<p><strong>ಮಹಿಳಾ ಮೀಸಲಾತಿ: ಶರದ್ ವಿರೋಧಕ್ಕೆ ಪಾಸ್ವಾನ್ ಟೀಕೆ<br />ವಲ್ಸಾದ್, ಮೇ 27 (ಪಿಟಿಐ)– </strong>ಲೋಕಸಭೆ ಹಾಗೂ ರಾಜ್ಯಗಳ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆ ಕುರಿತಂತೆ ಜನತಾದಳದ ಕಾರ್ಯಾಧ್ಯಕ್ಷ ಶರದ್ ಯಾದವ್ ಅವರ ನಿಲುವನ್ನು ಕೇಂದ್ರ ರೈಲ್ವೆ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರು ಕಟುವಾಗಿ ಟೀಕಿಸಿದ್ದಾರೆ.</p>.<p>ನಿನ್ನೆ ವಾಪಿಯಲ್ಲಿ ರೈಲ್ವೆ ಮೇಲ್ಸೇತುವೆಯನ್ನು ಉದ್ಘಾಟಿಸಿದ ಸಚಿವರು ಸುದ್ದಿಗಾರರ ಜೊತೆ ಮಾತನಾಡುತ್ತ, ‘ಇತರ ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಮಹಿಳೆಯರಿಗೂ ಮೀಸಲಾತಿ ನೀಡಬೇಕು ಎಂಬ ಯಾದವ್ ಅವರ ಬೇಡಿಕೆ ಈ ಮಸೂದೆ ಕುರಿತ ಬದ್ಧತೆ ಕಡಿಮೆಯಾಗುವುದನ್ನು ಸೂಚಿಸುವುದು’ ಎಂದು ಹೇಳಿದರು.</p>.<p>‘ಆದರೆ ಮಸೂದೆಯಲ್ಲಿ ತಿದ್ದುಪಡಿಯಾಗಬೇಕು ಎಂದು ಬೇಡಿಕೆ ಮಂಡಿಸಿದವರು ಮಸೂದೆ ಚರ್ಚೆಗೆ ಬಂದಾಗ ಸರ್ವಾನುಮತ<br />ದಿಂದ ಅಂಗೀಕರಿಸುವಂತೆ’ ಮನವಿ ಮಾಡಿದರು.</p>.<p>*</p>.<p><strong>ಶ್ರೀಲಂಕಾಕ್ಕೆ ಸ್ವಾತಂತ್ರ್ಯೋತ್ಸವಕ್ರಿಕೆಟ್ ಕಪ್<br />ಕಲ್ಕತ್ತ, ಮೇ 27–</strong> ಪಾಕಿಸ್ತಾನ ತಂಡವನ್ನು ಎರಡನೇ ಫೈನಲ್ನಲ್ಲಿ ನಿರೀಕ್ಷೆಗಿಂತ ಸುಲಭವಾಗಿ 85 ರನ್ಗಳಿಂದ ಸೋಲಿಸಿದ ವಿಶ್ವ ಚಾಂಪಿಯನ್ ಶ್ರೀಲಂಕಾ ತಂಡವರು ಇಂದು ಪೆಪ್ಸಿ ಸ್ವಾತಂತ್ರ್ಯೋತ್ಸವ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು.</p>.<p>ಶ್ರೀಲಂಕಾ ಮೊಹಾಲಿಯಲ್ಲಿಮೊದಲನೇ ಪಂದ್ಯ ಕೂಡ ಗೆದ್ದ ಕಾರಣ ಉತ್ತಮ ಮೂರು ಪಂದ್ಯಗಳ ಸರಣಿಯ ಕೊನೆಯ ಪಂದ್ಯವನ್ನು ಆಡುವ ಪ್ರಮೇಯವಿಲ್ಲ.</p>.<p><strong>ಸ್ಕೋರು ವಿವರ</strong>: <strong>ಶ್ರೀಲಂಕಾ</strong>: 49.4 ಓವರ್ಗಳಲ್ಲಿ 309; <strong>ಪಾಕಿಸ್ತಾನ</strong>: 43.1 ಓವರ್ಗಳಲ್ಲಿ 224.