ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ ಶನಿವಾರ 02.10.1971

50 ವರ್ಷಗಳ ಹಿಂದೆ ಶನಿವಾರ 02.10.1971
Last Updated 1 ಅಕ್ಟೋಬರ್ 2021, 18:57 IST
ಅಕ್ಷರ ಗಾತ್ರ

ಸಂಸ್ಥಾ ಕಾಂಗ್ರೆಸ್ಸಿಗರಿಗೆ ‘ಸದಾಚಾರ ಸಂಹಿತೆ’

ನವದೆಹಲಿ, ಅ. 1– ಸೋಮವಾರ ಇಲ್ಲಿ ನಡೆಯುವ ಸಂಸ್ಥಾ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿ ಸಭೆಯು ತನ್ನ ಸದಸ್ಯರಿಗಾಗಿ ‘ಸದಾಚಾರ ಸಂಹಿತೆ’ಯೊಂದನ್ನು ಸಿದ್ಧಪಡಿಸುವ ನಿರೀಕ್ಷೆಯಿದೆ.

ಡಾ. ರಾಮಸುಭಗ್‌ ಸಿಂಗ್ ಮತ್ತು ಶ್ರೀಮತಿ ತಾರಕೇಶ್ವರಿ ಸಿನ್ಹಾ ಅವರ ನೇತೃತ್ವದಲ್ಲಿಯ ಯುವಕರ ಗುಂಪು ಪಕ್ಷದ ಉನ್ನತ ನಾಯಕರನ್ನು ಬಹಿರಂಗವಾಗಿ ಟೀಕೆ ಮಾಡುತ್ತಿರುವುದರಿಂದ ಈ ಕ್ರಮ ಅಗತ್ಯವಾಗಿದೆ
ಎಂದು ಪಕ್ಷದ ವೃತ್ತಗಳು ತಿಳಿಸಿವೆ.

ಕುಂದುಕೊರತೆ ಅರಿಯಲು ದೆಹಲಿವರೆಗೆ ರೈಲಿನಲ್ಲಿ ಕೆಂಗಲ್‌ರ ಖುದ್ದು ಪ್ರವಾಸ

ಬೆಂಗಳೂರು, ಅ. 1– ರೈಲು ಪ್ರಯಾಣ ಹೆಚ್ಚು ಸುಖಕರವಾಗುವಂತೆ ಮಾಡಲು ರೈಲ್ವೆ ಸಚಿವ ಶ್ರೀ ಕೆ. ಹನುಮಂತಯ್ಯ ಅವರು ರಾಷ್ಟ್ರವ್ಯಾಪಿ ಚಳವಳಿಯೊಂದನ್ನು ಆರಂಭಿಸಿದ್ದಾರೆ.

ಈ ಉದ್ದೇಶವನ್ನು ಸಾಧಿಸಲು ಖುದ್ದಾಗಿ ಪರಿಸ್ಥಿತಿಯನ್ನು ಅರಿತುಕೊಳ್ಳುವುದಕ್ಕಾಗಿ ಸಚಿವರು ಇಂದು ರಾತ್ರಿ ಇಲ್ಲಿಂದ ರೈಲಿನಲ್ಲಿ ಮದ್ರಾಸ್ ಮಾರ್ಗವಾಗಿ ದೆಹಲಿಗೆ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT