<p id="thickbox_headline"><strong>ಮೇವು ಹಗರಣ: ಲಾಲು ಮನೆಯ ಮೇಲೆ ಸಿಬಿಐ ಹಠಾತ್ ದಾಳಿ</strong></p>.<p><strong>ಪಟ್ನಾ, ಜೂ. 21 (ಪಿಟಿಐ) – </strong>ಮೇವು ಹಗರಣದ ಆರೋಪಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಹಾಗೂ ಅವರ ಬಂಧುಗಳ ಮನೆಗಳ ಮೇಲೆ ಇಂದು ಸಿಬಿಐ ಅಧಿಕಾರಿಗಳು ದಾಳಿ ನಡೆಸಿದರು.</p>.<p>ಗೋಪಾಲ್ಗಂಜ್ ಜಿಲ್ಲೆಯ ಪೂಲ್ವಾರಿ ಹಳ್ಳಿಯಲ್ಲಿರುವ ತಮ್ಮ ಮನೆಯ ಮೇಲೆ ದಾಳಿ ನಡೆದಿದೆ ಎಂಬುದನ್ನು ಸ್ವತಃ ಲಾಲೂ ಪ್ರಸಾದ್ ದೃಢಪಡಿಸಿದ್ದಾರೆ.</p>.<p><strong>ಕೈ’ ಬಲಪಡಿಸುವ ಬದಲು ಕಿತ್ತಾಟವೇ ಹೆಚ್ಚು</strong></p>.<p><strong>ಬೆಂಗಳೂರು, ಜೂನ್ 21 – </strong>ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರ ಚುನಾವಣೆಯು ನ್ಯಾಯಾಲಯದ ಮಧ್ಯಪ್ರವೇಶದಿಂದಾಗಿ ಮುಂದೆ ಹೋದಂತೆಲ್ಲಾ ಪಕ್ಷದೊಳಗಿನ ಒಳಜಗಳ, ಗುಂಪುಗಾರಿಕೆ, ಅಧಿಕಾರಕ್ಕಾಗಿ ಕಿತ್ತಾಡುವ ಕಾಂಗ್ರೆಸ್ಸಿಗರ ಹಳೇ ಚಾಳಿ ಮತ್ತೆ ಮರುಕಳಿಸಿದೆ.</p>.<p>ರಾಜ್ಯದಲ್ಲಿ ಇತ್ತೀಚೆಗೆ ವಿಧಾನಸಭೆಯ ಕೆಲವು ಉಪಚುನಾವಣೆ ಹಾಗೂ ಎಪಿಎಂಸಿ ಚುನಾವಣೆಗಳಲ್ಲಿ ಪಕ್ಷ ಚಿಗುರಿರುವ ಸುಳಿವು ಅರಿತ ರಾಜ್ಯ ನಾಯಕರು ನೆಪ ಮಾತ್ರಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೋರಾಟ<br />ನಡೆಸುತ್ತಿದ್ದಾರೆ. ಇನ್ನು ಆರು ತಿಂಗಳಲ್ಲಿ ಲೋಕಸಭಾ ಚುನಾವಣೆ ಬರಲಿದೆ. ರಾಜ್ಯದಲ್ಲಂತೂ ತಮ್ಮ ಪಕ್ಷ ಹೆಚ್ಚು ಸ್ಥಾನ ಗಳಿಸುವುದು ನಿಶ್ಚಿತ. ನಂತರ ರಾಜ್ಯ ವಿಧಾನಸಭೆಗೂ ಚುನಾವಣೆ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.</p>.<p>ಆದ್ದರಿಂದ ಈಗಲೇ ಅಧ್ಯಕ್ಷರಾದರೆ ಮುಖ್ಯಮಂತ್ರಿ ಸ್ಥಾನ ತಮಗೆ ಕಟ್ಟಿಟ್ಟ ಬುತ್ತಿಯೆಂಬ ದೂರದೃಷ್ಟಿಯ ಲೆಕ್ಕಾಚಾರ ಇದ್ದಂತಿದೆ. ಭವಿಷ್ಯದ ಮುಖ್ಯಮಂತ್ರಿ ಸ್ಥಾನದ ಮೇಲೆ ಎಲ್ಲರ ಕಣ್ಣು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p id="thickbox_headline"><strong>ಮೇವು ಹಗರಣ: ಲಾಲು ಮನೆಯ ಮೇಲೆ ಸಿಬಿಐ ಹಠಾತ್ ದಾಳಿ</strong></p>.