ಗಾಂಧೀಜಿ ಕನಸಿನ ಮಾನವೀಯ ವಿಶ್ವ ನಿರ್ಮಾಣಕ್ಕೆ ಗಿರಿ ಕರೆ
ನವದೆಹಲಿ, ಅ. 2– ಗಾಂಧೀಜಿ ಕನಸು ಕಂಡಿದ್ದ ದಯಾರ್ದ್ರ ವಿಶ್ವ ನಿರ್ಮಾಣ ಅಥವಾ ಭಯಾನಕವಾದ ಪರಸ್ಪರ ಕಚ್ಚಾಟದಿಂದ ಅಂತಿಮವಾಗಿ ವಿಶ್ವ ವಿನಾಶ. ಇವೆರಡರಲ್ಲಿ ಒಂದನ್ನು ಮಾನವ ಜನಾಂಗ ಈಗ ಆರಿಸಿಕೊಳ್ಳಬೇಕಾಗಿದೆ ಎಂದು ರಾಷ್ಟ್ರಪತಿ ವಿ.ವಿ. ಗಿರಿ ಇಂದು ಸೂಚಿಸಿದರು.
ಜನಜೀನವದಲ್ಲಿ ಆಧ್ಯಾತ್ಮಿಕವನ್ನು ತುಂಬುವ ಆದರ್ಶ ಕಷ್ಟಸಾಧ್ಯವಾಗಿ ಗೋಚರಿಸಬಹುದಾದರೂ, ದೀರ್ಘಾವಧಿ ನೈತಿಕ ಮೌಲ್ಯಗಳ ಆಯ್ಕೆಯ ಮೇಲೆ ವಿಶ್ವದ ಭವಿಷ್ಯ ಅವಲಂಬಿಸಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ಭಾರಿ ಪ್ರಚೋದನೆ ಇದ್ದರೂ, ಜನತೆ ಮತ್ತು ಸರ್ಕಾರವು ತೋರಿದ ಅಪೂರ್ವ ಸಂಯಮಕ್ಕೆ ಗಾಂಧೀಜಿ ಬೋಧಿಸಿದ ಮಾನವೀಯತೆಯೇ ಕಾರಣ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.