ಜನಜೀನವದಲ್ಲಿ ಆಧ್ಯಾತ್ಮಿಕವನ್ನು ತುಂಬುವ ಆದರ್ಶ ಕಷ್ಟಸಾಧ್ಯವಾಗಿ ಗೋಚರಿಸಬಹುದಾದರೂ, ದೀರ್ಘಾವಧಿ ನೈತಿಕ ಮೌಲ್ಯಗಳ ಆಯ್ಕೆಯ ಮೇಲೆ ವಿಶ್ವದ ಭವಿಷ್ಯ ಅವಲಂಬಿಸಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ಭಾರಿ ಪ್ರಚೋದನೆ ಇದ್ದರೂ, ಜನತೆ ಮತ್ತು ಸರ್ಕಾರವು ತೋರಿದ ಅಪೂರ್ವ ಸಂಯಮಕ್ಕೆ ಗಾಂಧೀಜಿ ಬೋಧಿಸಿದ ಮಾನವೀಯತೆಯೇ ಕಾರಣ ಎಂದರು.