ಬೆಳಗಾವಿ, ಜುಲೈ 9– ಮುಂಬೈನಿಂದ ಬೆಳಗಾವಿಗೆ ನಿಯಮಿತ ವೇಳಾಪಟ್ಟಿಗೆ ಅನುಗುಣವಾಗಿ ಇಂದು ಬೆಳಿಗ್ಗೆ ಬಂದ ಇಂಡಿಯನ್ ಏರ್ಲೈನ್ಸ್ಗೆ ಸೇರಿದ ವಿಮಾನವು ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಜಖಂಗೊಂಡು ನಿಂತಿತು. ಪ್ರಯಾಣಿಕರು ಮತ್ತು ಸಿಬ್ಬಂದಿವರ್ಗ ಯಾವ ಅಪಾಯವೂ ಇಲ್ಲದೇ ಪಾರಾದರು.
l ಕರಾಚಿಯಲ್ಲಿ ಭಾಷಾ ಘರ್ಷಣೆ: ಕರ್ಫ್ಯೂ, ಸೇನೆಗೆ ಹತೋಟಿ ಹೊಣೆ
ಕರಾಚಿ, ಜುಲೈ 9– ಸಿಂಧ್ ಪ್ರಾಂತ್ಯದಲ್ಲಿ ಸಿಂಧಿ ಭಾಷೆಗೆ ಅಧಿಕೃತ ಮನ್ನಣೆ ನೀಡಿರುವುದನ್ನು ಪ್ರತಿಭಟಿಸಿ ಪಾಕಿಸ್ತಾನದಲ್ಲಿ ಆರಂಭವಾಗಿರುವ ಗಲಭೆ ಇಂದು 3ನೇ ದಿನಕ್ಕೆ ತಲುಪಿತು. ಸೇನೆಗೆ ಗಲಭೆಯ ಹತೋಟಿ ಹೊಣೆಯನ್ನು ಒಪ್ಪಿಸಲಾಗಿದೆ.