<p>ವೀರಪ್ಪನ್ ಬೇಡಿಕೆ: ಉಭಯ ಸರ್ಕಾರಗಳ ಉತ್ತಮ ಸ್ಪಂದನ</p><p>ಬೆಂಗಳೂರು, ಆಗಸ್ಟ್ 6– ‘ಡಾ. ರಾಜ್ ಕುಮಾರ್ ಬಿಡುಗಡೆಯೇ ನಮ್ಮ ಮುಖ್ಯ ಗುರಿ. ಈ ಹಿನ್ನೆಲೆಯಲ್ಲಿ ನರಹಂತಕ ವೀರಪ್ಪನ್ ಸರ್ಕಾರದ ಮುಂದಿಟ್ಟಿರುವ ಎಲ್ಲಾ 10 ಬೇಡಿಕೆಗಳಿಗೂ ಸರ್ಕಾರ ಸ್ಪಂದಿಸಿದೆ’ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಂದು ಇಲ್ಲಿ ಹೇಳಿದರು.</p><p>ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಜತೆ ಚೆನ್ನೈನಲ್ಲಿ ಸುಮಾರು ಮೂರು ಗಂಟೆ ನಡೆದ ಸುದೀರ್ಘ ಮಾತುಕತೆಯ ನಂತರ ನಗರಕ್ಕೆ ಆಗಮಿಸಿದ ಕೃಷ್ಣ ಅವರು, ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.</p><p>ತಮಿಳು ಉಗ್ರಗಾಮಿಗಳ ಕೈವಾಡ ಶಂಕೆ</p><p>ಚೆನ್ನೈ, ಆಗಸ್ಟ್ 6– ಕನ್ನಡದ ಚಿತ್ರನಟ ರಾಜ್ಕುಮಾರ್ ಮತ್ತು ಇತರ ಮೂವರ ಬಿಡುಗಡೆಗಾಗಿ ವೀರಪ್ಪನ್ ಮುಂದಿಟ್ಟಿರುವ ರಾಜಕೀಯ ಬೇಡಿಕೆಗಳು ತಮಿಳುನಾಡು ಉಗ್ರಗಾಮಿ ಗುಂಪೊಂದರ ಜತೆಗೂಡಿ ರಚಿಸಲಾಗಿದೆ ಎಂಬ ಊಹಾಪೋಹ ಬಲವಾಗಿದೆ.</p><p>ಇಂದು ಇಲ್ಲಿ ಈ ಬಗ್ಗೆ ಪತ್ರಕರ್ತರು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರನ್ನು ಪ್ರಶ್ನಿಸಿದಾಗ, ‘ಇದು ನಿಜವೂ ಇರಬಹುದು ಅಥವಾ ಸ್ವತಃ ವೀರಪ್ಪನ್ನೇ ತಮಿಳು ಉಗ್ರಗಾಮಿಯಾಗಿಯೂ ಇರಬಹುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವೀರಪ್ಪನ್ ಬೇಡಿಕೆ: ಉಭಯ ಸರ್ಕಾರಗಳ ಉತ್ತಮ ಸ್ಪಂದನ</p><p>ಬೆಂಗಳೂರು, ಆಗಸ್ಟ್ 6– ‘ಡಾ. ರಾಜ್ ಕುಮಾರ್ ಬಿಡುಗಡೆಯೇ ನಮ್ಮ ಮುಖ್ಯ ಗುರಿ. ಈ ಹಿನ್ನೆಲೆಯಲ್ಲಿ ನರಹಂತಕ ವೀರಪ್ಪನ್ ಸರ್ಕಾರದ ಮುಂದಿಟ್ಟಿರುವ ಎಲ್ಲಾ 10 ಬೇಡಿಕೆಗಳಿಗೂ ಸರ್ಕಾರ ಸ್ಪಂದಿಸಿದೆ’ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಂದು ಇಲ್ಲಿ ಹೇಳಿದರು.</p><p>ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಜತೆ ಚೆನ್ನೈನಲ್ಲಿ ಸುಮಾರು ಮೂರು ಗಂಟೆ ನಡೆದ ಸುದೀರ್ಘ ಮಾತುಕತೆಯ ನಂತರ ನಗರಕ್ಕೆ ಆಗಮಿಸಿದ ಕೃಷ್ಣ ಅವರು, ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.</p><p>ತಮಿಳು ಉಗ್ರಗಾಮಿಗಳ ಕೈವಾಡ ಶಂಕೆ</p><p>ಚೆನ್ನೈ, ಆಗಸ್ಟ್ 6– ಕನ್ನಡದ ಚಿತ್ರನಟ ರಾಜ್ಕುಮಾರ್ ಮತ್ತು ಇತರ ಮೂವರ ಬಿಡುಗಡೆಗಾಗಿ ವೀರಪ್ಪನ್ ಮುಂದಿಟ್ಟಿರುವ ರಾಜಕೀಯ ಬೇಡಿಕೆಗಳು ತಮಿಳುನಾಡು ಉಗ್ರಗಾಮಿ ಗುಂಪೊಂದರ ಜತೆಗೂಡಿ ರಚಿಸಲಾಗಿದೆ ಎಂಬ ಊಹಾಪೋಹ ಬಲವಾಗಿದೆ.</p><p>ಇಂದು ಇಲ್ಲಿ ಈ ಬಗ್ಗೆ ಪತ್ರಕರ್ತರು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರನ್ನು ಪ್ರಶ್ನಿಸಿದಾಗ, ‘ಇದು ನಿಜವೂ ಇರಬಹುದು ಅಥವಾ ಸ್ವತಃ ವೀರಪ್ಪನ್ನೇ ತಮಿಳು ಉಗ್ರಗಾಮಿಯಾಗಿಯೂ ಇರಬಹುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>