<p><strong>ಪಟ್ನಾ, ಜೂ. 21 (ಪಿಟಿಐ) – </strong>ಮೇವು ಹಗರಣದ ಆರೋಪಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಹಾಗೂ ಅವರ ಬಂಧುಗಳ ಮನೆಗಳ ಮೇಲೆ ಇಂದು ಸಿಬಿಐ ಅಧಿಕಾರಿಗಳು ದಾಳಿ ನಡೆಸಿದರು.</p>.<p>ಗೋಪಾಲ್ಗಂಜ್ ಜಿಲ್ಲೆಯ ಪೂಲ್ವಾರಿ ಹಳ್ಳಿಯಲ್ಲಿರುವ ತಮ್ಮ ಮನೆಯ ಮೇಲೆ ದಾಳಿ ನಡೆದಿದೆ ಎಂಬುದನ್ನು ಸ್ವತಃ ಲಾಲೂ ಪ್ರಸಾದ್ ದೃಢಪಡಿಸಿದ್ದಾರೆ.</p>.<p><strong>ಕೈ’ ಬಲಪಡಿಸುವ ಬದಲು ಕಿತ್ತಾಟವೇ ಹೆಚ್ಚು</strong></p>.<p><strong>ಬೆಂಗಳೂರು, ಜೂನ್ 21 – </strong>ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರ ಚುನಾವಣೆಯು ನ್ಯಾಯಾಲಯದ ಮಧ್ಯಪ್ರವೇಶದಿಂದಾಗಿ ಮುಂದೆ ಹೋದಂತೆಲ್ಲಾ ಪಕ್ಷದೊಳಗಿನ ಒಳಜಗಳ, ಗುಂಪುಗಾರಿಕೆ, ಅಧಿಕಾರಕ್ಕಾಗಿ ಕಿತ್ತಾಡುವ ಕಾಂಗ್ರೆಸ್ಸಿಗರ ಹಳೇ ಚಾಳಿ ಮತ್ತೆ ಮರುಕಳಿಸಿದೆ.</p>.<p>ರಾಜ್ಯದಲ್ಲಿ ಇತ್ತೀಚೆಗೆ ವಿಧಾನಸಭೆಯ ಕೆಲವು ಉಪಚುನಾವಣೆ ಹಾಗೂ ಎಪಿಎಂಸಿ ಚುನಾವಣೆಗಳಲ್ಲಿ ಪಕ್ಷ ಚಿಗುರಿರುವ ಸುಳಿವು ಅರಿತ ರಾಜ್ಯ ನಾಯಕರು ನೆಪ ಮಾತ್ರಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೋರಾಟ<br />ನಡೆಸುತ್ತಿದ್ದಾರೆ. ಇನ್ನು ಆರು ತಿಂಗಳಲ್ಲಿ ಲೋಕಸಭಾ ಚುನಾವಣೆ ಬರಲಿದೆ. ರಾಜ್ಯದಲ್ಲಂತೂ ತಮ್ಮ ಪಕ್ಷ ಹೆಚ್ಚು ಸ್ಥಾನ ಗಳಿಸುವುದು ನಿಶ್ಚಿತ. ನಂತರ ರಾಜ್ಯ ವಿಧಾನಸಭೆಗೂ ಚುನಾವಣೆ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.</p>.<p>ಆದ್ದರಿಂದ ಈಗಲೇ ಅಧ್ಯಕ್ಷರಾದರೆ ಮುಖ್ಯಮಂತ್ರಿ ಸ್ಥಾನ ತಮಗೆ ಕಟ್ಟಿಟ್ಟ ಬುತ್ತಿಯೆಂಬ ದೂರದೃಷ್ಟಿಯ ಲೆಕ್ಕಾಚಾರ ಇದ್ದಂತಿದೆ. ಭವಿಷ್ಯದ ಮುಖ್ಯಮಂತ್ರಿ ಸ್ಥಾನದ ಮೇಲೆ ಎಲ್ಲರ ಕಣ್ಣು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>