<p><strong>ಕೃಷಿ ವಿದ್ಯುತ್ ದರ ಹೆಚ್ಚಳಕ್ಕೆ ಸಲಹೆ</strong></p><p><strong>ನವದೆಹಲಿ, ಮಾರ್ಚ್ 3 (ಪಿಟಿಐ)–</strong> ರಾಜ್ಯ ವಿದ್ಯುತ್ ಮಂಡಳಿಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೃಷಿಗೆ ಬಳಸುವ ವಿದ್ಯುತ್ ದರವನ್ನು ಸರಾಸರಿ ವೆಚ್ಚದ ಶೇ 50ಕ್ಕೆ ಏರಿಸಬೇಕು ಎಂದು ಪ್ರಧಾನಿ ವಾಜಪೇಯಿ ಅವರು, ಇಂದು ರಾಜ್ಯಗಳಿಗೆ ಕರೆ ನೀಡಿದ್ದಾರೆ.</p><p>ಇಂದು ಇಲ್ಲಿ ನಡೆದ ವಿದ್ಯುತ್ ವಲಯದ ಸುಧಾರಣೆಗಳ ಕುರಿತ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಮಾತನಾಡಿದ ವಾಜಪೇಯಿ, ಒಂದು ಯೂನಿಟ್ ವಿದ್ಯುತ್ಗೆ 50 ಪೈಸೆ ದರ ಏರಿಸಬೇಕು ಎಂದು 1996ರ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಕೈಗೊಂಡಿದ್ದ ನಿರ್ಣಯವು ಸಂಪೂರ್ಣವಾಗಿ ಜಾರಿಗೊಳ್ಳದಿರುವ ಬಗ್ಗೆ ವಿಷಾದಿಸಿದರು.</p><p>ಕೇಂದ್ರ ಮತ್ತು ರಾಜ್ಯಗಳ ನಡುವೆ ಉತ್ತಮ ಸಹಕಾರವಿದ್ದರೆ ಮಾತ್ರ ವಿದ್ಯುತ್ ಕ್ಷೇತ್ರದ ಸುಧಾರಣೆ ಸಾಧ್ಯ ಎಂದರು.</p><p>_____________</p><p><strong>ಸಂಪನ್ಮೂಲ ಅಭಿವೃದ್ಧಿಗೆ ಖಾಸಗಿ ನೆರವು: ಲಕ್ಕಪ್ಪಗೌಡ</strong></p><p><strong>ಬೆಂಗಳೂರು, ಮಾರ್ಚ್ 3–</strong> ‘ಕೇವಲ ಸರ್ಕಾರದ ಅನುದಾನದ ಮೇಲೆಯೇ ಅವಲಂಬಿತವಾಗದೆ ಖಾಸಗಿಯವರ ನೆರವನ್ನೂ ಪಡೆದುಕೊಂಡು ವಿಶ್ವ ವಿದ್ಯಾಲಯದ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವುದು’ ಹಂಪಿ ಕನ್ನಡ ವಿಶ್ವವಿದ್ಯಾಲಯದ ನೂತನ ಕುಲಪತಿ ಯಾಗಿ ನೇಮಕಗೊಂಡಿರುವ ಡಾ. ಎಚ್.ಜೆ. ಲಕ್ಕಪ್ಪಗೌಡ ಅವರ ಆಶಯ.</p><p>ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೂರನೇ ಕುಲಪತಿಯಾಗಿ ಮಾರ್ಚ್ 7ರಂದು ಅಧಿಕಾರ ವಹಿಸಿಕೊಳ್ಳಲಿರುವ ಅವರು, ಇಂದು ‘ಪ್ರಜಾವಾಣಿ’ಯ ಜತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.</p><p>‘ಸರ್ಕಾರದ ಅನುದಾನದ ಜೊತೆಗೆ ವಿ.