯುಕ್ತರಂಗವು ಬಿಜೆಪಿ ಅಥವಾ ಕಾಂಗ್ರೆಸ್ ಅಥವಾ ಬಿಜೆಪಿ ಬೆಂಬಲ ಪಡೆದು ರಚಿಸುವ ಯಾವುದೇ ಸರ್ಕಾರಕ್ಕೂ ತನ್ನ ಬೆಂಬಲವನ್ನು ನೀಡದಿರಲು ನಿರ್ಧರಿಸಿದೆ.</p>.<p>ಸಂಯುಕ್ತರಂಗದಲ್ಲಿನ ಪ್ರತಿ ಯೊಂದು ಪಕ್ಷದಿಂದ ಪಡೆದಿರುವ ಈ ಲಿಖಿತ ನಿರ್ಧಾರವನ್ನು ರಂಗದ ಸಂಚಾಲಕ ಎನ್.ಚಂದ್ರಬಾಬು ನಾಯ್ಡು ಅವರು, ರಂಗದ ಎಲ್ಲ ನಾಯಕರ ನಿಯೋಗವನ್ನು ರಾಷ್ಟ್ರಪತಿ ಭವನಕ್ಕೆ ಕರೆದೊಯ್ದು ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರಿಗೆ ಪತ್ರವೊಂದನ್ನು ಸಲ್ಲಿಸುವ ಮೂಲಕ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p id="thickbox_headline"><strong>ಕಾಂಗ್ರೆಸ್ ಬೆಂಬಲ ವಾಪಸ್; ಗುಜ್ರಾಲ್ ರಾಜೀನಾಮೆ</strong></p>.<p><strong>ನವದೆಹಲಿ, ನವೆಂಬರ್ 28– </strong>ಸಂಯುಕ್ತರಂಗ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್ ಇಂದು ಸಂಜೆ ವಾಪಸು ಪಡೆದಿದ್ದರಿಂದಾಗಿ ಪ್ರಧಾನಿ ಐ.ಕೆ. ಗುಜ್ರಾಲ್ ನೇತೃತ್ವದ 7 ತಿಂಗಳ ಸರ್ಕಾರ ಪತನವಾಯಿತು. ಪ್ರಧಾನಿ ಗುಜ್ರಾಲ್ ಅವರು ಸಲ್ಲಿಸಿದ ರಾಜೀನಾಮೆಯನ್ನು ರಾಷ್ಟ್ರಪತಿ ಅವರು ರಾತ್ರಿ ಅಂಗೀಕರಿಸಿದರು.</p>.<p>ಗುಜ್ರಾಲ್ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗೆ ಇಂದು ರಾತ್ರಿ ಸಲ್ಲಿಸಿದ್ದಾರೆ. ಅವರ ರಾಜೀನಾಮೆಯನ್ನು ಅಂಗೀಕರಿಸಿದ ರಾಷ್ಟ್ರಪತಿ ಅವರು ಮುಂದಿನ ವ್ಯವಸ್ಥೆಯಾಗುವವರೆಗೆ ಅಧಿಕಾರದಲ್ಲಿ ಮುಂದುವರಿಯಲು ಗುಜ್ರಾಲ್ ಅವರಿಗೆ ಸೂಚಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.</p>.<p><strong>lಯಾವ ಪಕ್ಷದ ಸರ್ಕಾರಕ್ಕೂ ಸಂಯುಕ್ತರಂಗದ ಬೆಂಬಲವಿಲ್ಲ</strong></p>.<p><strong>ನವದೆಹಲಿ, ನವೆಂಬರ್ 28– </strong>ಅಧಿಕಾರ ಕಳೆದುಕೊಂಡ 160 ಸದಸ್ಯ ಬಲವುಳ್ಳ ಹದಿನಾಲ್ಕು ಪಕ್ಷಗಳ ಸಂಯುಕ್ತರಂಗವು ಬಿಜೆಪಿ ಅಥವಾ ಕಾಂಗ್ರೆಸ್ ಅಥವಾ ಬಿಜೆಪಿ ಬೆಂಬಲ ಪಡೆದು ರಚಿಸುವ ಯಾವುದೇ ಸರ್ಕಾರಕ್ಕೂ ತನ್ನ ಬೆಂಬಲವನ್ನು ನೀಡದಿರಲು ನಿರ್ಧರಿಸಿದೆ.</p>.<p>ಸಂಯುಕ್ತರಂಗದಲ್ಲಿನ ಪ್ರತಿ ಯೊಂದು ಪಕ್ಷದಿಂದ ಪಡೆದಿರುವ ಈ ಲಿಖಿತ ನಿರ್ಧಾರವನ್ನು ರಂಗದ ಸಂಚಾಲಕ ಎನ್.ಚಂದ್ರಬಾಬು ನಾಯ್ಡು ಅವರು, ರಂಗದ ಎಲ್ಲ ನಾಯಕರ ನಿಯೋಗವನ್ನು ರಾಷ್ಟ್ರಪತಿ ಭವನಕ್ಕೆ ಕರೆದೊಯ್ದು ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರಿಗೆ ಪತ್ರವೊಂದನ್ನು ಸಲ್ಲಿಸುವ ಮೂಲಕ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>