<p><strong>ಸಕ್ಕರೆ ಸಾಗಾಟಕ್ಕೆ ಸರ್ಕಾರದ ನಿಷೇಧ</strong></p>.<p>ನವದೆಹಲಿ, ಡಿ. 29– ಮಿಲಿಟರಿ ಸಾಲದ ಪತ್ರ ಅಥವಾ ಕೇಂದ್ರ ಸರ್ಕಾರ ಇಲ್ಲವೆ ಅವರಿಂದ ಅಧಿಕೃತರಾದವರು ನೀಡಿದ ವಿಶೇಷ ಅನುಮತಿ ಪತ್ರವಿಲ್ಲದೆ ಅಂತರ ಸಾಂಸ್ಥಾನಿಕವಾಗಿ ಸಕ್ಕರೆ ಸಾಗಾಟ ಕೂಡದೆಂದು ಭಾರತ ಸರ್ಕಾರವು ವಿಶೇಷ ಗೆಜೆಟ್ ಪ್ರಕಟಣೆಯಲ್ಲಿ ತಿಳಿಸಿದೆ.</p>.<p>ಒಂದು ಸೇರಿಗೆ ಮೀರದಷ್ಟು ಸಕ್ಕರೆಯನ್ನು ನೈಜ ಪ್ರಯಾಣಿಕರ ಲಗೇಜಿನ ಭಾಗವಾಗಿ ತೆಗೆದುಕೊಂಡು <br>ಹೋಗು ವುದಕ್ಕೆ ಈ ಆಜ್ಞೆ <br>ಅನ್ವಯಿಸುವುದಿಲ್ಲ.</p>.<p><strong>ಕನ್ನಡ ರಾಜಕವಿಗೆ ಮುಂಬೈ ಸತ್ಕಾರ</strong></p>.<p>ಮುಂಬಯಿ, ಡಿ. 29– ಮದರಾಸಿನ ಕನ್ನಡ ರಾಜಕವಿ ಹಾಗೂ 34ನೇ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನಾಧ್ಯಕ್ಷರೂ ಆದ ಎಂ. ಗೋವಿಂದ ಪೈ ಹಾಗೂ ಸುಪ್ರಸಿದ್ಧ ಕನ್ನಡ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರರಿಗೆ ಇಂದು ಸಂಜೆ ಮೈಸೂರು ಅಸೋಸಿಯೇಷನ್ನಲ್ಲಿ ಸತ್ಕಾರ ನೀಡಲಾಯಿತು.</p>.<p>ಅಸೋಸಿಯೇಷನ್ ಅಧ್ಯಕ್ಷ ಜೆ.ಎನ್. ಅಯ್ಯರ್ರವರು ಅತಿಥಿ ಗಳನ್ನು ಸ್ವಾಗತಿಸಿ ಮಾತನಾಡುತ್ತ, ಕನ್ನಡ ಸಾಹಿತ್ಯಕ್ಕೆ ಅತಿಥಿಗಳಿಬ್ಬರ ಕಾಣಿಕೆ ಅಗಾಧವಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಕ್ಕರೆ ಸಾಗಾಟಕ್ಕೆ ಸರ್ಕಾರದ ನಿಷೇಧ</strong></p>.<p>ನವದೆಹಲಿ, ಡಿ. 29– ಮಿಲಿಟರಿ ಸಾಲದ ಪತ್ರ ಅಥವಾ ಕೇಂದ್ರ ಸರ್ಕಾರ ಇಲ್ಲವೆ ಅವರಿಂದ ಅಧಿಕೃತರಾದವರು ನೀಡಿದ ವಿಶೇಷ ಅನುಮತಿ ಪತ್ರವಿಲ್ಲದೆ ಅಂತರ ಸಾಂಸ್ಥಾನಿಕವಾಗಿ ಸಕ್ಕರೆ ಸಾಗಾಟ ಕೂಡದೆಂದು ಭಾರತ ಸರ್ಕಾರವು ವಿಶೇಷ ಗೆಜೆಟ್ ಪ್ರಕಟಣೆಯಲ್ಲಿ ತಿಳಿಸಿದೆ.</p>.<p>ಒಂದು ಸೇರಿಗೆ ಮೀರದಷ್ಟು ಸಕ್ಕರೆಯನ್ನು ನೈಜ ಪ್ರಯಾಣಿಕರ ಲಗೇಜಿನ ಭಾಗವಾಗಿ ತೆಗೆದುಕೊಂಡು <br>ಹೋಗು ವುದಕ್ಕೆ ಈ ಆಜ್ಞೆ <br>ಅನ್ವಯಿಸುವುದಿಲ್ಲ.</p>.<p><strong>ಕನ್ನಡ ರಾಜಕವಿಗೆ ಮುಂಬೈ ಸತ್ಕಾರ</strong></p>.<p>ಮುಂಬಯಿ, ಡಿ. 29– ಮದರಾಸಿನ ಕನ್ನಡ ರಾಜಕವಿ ಹಾಗೂ 34ನೇ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನಾಧ್ಯಕ್ಷರೂ ಆದ ಎಂ. ಗೋವಿಂದ ಪೈ ಹಾಗೂ ಸುಪ್ರಸಿದ್ಧ ಕನ್ನಡ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರರಿಗೆ ಇಂದು ಸಂಜೆ ಮೈಸೂರು ಅಸೋಸಿಯೇಷನ್ನಲ್ಲಿ ಸತ್ಕಾರ ನೀಡಲಾಯಿತು.</p>.<p>ಅಸೋಸಿಯೇಷನ್ ಅಧ್ಯಕ್ಷ ಜೆ.ಎನ್. ಅಯ್ಯರ್ರವರು ಅತಿಥಿ ಗಳನ್ನು ಸ್ವಾಗತಿಸಿ ಮಾತನಾಡುತ್ತ, ಕನ್ನಡ ಸಾಹಿತ್ಯಕ್ಕೆ ಅತಿಥಿಗಳಿಬ್ಬರ ಕಾಣಿಕೆ ಅಗಾಧವಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>