ಬೆಂಗಳೂರು, ಜುಲೈ 17– ರಾಜ್ಯದ ಕಾವೇರಿ ಯೋಜನೆಗಳಿಗೆ ಮಂಜೂರಾತಿ ನೀಡದಿರುವುದು, ಏನೇ ಆಗಲಿ ಎಲ್ಲ ಕಾಲಕ್ಕೂ ತಮಿಳುನಾಡಿನ ಹಿತವನ್ನು ರಕ್ಷಿಸಬೇಕೆಂಬ ಕೇಂದ್ರದ ಆಸಕ್ತಿಯನ್ನು ತೋರಿಸುವುದೆಂದು ವಿಸರ್ಜಿತ ವಿಧಾನ ಸಭೆಯ ಸದಸ್ಯ ಎಚ್.ಎನ್. ನಂಜೇಗೌಡರು ಕೇಂದ್ರದ ನೀರಾವರಿ ಸಚಿವ ಡಾ.ಕೆ.ಎಲ್.ರಾವ್ ಅವರಿಗೆ ತಮ್ಮ ಅಸಮಾಧಾನವನ್ನು ಸೂಚಿಸಿದ್ದಾರೆ.