<p><strong>ಲೋಕಸಭೆಯ 27 ಸ್ಥಾನಗಳಿಗೆ ರಾಜ್ಯದ 250 ಮಂದಿ ಸ್ಪರ್ಧೆ</strong></p>.<p><strong>ಬೆಂಗಳೂರು, ಫೆ. 8–</strong> ಮಧ್ಯಂತರ ಚುನಾವಣೆಯಲ್ಲಿ ಮೈಸೂರು ರಾಜ್ಯದ 27 ಕ್ಷೇತ್ರಗಳಿಂದ ಸುಮಾರು 250 ಮಂದಿ ಅಭ್ಯರ್ಥಿಗಳು ಇಂದು ಸಂಜೆಯವರೆಗೆ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.</p>.<p>ಕೆಲವು ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಿರುವವರ ನಿಖರ ಸಂಖ್ಯೆಯು ಬೆಂಗಳೂರಿಗೆ ತಲುಪಿಲ್ಲವಾದರೂ ಎಲ್ಲ ಕ್ಷೇತ್ರಗಳ ಪ್ರಮುಖ ಅಭ್ಯರ್ಥಿಗಳು ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಾಮಪತ್ರಗಳನ್ನು ಒಪ್ಪಿಸಿದ ವರದಿಗಳು ಬಂದಿವೆ.</p>.<p>ಕಾನೂನು ಮಂತ್ರಿ ಶ್ರೀ ಕೆಂಗಲ್ ಹನುಮಂತಯ್ಯ ಮತ್ತು ಜನಸಂಘದ ಅಭ್ಯರ್ಥಿ ಶ್ರೀ ಗೋಪಾಲಕೃಷ್ಣ ಅಡಿಗ ಅವರು ಪ್ರತಿಸ್ಪರ್ಧಿಗಳಾಗಿರುವ ಬೆಂಗಳೂರು ಕ್ಷೇತ್ರದಿಂದ, ಅವರಿಬ್ಬರನ್ನೊಳಗೊಂಡು ಒಟ್ಟು 22 ಮಂದಿ ಕಣಕ್ಕೆ ಇಳಿದಿದ್ದಾರೆ.</p>.<p><strong>ಪರಸ್ಪರ ಅರಿವು, ಶಾಂತಿಗೆ ಚಂದ್ರಯಾತ್ರಿಗಳ ಮನವಿ</strong></p>.<p><strong>ಹ್ಯೂಸ್ಟನ್, ಫೆ. 8–</strong> ಚಂದ್ರನ ಮೇಲೆ ಯಶಸ್ವಿ ಪ್ರಯೋಗಗಳನ್ನು ನಡೆಸಿ, ಭೂಮಿಯಿಂದ ಸುಮಾರು 2,03,000 ಮೈಲಿ ದೂರದಲ್ಲಿ ಸೆಕೆಂಡಿಗೆ 3,600 ಅಡಿ ವೇಗದಲ್ಲಿ ಧರೆಗೆ ಮರಳುತ್ತಿರುವ ಚಂದ್ರಯಾತ್ರಿಗಳು ಇಂದು ‘ವಿಶ್ವದಾದ್ಯಂತ ಪರಸ್ಪರ ಅರಿವು ಮತ್ತು ಶಾಂತಿಗಾಗಿ ಶ್ರಮಿಸಬೇಕೆಂದು’ ಮಾನವ ಜನಾಂಗಕ್ಕೆ ಮನವಿ ಮಾಡಿಕೊಂಡರು.</p>.<p>ಚಂದ್ರಮೃತ್ತಿಕೆ, ಚಂದ್ರಶಿಲೆ ಮತ್ತಿತರ ಚಿತ್ರಗಳ ಅಮೂಲ್ಯ ಸಂಗ್ರಹದೊಂದಿಗೆ ಭೂಮಿಗೆ ಹಿಂತಿರುಗುತ್ತಿರುವ ಅಲನ್ ಷಪರ್ಡ್, ಎಡ್ಗರ್ ಮಿಚೆಲ್ ಮತ್ತು ಮಾತೃನೌಕೆ ಚಾಲಕ ಸ್ಟೂವರ್ಟ್ ರೂಸಾ ಅವರು ಮಂಗಳವಾರ ಬೆಳಿಗ್ಗೆ ಪ್ರಸಾರವಾಗುವ ಟೆಲಿವಿಷನ್ ಪತ್ರಿಕಾ<br />ಗೋಷ್ಠಿಗೆ ಸಿದ್ಧರಾಗುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲೋಕಸಭೆಯ 27 ಸ್ಥಾನಗಳಿಗೆ ರಾಜ್ಯದ 250 ಮಂದಿ ಸ್ಪರ್ಧೆ</strong></p>.