ವಿ ಸಂಪನ್ಮೂಲ ಕ್ರೋಢಿಕರಿಸುವ ಅಗತ್ಯ ಹೆಚ್ಚಿದೆ ಇದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೃಷಿ ವಿದ್ಯುತ್ ದರ ಹೆಚ್ಚಳಕ್ಕೆ ಸಲಹೆ</strong></p><p><strong>ನವದೆಹಲಿ, ಮಾರ್ಚ್ 3 (ಪಿಟಿಐ)–</strong> ರಾಜ್ಯ ವಿದ್ಯುತ್ ಮಂಡಳಿಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೃಷಿಗೆ ಬಳಸುವ ವಿದ್ಯುತ್ ದರವನ್ನು ಸರಾಸರಿ ವೆಚ್ಚದ ಶೇ 50ಕ್ಕೆ ಏರಿಸಬೇಕು ಎಂದು ಪ್ರಧಾನಿ ವಾಜಪೇಯಿ ಅವರು, ಇಂದು ರಾಜ್ಯಗಳಿಗೆ ಕರೆ ನೀಡಿದ್ದಾರೆ.</p><p>ಇಂದು ಇಲ್ಲಿ ನಡೆದ ವಿದ್ಯುತ್ ವಲಯದ ಸುಧಾರಣೆಗಳ ಕುರಿತ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಮಾತನಾಡಿದ ವಾಜಪೇಯಿ, ಒಂದು ಯೂನಿಟ್ ವಿದ್ಯುತ್ಗೆ 50 ಪೈಸೆ ದರ ಏರಿಸಬೇಕು ಎಂದು 1996ರ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಕೈಗೊಂಡಿದ್ದ ನಿರ್ಣಯವು ಸಂಪೂರ್ಣವಾಗಿ ಜಾರಿಗೊಳ್ಳದಿರುವ ಬಗ್ಗೆ ವಿಷಾದಿಸಿದರು.</p><p>ಕೇಂದ್ರ ಮತ್ತು ರಾಜ್ಯಗಳ ನಡುವೆ ಉತ್ತಮ ಸಹಕಾರವಿದ್ದರೆ ಮಾತ್ರ ವಿದ್ಯುತ್ ಕ್ಷೇತ್ರದ ಸುಧಾರಣೆ ಸಾಧ್ಯ ಎಂದರು.</p><p>_____________</p><p><strong>ಸಂಪನ್ಮೂಲ ಅಭಿವೃದ್ಧಿಗೆ ಖಾಸಗಿ ನೆರವು: ಲಕ್ಕಪ್ಪಗೌಡ</strong></p><p><strong>ಬೆಂಗಳೂರು, ಮಾರ್ಚ್ 3–</strong> ‘ಕೇವಲ ಸರ್ಕಾರದ ಅನುದಾನದ ಮೇಲೆಯೇ ಅವಲಂಬಿತವಾಗದೆ ಖಾಸಗಿಯವರ ನೆರವನ್ನೂ ಪಡೆದುಕೊಂಡು ವಿಶ್ವ ವಿದ್ಯಾಲಯದ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವುದು’ ಹಂಪಿ ಕನ್ನಡ ವಿಶ್ವವಿದ್ಯಾಲಯದ ನೂತನ ಕುಲಪತಿ ಯಾಗಿ ನೇಮಕಗೊಂಡಿರುವ ಡಾ. ಎಚ್.ಜೆ. ಲಕ್ಕಪ್ಪಗೌಡ ಅವರ ಆಶಯ.</p><p>ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೂರನೇ ಕುಲಪತಿಯಾಗಿ ಮಾರ್ಚ್ 7ರಂದು ಅಧಿಕಾರ ವಹಿಸಿಕೊಳ್ಳಲಿರುವ ಅವರು, ಇಂದು ‘ಪ್ರಜಾವಾಣಿ’ಯ ಜತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.</p><p>‘ಸರ್ಕಾರದ ಅನುದಾನದ ಜೊತೆಗೆ ವಿ.ವಿ ಸಂಪನ್ಮೂಲ ಕ್ರೋಢಿಕರಿಸುವ ಅಗತ್ಯ ಹೆಚ್ಚಿದೆ ಇದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>