ಕೆಲ ದಿನಗಳ ಹಿಂದೆ ಕೆಲ ವಿದ್ಯಾರ್ಥಿ ನಾಯಕರು ತಮ್ಮನ್ನು ಭೇಟಿ ಮಾಡಿದಾಗ ‘ಕ್ಯಾರಿ ಓವರ್ ಪದ್ಧತಿ ಹಾಗೂ ನಾಲ್ಕು ಮಂದಿ ವಿದ್ಯಾರ್ಥಿಗಳ ಫಲಿತಾಂಶ ಬದಲಾವಣೆ ವಿಷಯಗಳನ್ನು ಮಾತ್ರ ಚರ್ಚಿಸಿದರು. ಕ್ಯಾರಿಓವರ್ ಪದ್ಧತಿಯನ್ನು ಮುಂದುವರಿಸುವುದಾಗಿ ತಿಳಿಸಿದೆ. ಫಲಿತಾಂಶ ಬದಲಾವಣೆಯಾದ ಬಗ್ಗೆ ಹಾಗೂ ಕಾರಣಗಳನ್ನು ವಿವರಿಸಿದೆ. ಎದ್ದು ಹೋಗುವ ಕಾಲದಲ್ಲಿ ಅಧ್ಯಾಪಕ ಶ್ರೀನಿವಾಸ್ ಎಂಬುವರ ವಿಷಯ ಪ್ರಸ್ತಾಪಿಸಿದರು. ಆ ಬಗ್ಗೆಯೂ ವಿವರಿಸಿದೆ’ ಎಂದರು.