<p><strong>* ಪರಾಮರ್ಶೆ– ಅನಂತ್ ಸಮರ್ಥನೆ; ಕುರೂಪ ಯತ್ನ– ಕೃಷ್ಣ ಆಕ್ರೋಶ</strong></p>.<p>ಬೆಂಗಳೂರು, ಏ. 15– ಸಂವಿಧಾನ ಪರಾಮರ್ಶೆಯ ವಿಚಾರದಲ್ಲಿ ಕೇಂದ್ರದ ಸಂಸ್ಕೃತಿ ಸಚಿವ ಅನಂತ ಕುಮಾರ್ ಮತ್ತು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಡುವೆ ಇಂದು ಇಲ್ಲಿ ಒಂದೇ ವೇದಿಕೆಯಲ್ಲಿ ಸಾರ್ವಜನಿಕರ ಎದುರೇ ಗಂಭಿರ ಭಿನ್ನಾಭಿಪ್ರಾಯ ಬಹಿರಂಗಕ್ಕೆ ಬಂತು.</p>.<p>ಡಾ. ಬಿ.ಆರ್. ಅಂಬೇಡ್ಕರ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಅಂಬೇಡ್ಕರ್ ಜಯಂತಿ ದಿನವಾದ ಇಂದು ಅವರ ಭಾವಚಿತ್ರವನ್ನು ಅನಾವರಣ ಮಾಡಿದ ಅನಂತ ಕುಮಾರ್ ಅವರು ಸಂವಿಧಾನ ಪರಾಮರ್ಶೆಯನ್ನು ಪರೋಕ್ಷವಾಗಿ ಸಮರ್ಥಿಸಿದರು.</p>.<p>ಸಂವಿಧಾನಕ್ಕೆ ಈಗಾಗಲೇ 79 ತಿದ್ದುಪಡಿಗಳನ್ನು ತರಲಾಗಿದೆ. ಇವುಗಳಲ್ಲಿ ಬಹುತೇಕ ತಿದ್ದುಪಡಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಮಾಡಲಾಗಿದೆ. ರಾಜೀವ್ ಗಾಂಧಿ ಅವರು ಗ್ರಾಮೀಣಾಭಿವೃದ್ಧಿ ಕಾಯ್ದೆಗೆ ತಿದ್ದುಪಡಿ ತರದಿದ್ದರೆ ಈಗಿನ ಅಧಿಕಾರ ವಿಕೇಂದ್ರೀಕರಣವೇ ಸಾಧ್ಯವಾಗುತ್ತಿರಲಿಲ್ಲ ಎಂದು ಅನಂತಕುಮಾರ್ ಪ್ರತಿಪಾದಿಸಿದರು.</p>.<p>ಕರ್ತವ್ಯ: ಆದರೆ ನಂತರ ಮಾತನಾಡಿದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಈ ವಾದವನ್ನು ಒಪ್ಪದೇ, ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಜೋಪಾನವಾಗಿ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಅದನ್ನು ಸುಂದರ ಮಾಡುತ್ತೇವೆ ಎನ್ನುತ್ತಾ ಮತ್ತಷ್ಟು ಕುರೂಪ ಮಾಡುವುದಕ್ಕೆ ಯಾರೂ ಕೈ ಹಾಕಬಾರದು ಎಂದು ಮಾತಿನ ತಿರುಗುಬಾಣ ಬಿಟ್ಟರು.</p>.<p>–––</p>.<p><strong>* ಮಹಾಭಾರತದಿಂದ ಕ್ರಿಕೆಟ್ವರೆಗೆ ಬಾಜಿ</strong></p>.<p>ಮುಂಬೈ, ಏ. 14 (ಪಿಟಿಐ)– ಬಾಜಿ ನಿನ್ನೆ ಮೊನ್ನೆಯ ಚಾಳಿಯಲ್ಲ, ಮಹಾಭಾರತದಲ್ಲಿಯೂ ರಾಜರು ಬಾಜಿ ಕಟ್ಟಿಯೇ ಅರಸೊತ್ತಿಗೆಯನ್ನು ಕಳೆದುಕೊಂಡಿದ್ದರು. ಆಗ ಪಗಡೆಯಿದ್ದರೆ ಈಗ ಅದರ ಸ್ಥಾನದಲ್ಲಿ ಕ್ರಿಕೆಟ್ ಇದೆ. ಅಷ್ಟೇ ವ್ಯತ್ಯಾಸ.