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಿಳಾ ಮೀಸಲಾತಿ: ಶರದ್ ವಿರೋಧಕ್ಕೆ ಪಾಸ್ವಾನ್ ಟೀಕೆ<br />ವಲ್ಸಾದ್, ಮೇ 27 (ಪಿಟಿಐ)– </strong>ಲೋಕಸಭೆ ಹಾಗೂ ರಾಜ್ಯಗಳ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆ ಕುರಿತಂತೆ ಜನತಾದಳದ ಕಾರ್ಯಾಧ್ಯಕ್ಷ ಶರದ್ ಯಾದವ್ ಅವರ ನಿಲುವನ್ನು ಕೇಂದ್ರ ರೈಲ್ವೆ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರು ಕಟುವಾಗಿ ಟೀಕಿಸಿದ್ದಾರೆ.</p>.<p>ನಿನ್ನೆ ವಾಪಿಯಲ್ಲಿ ರೈಲ್ವೆ ಮೇಲ್ಸೇತುವೆಯನ್ನು ಉದ್ಘಾಟಿಸಿದ ಸಚಿವರು ಸುದ್ದಿಗಾರರ ಜೊತೆ ಮಾತನಾಡುತ್ತ, ‘ಇತರ ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಮಹಿಳೆಯರಿಗೂ ಮೀಸಲಾತಿ ನೀಡಬೇಕು ಎಂಬ ಯಾದವ್ ಅವರ ಬೇಡಿಕೆ ಈ ಮಸೂದೆ ಕುರಿತ ಬದ್ಧತೆ ಕಡಿಮೆಯಾಗುವುದನ್ನು ಸೂಚಿಸುವುದು’ ಎಂದು ಹೇಳಿದರು.</p>.<p>‘ಆದರೆ ಮಸೂದೆಯಲ್ಲಿ ತಿದ್ದುಪಡಿಯಾಗಬೇಕು ಎಂದು ಬೇಡಿಕೆ ಮಂಡಿಸಿದವರು ಮಸೂದೆ ಚರ್ಚೆಗೆ ಬಂದಾಗ ಸರ್ವಾನುಮತ<br />ದಿಂದ ಅಂಗೀಕರಿಸುವಂತೆ’ ಮನವಿ ಮಾಡಿದರು.</p>.<p>*</p>.<p><strong>ಶ್ರೀಲಂಕಾಕ್ಕೆ ಸ್ವಾತಂತ್ರ್ಯೋತ್ಸವಕ್ರಿಕೆಟ್ ಕಪ್<br />ಕಲ್ಕತ್ತ, ಮೇ 27–</strong> ಪಾಕಿಸ್ತಾನ ತಂಡವನ್ನು ಎರಡನೇ ಫೈನಲ್ನಲ್ಲಿ ನಿರೀಕ್ಷೆಗಿಂತ ಸುಲಭವಾಗಿ 85 ರನ್ಗಳಿಂದ ಸೋಲಿಸಿದ ವಿಶ್ವ ಚಾಂಪಿಯನ್ ಶ್ರೀಲಂಕಾ ತಂಡವರು ಇಂದು ಪೆಪ್ಸಿ ಸ್ವಾತಂತ್ರ್ಯೋತ್ಸವ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು.</p>.<p>ಶ್ರೀಲಂಕಾ ಮೊಹಾಲಿಯಲ್ಲಿಮೊದಲನೇ ಪಂದ್ಯ ಕೂಡ ಗೆದ್ದ ಕಾರಣ ಉತ್ತಮ ಮೂರು ಪಂದ್ಯಗಳ ಸರಣಿಯ ಕೊನೆಯ ಪಂದ್ಯವನ್ನು ಆಡುವ ಪ್ರಮೇಯವಿಲ್ಲ.</p>.<p><strong>ಸ್ಕೋರು ವಿವರ</strong>: <strong>ಶ್ರೀಲಂಕಾ</strong>: 49.4 ಓವರ್ಗಳಲ್ಲಿ 309; <strong>ಪಾಕಿಸ್ತಾನ</strong>: 43.1 ಓವರ್ಗಳಲ್ಲಿ 224.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>