ನವದೆಹಲಿ, ಫೆ. 22 (ಪಿಟಿಐ, ಯುಎನ್ಐ)– ಹವಾಲ ಹಗರಣದಲ್ಲಿ ಕಳಂಕಿತರಾಗಿರುವ ಬೂಟಾ ಸಿಂಗ್,
ಆರ್.ಕೆ.ಧವನ್, ಕಮಲನಾಥ್, ಅರವಿಂದ ನೇತಂ, ಜಾಫರ್ ಷರೀಫ್, ಎನ್.ಡಿ.ತಿವಾರಿ, ಶರದ್ ಯಾದವ್ ಸೇರಿ 14 ಮಂದಿ ಉನ್ನತ ರಾಜಕಾರಣಿಗಳ ವಿರುದ್ಧ ಸಿಬಿಐ ಇಂದು ಮತ್ತೆ ಆರೋಪಪಟ್ಟಿ ಸಲ್ಲಿಸಿದೆ. ದೆಹಲಿ ಮುಖ್ಯಮಂತ್ರಿ ಮದನ್ಲಾಲ್ ಖುರಾನಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ಕೋರಿದ ಬೆನ್ನಲ್ಲೇ ಅವರು ರಾಜೀನಾಮೆ ಸಲ್ಲಿಸಿದರು.