</p>.<p>ಕ್ರಿಕೆಟ್ನ ಏರಿಳಿತಗಳಿಗೆ ಮುಂಬೈ ಮೂಕಸಾಕ್ಷಿಯಾಗಿ ನಿಂತಿದೆ. ಬಾಜಿಗೆ ಮೂಲ ಬುಕ್ಕಿಗಳು, ಬುಕ್ಕಿಗಳಿಗೆ ಮೂಲ ಈ ಮುಂಬೈ. ಕೊಳೆಗೇರಿ, ಮಧ್ಯಮ ವರ್ಗ ಜನರ ಭರಾಟೆ, ಗಿಜಿಗಿಡುವ ಮುಂಬೈ ರಸ್ತೆಗಳ ನಡುವೆ ಬಾಜಿ ಸದ್ದಿಲ್ಲದೆ ನಡೆಯುತ್ತಿದೆ.</p>.<p>ಮುಂಬೈಯಲ್ಲಿ ಮಟ್ಕಾ ಬಿಟ್ಟರೆ ಕ್ರಿಕೆಟ್ ಬಾಜಿ ಬಹಳ ಜನಪ್ರಿಯವಾದ ಜೂಜು. ಕ್ರಿಕೆಟ್ ಜನಪ್ರಿಯತೆಯಿಂದಾಗಿ ಲಕ್ಷಾಂತರ ಹಣ ಜೂಜುಕೋರರ ಕೈಗಳಿಂದ ಕೈಗಳಿಗೆ ದಾಟುತ್ತದೆ.</p>.<p>ಕ್ರಿಕೆಟ್ನಲ್ಲಿ ಜೂಜು ಬಹಳ ರೀತಿಯಲ್ಲಿದೆ. ಒಂದು ತಂಡ ಎಷ್ಟು ರನ್ಗಳಿಸಬಹುದು, ಬೌಲರ್ ಎಷ್ಟು ವಿಕೆಟ್ ಪಡೆಯಬಹುದು, ಉತ್ತಮ ಬ್ಯಾಟ್ಸ್ಮನ್, ಉತ್ತಮ ಬೌಲರ್, ಪಂದ್ಯದ ಪುರುಷೋತ್ತಮ... ಹೀಗೆ ಬಗೆಗಳು ಹೆಚ್ಚುತ್ತಾ ಹೋಗುತ್ತದೆ ಎಂದು ಪೊಲೀಸರು ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>* ಪರಾಮರ್ಶೆ– ಅನಂತ್ ಸಮರ್ಥನೆ; ಕುರೂಪ ಯತ್ನ– ಕೃಷ್ಣ ಆಕ್ರೋಶ</strong></p>.<p>ಬೆಂಗಳೂರು, ಏ. 15– ಸಂವಿಧಾನ ಪರಾಮರ್ಶೆಯ ವಿಚಾರದಲ್ಲಿ ಕೇಂದ್ರದ ಸಂಸ್ಕೃತಿ ಸಚಿವ ಅನಂತ ಕುಮಾರ್ ಮತ್ತು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಡುವೆ ಇಂದು ಇಲ್ಲಿ ಒಂದೇ ವೇದಿಕೆಯಲ್ಲಿ ಸಾರ್ವಜನಿಕರ ಎದುರೇ ಗಂಭಿರ ಭಿನ್ನಾಭಿಪ್ರಾಯ ಬಹಿರಂಗಕ್ಕೆ ಬಂತು.</p>.<p>ಡಾ. ಬಿ.ಆರ್. ಅಂಬೇಡ್ಕರ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಅಂಬೇಡ್ಕರ್ ಜಯಂತಿ ದಿನವಾದ ಇಂದು ಅವರ ಭಾವಚಿತ್ರವನ್ನು ಅನಾವರಣ ಮಾಡಿದ ಅನಂತ ಕುಮಾರ್ ಅವರು ಸಂವಿಧಾನ ಪರಾಮರ್ಶೆಯನ್ನು ಪರೋಕ್ಷವಾಗಿ ಸಮರ್ಥಿಸಿದರು.</p>.<p>ಸಂವಿಧಾನಕ್ಕೆ ಈಗಾಗಲೇ 79 ತಿದ್ದುಪಡಿಗಳನ್ನು ತರಲಾಗಿದೆ. ಇವುಗಳಲ್ಲಿ ಬಹುತೇಕ ತಿದ್ದುಪಡಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಮಾಡಲಾಗಿದೆ. ರಾಜೀವ್ ಗಾಂಧಿ ಅವರು ಗ್ರಾಮೀಣಾಭಿವೃದ್ಧಿ ಕಾಯ್ದೆಗೆ ತಿದ್ದುಪಡಿ ತರದಿದ್ದರೆ ಈಗಿನ ಅಧಿಕಾರ ವಿಕೇಂದ್ರೀಕರಣವೇ ಸಾಧ್ಯವಾಗುತ್ತಿರಲಿಲ್ಲ ಎಂದು ಅನಂತಕುಮಾರ್ ಪ್ರತಿಪಾದಿಸಿದರು.