ಪಕ್ಷ ನೀಡಿರುವ ಭರವಸೆಗಳು ಹಾಗೂ ಸರ್ಕಾರದ ಸಾಧನೆಗಳ ನಡುವೆ ವ್ಯಾಪಕ ಅಂತರವಿದೆಯೆಂದು ಪದೇ ಪದೇ ಕೇಳಿ ಬರುತ್ತಿರುವ ದೂರನ್ನು ಪ್ರಸ್ತಾಪಿಸಿದ ಇಂದಿರಾಗಾಂಧಿಯವರು ಪಕ್ಷದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ವಿಚಾರವನ್ನು ಚರ್ಚಿಸಬೇಕು– ಚರ್ಚಿಸಬಹುದು ಎಂದು ಹೇಳಿ. ಆದರೆ, ‘ಒತ್ತಡ ಹೇರುವ ಗುಂಪುಗಳನ್ನು ತಾವು ಸಹಿಸುವುದಿಲ್ಲವೆಂದು ತಿಳಿಸಿದರೆಂದು ಗೊತ್ತಾಗಿದೆ’ ಎಂದರು.