<p>ತಲೈಮಲೈ ಕಾಡಿನಲ್ಲಿ ರಾಜ್ಕುಮಾರ್?</p><p>ತಲೈಮಲೈ (ತಮಿಳುನಾಡು), ಆಗಸ್ಟ್ 4– ವೀರಪ್ಪನ್ನಿಂದ ಅಪಹರಣಕ್ಕೆ ಒಳಗಾಗಿರುವ ಕನ್ನಡದ ಮೇರುನಟ ಡಾ. ರಾಜ್ಕುಮಾರ್ ಅವರು, ತಲೈಮಲೈ ಅರಣ್ಯದ ನೆಲೆಯೊಂದರಲ್ಲಿ ಇದ್ದಾರೆಂದು ಮೂಲಗಳು ತಿಳಿಸಿವೆ.</p><p>ಗಾಜನೂರಿನ ಹತ್ತಿರದಲ್ಲೇ ಇರುವ ಈ ಕಾಡಿನಲ್ಲಿ 18ನೇ ಶತಮಾನದ ಅಂತ್ಯದಲ್ಲಿ ಟಿಪ್ಪುಸುಲ್ತಾನ್ ಬೇಟೆಗೆಂದು ಕಟ್ಟಿಸಿದ್ದ ಹಳೆಯ ಮಂಟಪವೊಂದರಲ್ಲಿ ವೀರಪ್ಪನ್ ತಂಡ ತಂಗಿದ್ದುದನ್ನು ಮರ ಕಡಿಯಲು ಹೋದ ಕಾಡಿನ ಜನರು ನಿನ್ನೆ ಕಂಡಿದ್ದಾರೆಂದು ಹೇಳಲಾಗಿದೆ.</p><p>ಕಾಶ್ಮೀರ ಹತ್ಯಾಕಾಂಡ; ವಿದೇಶಿ ಕೈವಾಡ ಸ್ಪಷ್ಟ</p><p>ನವದೆಹಲಿ, ಆಗಸ್ಟ್ 4– ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಹತ್ಯಾಕಾಂಡದಿಂದ ಅಲ್ಲಿ ಶಾಂತಿ ಸ್ಥಾಪಿಸುವ ಭಾರತದ ಸಂಕಲ್ಪ ಬದಲಾಗದು ಎಂದು ಲೋಕಸಭೆಯಲ್ಲಿ ಇಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಘೋಷಿಸಿದರು.</p>.<p>ಅಲ್ಲಿನ ಭದ್ರತಾ ಪಡೆ ಮತ್ತು ಸಾರ್ವಜನಿಕರು ನೀಡಿದ ಮಾಹಿತಿಯಿಂದ ಕೊಲೆಗಡುಕರು ವಿದೇಶಿಯರೆನ್ನುವುದು ಸ್ಪಷ್ಟವಾಗುತ್ತದೆ ಎಂದು ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಲೈಮಲೈ ಕಾಡಿನಲ್ಲಿ ರಾಜ್ಕುಮಾರ್?</p><p>ತಲೈಮಲೈ (ತಮಿಳುನಾಡು), ಆಗಸ್ಟ್ 4– ವೀರಪ್ಪನ್ನಿಂದ ಅಪಹರಣಕ್ಕೆ ಒಳಗಾಗಿರುವ ಕನ್ನಡದ ಮೇರುನಟ ಡಾ. ರಾಜ್ಕುಮಾರ್ ಅವರು, ತಲೈಮಲೈ ಅರಣ್ಯದ ನೆಲೆಯೊಂದರಲ್ಲಿ ಇದ್ದಾರೆಂದು ಮೂಲಗಳು ತಿಳಿಸಿವೆ.</p><p>ಗಾಜನೂರಿನ ಹತ್ತಿರದಲ್ಲೇ ಇರುವ ಈ ಕಾಡಿನಲ್ಲಿ 18ನೇ ಶತಮಾನದ ಅಂತ್ಯದಲ್ಲಿ ಟಿಪ್ಪುಸುಲ್ತಾನ್ ಬೇಟೆಗೆಂದು ಕಟ್ಟಿಸಿದ್ದ ಹಳೆಯ ಮಂಟಪವೊಂದರಲ್ಲಿ ವೀರಪ್ಪನ್ ತಂಡ ತಂಗಿದ್ದುದನ್ನು ಮರ ಕಡಿಯಲು ಹೋದ ಕಾಡಿನ ಜನರು ನಿನ್ನೆ ಕಂಡಿದ್ದಾರೆಂದು ಹೇಳಲಾಗಿದೆ.</p><p>ಕಾಶ್ಮೀರ ಹತ್ಯಾಕಾಂಡ; ವಿದೇಶಿ ಕೈವಾಡ ಸ್ಪಷ್ಟ</p><p>ನವದೆಹಲಿ, ಆಗಸ್ಟ್ 4– ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಹತ್ಯಾಕಾಂಡದಿಂದ ಅಲ್ಲಿ ಶಾಂತಿ ಸ್ಥಾಪಿಸುವ ಭಾರತದ ಸಂಕಲ್ಪ ಬದಲಾಗದು ಎಂದು ಲೋಕಸಭೆಯಲ್ಲಿ ಇಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಘೋಷಿಸಿದರು.</p>.<p>ಅಲ್ಲಿನ ಭದ್ರತಾ ಪಡೆ ಮತ್ತು ಸಾರ್ವಜನಿಕರು ನೀಡಿದ ಮಾಹಿತಿಯಿಂದ ಕೊಲೆಗಡುಕರು ವಿದೇಶಿಯರೆನ್ನುವುದು ಸ್ಪಷ್ಟವಾಗುತ್ತದೆ ಎಂದು ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>