<p><strong>ಬೆಂಗಳೂರು, ಫೆ. 8–</strong> ಮಧ್ಯಂತರ ಚುನಾವಣೆಯಲ್ಲಿ ಮೈಸೂರು ರಾಜ್ಯದ 27 ಕ್ಷೇತ್ರಗಳಿಂದ ಸುಮಾರು 250 ಮಂದಿ ಅಭ್ಯರ್ಥಿಗಳು ಇಂದು ಸಂಜೆಯವರೆಗೆ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.</p>.<p>ಕೆಲವು ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಿರುವವರ ನಿಖರ ಸಂಖ್ಯೆಯು ಬೆಂಗಳೂರಿಗೆ ತಲುಪಿಲ್ಲವಾದರೂ ಎಲ್ಲ ಕ್ಷೇತ್ರಗಳ ಪ್ರಮುಖ ಅಭ್ಯರ್ಥಿಗಳು ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಾಮಪತ್ರಗಳನ್ನು ಒಪ್ಪಿಸಿದ ವರದಿಗಳು ಬಂದಿವೆ.</p>.<p>ಕಾನೂನು ಮಂತ್ರಿ ಶ್ರೀ ಕೆಂಗಲ್ ಹನುಮಂತಯ್ಯ ಮತ್ತು ಜನಸಂಘದ ಅಭ್ಯರ್ಥಿ ಶ್ರೀ ಗೋಪಾಲಕೃಷ್ಣ ಅಡಿಗ ಅವರು ಪ್ರತಿಸ್ಪರ್ಧಿಗಳಾಗಿರುವ ಬೆಂಗಳೂರು ಕ್ಷೇತ್ರದಿಂದ, ಅವರಿಬ್ಬರನ್ನೊಳಗೊಂಡು ಒಟ್ಟು 22 ಮಂದಿ ಕಣಕ್ಕೆ ಇಳಿದಿದ್ದಾರೆ.</p>.<p><strong>ಪರಸ್ಪರ ಅರಿವು, ಶಾಂತಿಗೆ ಚಂದ್ರಯಾತ್ರಿಗಳ ಮನವಿ</strong></p>.<p><strong>ಹ್ಯೂಸ್ಟನ್, ಫೆ. 8–</strong> ಚಂದ್ರನ ಮೇಲೆ ಯಶಸ್ವಿ ಪ್ರಯೋಗಗಳನ್ನು ನಡೆಸಿ, ಭೂಮಿಯಿಂದ ಸುಮಾರು 2,03,000 ಮೈಲಿ ದೂರದಲ್ಲಿ ಸೆಕೆಂಡಿಗೆ 3,600 ಅಡಿ ವೇಗದಲ್ಲಿ ಧರೆಗೆ ಮರಳುತ್ತಿರುವ ಚಂದ್ರಯಾತ್ರಿಗಳು ಇಂದು ‘ವಿಶ್ವದಾದ್ಯಂತ ಪರಸ್ಪರ ಅರಿವು ಮತ್ತು ಶಾಂತಿಗಾಗಿ ಶ್ರಮಿಸಬೇಕೆಂದು’ ಮಾನವ ಜನಾಂಗಕ್ಕೆ ಮನವಿ ಮಾಡಿಕೊಂಡರು.</p>.<p>ಚಂದ್ರಮೃತ್ತಿಕೆ, ಚಂದ್ರಶಿಲೆ ಮತ್ತಿತರ ಚಿತ್ರಗಳ ಅಮೂಲ್ಯ ಸಂಗ್ರಹದೊಂದಿಗೆ ಭೂಮಿಗೆ ಹಿಂತಿರುಗುತ್ತಿರುವ ಅಲನ್ ಷಪರ್ಡ್, ಎಡ್ಗರ್ ಮಿಚೆಲ್ ಮತ್ತು ಮಾತೃನೌಕೆ ಚಾಲಕ ಸ್ಟೂವರ್ಟ್ ರೂಸಾ ಅವರು ಮಂಗಳವಾರ ಬೆಳಿಗ್ಗೆ ಪ್ರಸಾರವಾಗುವ ಟೆಲಿವಿಷನ್ ಪತ್ರಿಕಾ<br />ಗೋಷ್ಠಿಗೆ ಸಿದ್ಧರಾಗುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>