<p><strong>ವೀರಪ್ಪನ್ ಭಂಟ ಸೇತುಕುಳಿ ಗೋವಿಂದನ್ ಬಂಧನ</strong></p><p>ಕೊಯಮತ್ತೂರು, ಫೆ. 16 (ಯುಎನ್ಐ)– ತಮಿಳುನಾಡು ವಿಶೇಷ ಕಾರ್ಯಾಚರಣೆ ಪಡೆ ಇಂದು ವೀರಪ್ಪನ್ನ ನಿಕಟವರ್ತಿಯಾಗಿದ್ದ ಸೇತುಕುಳಿ ಗೋವಿಂದನ್ನನ್ನು ಸಿರುವಾಣಿ ಅರಣ್ಯದಲ್ಲಿ ಬಂಧಿಸುವ ಮೂಲಕ ಮಹತ್ವದ ಸಾಧನೆ ಮಾಡಿದೆ.</p><p>ವೀರಪ್ಪನ್ನ ಬಲಗೈ ಭಂಟನೆಂದೇ ಗುರುತಿಸಿಕೊಂಡಿದ್ದ ಸೇತುಕುಳಿಯನ್ನು ಹಿಡಿಯಲು ಬಹುಮಾನ ಕೂಡ ಘೋಷಿಸಲಾಗಿತ್ತು. ಸಿರುವಾಣಿ ಅರಣ್ಯ<br>ದಲ್ಲಿ ಪೊಲೀಸರಿಂದ ಸುತ್ತುವರಿಯ<br>ಲ್ಪಟ್ಟ ಸೇತುಕುಳಿ ಶರಣಾದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p><p>ಗೋವಿಂದನ್ ಬಂಧನದಿಂದ ಎಸ್ಟಿಎಫ್ ಪ್ರಮುಖ ಜಯ<br>ವೊಂದನ್ನು ಸಾಧಿಸಿದಂತಾಗಿದೆ.</p><p><strong>ಗಡಿ ಚಳವಳಿ ಪುನರ್ ರೂಪಿಸಲು ಶಿವಸೇನೆ ಯೋಜನೆ</strong></p><p>ಬೆಳಗಾವಿ, ಫೆ. 16– ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥ<br>ಪಡಿಸುವಂತೆ ಕೇಂದ್ರದ ಮೇಲೆ ಒತ್ತಡ ತರಲು ಶಿವಸೇನೆಯು ಚಳವಳಿಯನ್ನು ಪುನರ್ ರೂಪಿಸಲಿದೆ ಎಂದು ಕೇಂದ್ರದ ಭಾರೀ ಕೈಗಾರಿಕಾ ಖಾತೆ ಸಚಿವ ಹಾಗೂ ಶಿವಸೇನೆ ಪಕ್ಷದ ಮುಖಂಡ ಮನೋಹರ ಜೋಶಿ ಸುದ್ದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವೀರಪ್ಪನ್ ಭಂಟ ಸೇತುಕುಳಿ ಗೋವಿಂದನ್ ಬಂಧನ</strong></p><p>ಕೊಯಮತ್ತೂರು, ಫೆ. 16 (ಯುಎನ್ಐ)– ತಮಿಳುನಾಡು ವಿಶೇಷ ಕಾರ್ಯಾಚರಣೆ ಪಡೆ ಇಂದು ವೀರಪ್ಪನ್ನ ನಿಕಟವರ್ತಿಯಾಗಿದ್ದ ಸೇತುಕುಳಿ ಗೋವಿಂದನ್ನನ್ನು ಸಿರುವಾಣಿ ಅರಣ್ಯದಲ್ಲಿ ಬಂಧಿಸುವ ಮೂಲಕ ಮಹತ್ವದ ಸಾಧನೆ ಮಾಡಿದೆ.</p><p>ವೀರಪ್ಪನ್ನ ಬಲಗೈ ಭಂಟನೆಂದೇ ಗುರುತಿಸಿಕೊಂಡಿದ್ದ ಸೇತುಕುಳಿಯನ್ನು ಹಿಡಿಯಲು ಬಹುಮಾನ ಕೂಡ ಘೋಷಿಸಲಾಗಿತ್ತು. ಸಿರುವಾಣಿ ಅರಣ್ಯ<br>ದಲ್ಲಿ ಪೊಲೀಸರಿಂದ ಸುತ್ತುವರಿಯ<br>ಲ್ಪಟ್ಟ ಸೇತುಕುಳಿ ಶರಣಾದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p><p>ಗೋವಿಂದನ್ ಬಂಧನದಿಂದ ಎಸ್ಟಿಎಫ್ ಪ್ರಮುಖ ಜಯ<br>ವೊಂದನ್ನು ಸಾಧಿಸಿದಂತಾಗಿದೆ.</p><p><strong>ಗಡಿ ಚಳವಳಿ ಪುನರ್ ರೂಪಿಸಲು ಶಿವಸೇನೆ ಯೋಜನೆ</strong></p><p>ಬೆಳಗಾವಿ, ಫೆ. 16– ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥ<br>ಪಡಿಸುವಂತೆ ಕೇಂದ್ರದ ಮೇಲೆ ಒತ್ತಡ ತರಲು ಶಿವಸೇನೆಯು ಚಳವಳಿಯನ್ನು ಪುನರ್ ರೂಪಿಸಲಿದೆ ಎಂದು ಕೇಂದ್ರದ ಭಾರೀ ಕೈಗಾರಿಕಾ ಖಾತೆ ಸಚಿವ ಹಾಗೂ ಶಿವಸೇನೆ ಪಕ್ಷದ ಮುಖಂಡ ಮನೋಹರ ಜೋಶಿ ಸುದ್ದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>