</p>.<p>ಕರ್ತವ್ಯ: ಆದರೆ ನಂತರ ಮಾತನಾಡಿದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಈ ವಾದವನ್ನು ಒಪ್ಪದೇ, ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಜೋಪಾನವಾಗಿ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಅದನ್ನು ಸುಂದರ ಮಾಡುತ್ತೇವೆ ಎನ್ನುತ್ತಾ ಮತ್ತಷ್ಟು ಕುರೂಪ ಮಾಡುವುದಕ್ಕೆ ಯಾರೂ ಕೈ ಹಾಕಬಾರದು ಎಂದು ಮಾತಿನ ತಿರುಗುಬಾಣ ಬಿಟ್ಟರು.</p>.<p>–––</p>.<p><strong>* ಮಹಾಭಾರತದಿಂದ ಕ್ರಿಕೆಟ್ವರೆಗೆ ಬಾಜಿ</strong></p>.<p>ಮುಂಬೈ, ಏ. 14 (ಪಿಟಿಐ)– ಬಾಜಿ ನಿನ್ನೆ ಮೊನ್ನೆಯ ಚಾಳಿಯಲ್ಲ, ಮಹಾಭಾರತದಲ್ಲಿಯೂ ರಾಜರು ಬಾಜಿ ಕಟ್ಟಿಯೇ ಅರಸೊತ್ತಿಗೆಯನ್ನು ಕಳೆದುಕೊಂಡಿದ್ದರು. ಆಗ ಪಗಡೆಯಿದ್ದರೆ ಈಗ ಅದರ ಸ್ಥಾನದಲ್ಲಿ ಕ್ರಿಕೆಟ್ ಇದೆ. ಅಷ್ಟೇ ವ್ಯತ್ಯಾಸ.</p>.<p>ಕ್ರಿಕೆಟ್ನ ಏರಿಳಿತಗಳಿಗೆ ಮುಂಬೈ ಮೂಕಸಾಕ್ಷಿಯಾಗಿ ನಿಂತಿದೆ. ಬಾಜಿಗೆ ಮೂಲ ಬುಕ್ಕಿಗಳು, ಬುಕ್ಕಿಗಳಿಗೆ ಮೂಲ ಈ ಮುಂಬೈ. ಕೊಳೆಗೇರಿ, ಮಧ್ಯಮ ವರ್ಗ ಜನರ ಭರಾಟೆ, ಗಿಜಿಗಿಡುವ ಮುಂಬೈ ರಸ್ತೆಗಳ ನಡುವೆ ಬಾಜಿ ಸದ್ದಿಲ್ಲದೆ ನಡೆಯುತ್ತಿದೆ.</p>.<p>ಮುಂಬೈಯಲ್ಲಿ ಮಟ್ಕಾ ಬಿಟ್ಟರೆ ಕ್ರಿಕೆಟ್ ಬಾಜಿ ಬಹಳ ಜನಪ್ರಿಯವಾದ ಜೂಜು. ಕ್ರಿಕೆಟ್ ಜನಪ್ರಿಯತೆಯಿಂದಾಗಿ ಲಕ್ಷಾಂತರ ಹಣ ಜೂಜುಕೋರರ ಕೈಗಳಿಂದ ಕೈಗಳಿಗೆ ದಾಟುತ್ತದೆ.</p>.<p>ಕ್ರಿಕೆಟ್ನಲ್ಲಿ ಜೂಜು ಬಹಳ ರೀತಿಯಲ್ಲಿದೆ. ಒಂದು ತಂಡ ಎಷ್ಟು ರನ್ಗಳಿಸಬಹುದು, ಬೌಲರ್ ಎಷ್ಟು ವಿಕೆಟ್ ಪಡೆಯಬಹುದು, ಉತ್ತಮ ಬ್ಯಾಟ್ಸ್ಮನ್, ಉತ್ತಮ ಬೌಲರ್, ಪಂದ್ಯದ ಪುರುಷೋತ್ತಮ... ಹೀಗೆ ಬಗೆಗಳು ಹೆಚ್ಚುತ್ತಾ ಹೋಗುತ್ತದೆ ಎಂದು ಪೊಲೀಸರು ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>