ರಾಜಸ್ಥಾನ: ಸದನದಲ್ಲಿ ಮಾರಾಮಾರಿ, ಸಮಾಜ ಕಲ್ಯಾಣ ಸಚಿವ ಮದನ್ ದಿಲ್ವಾರಗೆ ಕಪಾಳ ಮೋಕ್ಷ
ಜೈಪುರ, ಜ. 22 (ಪಿಟಿಐ)– ಅಮಾನತುಗೊಂಡಿದ್ದ ಭಾರತೀಯ ಜನತಾ ಪಕ್ಷದ ಭಿನ್ನಮತೀಯ ಶಾಸಕ ಗೋಪಿಚಂದ್ ಗುರ್ಜಾರ್ ಅವರು, ಸಮಾಜ ಕಲ್ಯಾಣ ಸಚಿವ ಮದನ್ ದಿಲ್ವಾರ ಅವರಿಗೆ ಕಪಾಳ ಮೋಕ್ಷ ಮಾಡಿದ ಘಟನೆ ರಾಜಸ್ಥಾನ ವಿಧಾನಸಭೆಯಲ್ಲಿ ಇಂದು ನಡೆಯಿತು.
ಸದನದಲ್ಲಿ ನಡೆದ ಕೋಲಾಹಲ, ಮಾರಾಮಾರಿ ಘಟನೆಗಳ ಹಿನ್ನೆಲೆಯಲ್ಲಿ ಇಂದು ಮೂರು ಬಾರಿ ಮುಂದೂಡಲಾಗಿದ್ದ ವಿಧಾನಸಭೆಯನ್ನು ಅಂತಿಮ ವಾಗಿ ಮಾರ್ಚ್ 6ರವರೆಗೆ ಮುಂದೂಡಲಾಯಿತು.