<p><strong>ಭಾನುವಾರ, 10-4-1961<br /> </strong><br /> <strong>ದಕ್ಷಿಣ ಆಫ್ರಿಕದ ಮೇಲೆ ಅಂತರ್ರಾಷ್ಟ್ರೀಯ ನಿರ್ಬಂಧ?</strong><br /> <strong>ಜೋಹಾನ್ಸ್ಬರ್ಗ್, ಏ. 9</strong>- ಕಾಮನ್ವೆಲ್ತ್ ತ್ಯಜಿಸಲು ಡಾ. ವೆರ್ವೋರ್ಡ್ ಅವರು ನಿರ್ಧರಿಸಿರುವುದರಿಂದ ದಕ್ಷಿಣ ಆಫ್ರಿಕದ ಮೇಲೆ ಅಂತರ್ರಾಷ್ಟ್ರೀಯ ನಿರ್ಬಂಧ ಹೇರುವ ನಿರೀಕ್ಷೆ ಇದೆ. ದಕ್ಷಿಣ ಆಫ್ರಿಕದ ವಿರುದ್ಧ ತತ್ಕ್ಷಣ ಕ್ರಮ ಕೈಗೊಳ್ಳಬೇಕೆಂದು ಕೇಳುವುದಕ್ಕಾಗಿ ವಿವಿಧ ರಾಷ್ಟ್ರಗಳಿಗೆ ದಕ್ಷಿಣ ಆಫ್ರಿಕ ಯುನೈಟೆಡ್ ಫ್ರಂಟ್ ಪ್ರತಿನಿಧಿಗಳನ್ನು ಕಳುಹಿಸಲಿದೆ.<br /> <br /> <strong>ಭಾರತದ ಅಲಿಪ್ತ ನೀತಿ ಬಗ್ಗೆ ಪಾಶ್ಚಾತ್ಯರ ಆಸಕ್ತಿ</strong><br /> ‘ಭಾರತದ ಆಲಿಪ್ತ ನಿಲುವಿನ ತತ್ವ’ (PHILOSOPHY OF NON ALIGNMENT) ಅನೇಕ ಮಂದಿ ಅಮೆರಿಕನರ ಮನವಿಯನ್ನು ಆಕರ್ಷಿಸಿರುವ ತತ್ವ; ಯೂರೋಪಿನ ಹಲವು ರಾಷ್ಟ್ರಗಳ ವಿಚಾರವಂತ ಜನತೆಯಲ್ಲಿ ಪ್ರಶಂಸೆಯನ್ನು ಪ್ರೇರೇಪಿಸಿರುವ ತತ್ವ.<br /> <br /> ಇದು ನಮ್ಮ ಕನ್ನಡನಾಡಿನ ರಾಜ್ಯಪಾಲ ಶ್ರೀ ಜಯಚಾಮರಾಜ ಒಡೆಯರ್ ಅವರ ಅಭಿಪ್ರಾಯ. ಈ ಅಭಿಪ್ರಾಯಕ್ಕೆ ಸಮರ್ಥನೆಯಾಗಿ ಈ ಬಾರಿಯ ವಿದೇಶ ಪ್ರವಾಸದ ಕಾಲದಲ್ಲಿ ಶ್ರೀ ಜಯಚಾಮರಾಜರು ಅಮೆರಿಕದ ಸಾಂಸ್ಕೃತಿಕ -ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಮತ್ತು ಯುರೋಪಿನ ಕೆಲವು ರಾಷ್ಟ್ರಗಳ ಪ್ರವಾಸ ಕಾಲದಲ್ಲಿ ನೀಡಲಿರುವ ಉಪನ್ಯಾಸಗಳ ವಿಶೇಷವೇ ಇದು ‘ಭಾರತದ ಆಲಿಪ್ತ ನಿಲುವಿನ ತತ್ವ’.<br /> <br /> <strong>ಕಮ್ಯುನಿಸ್ಟ್ ಪಕ್ಷದ ಭವಿಷ್ಯ ನೀತಿ ಬಗ್ಗೆ ನಿರ್ಧಾರ ಮುಂದಕ್ಕೆ</strong><br /> <strong>ಲುಮುಂಬನಗರ (ವಿಜಯವಾಡ), ಏ. 9</strong>- ಕಮ್ಯುನಿಸ್ಟ್ ಪಕ್ಷದ ಭವಿಷ್ಯ ನೀತಿ ಬಗ್ಗೆ ಸುಮಾರು 12 ಗಂಟೆಗಳ ಕಾಲ ನಡೆದ ಚರ್ಚೆ ಪೂರ್ಣವಾಗದೆ ಇದರ ಪರಿಶೀಲನೆಯನ್ನು ಮುಂದಕ್ಕೆ ತಳ್ಳಲಾಯಿತು.<br /> <br /> <strong>ರಾಜ್ಯ ವಿಧಾನಸಭೆಗೆ 125 ಕ್ಷೇತ್ರಗಳಲ್ಲಿ ಪಿ.ಎಸ್.ಪಿ. ಸ್ಪರ್ಧೆ</strong><br /> <strong>ಬೆಂಗಳೂರು, ಏ. 9</strong>- ಕೇಂದ್ರ ಪಾರ್ಲಿಮೆಂಟರಿ ಬೋರ್ಡ್ ನಿರ್ಧರಿಸಿರುವ ಷರತ್ತುಗಳನ್ನು ಪೂರೈಸುವ ಸುಮಾರು 125 ಕ್ಷೇತ್ರಗಳಲ್ಲಿ ರಾಜ್ಯದ ವಿಧಾನಸಭೆಗೆ ಮುಂದಿನ ಮಹಾಚುನಾವಣೆಯಲ್ಲಿ ಪಕ್ಷದ ಸ್ಪರ್ಧಿಗಳನ್ನು ನಿಲ್ಲಿಸಬೇಕೆಂದು ಶ್ರೀ ಕೆ. ಕಣ್ಣನ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಪಿ.ಎಸ್.ಪಿ. ಪಾರ್ಲಿಮೆಂಟರಿ ಸಮಿತಿ ನಿರ್ಧರಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾನುವಾರ, 10-4-1961<br /> </strong><br /> <strong>ದಕ್ಷಿಣ ಆಫ್ರಿಕದ ಮೇಲೆ ಅಂತರ್ರಾಷ್ಟ್ರೀಯ ನಿರ್ಬಂಧ?</strong><br /> <strong>ಜೋಹಾನ್ಸ್ಬರ್ಗ್, ಏ. 9</strong>- ಕಾಮನ್ವೆಲ್ತ್ ತ್ಯಜಿಸಲು ಡಾ. ವೆರ್ವೋರ್ಡ್ ಅವರು ನಿರ್ಧರಿಸಿರುವುದರಿಂದ ದಕ್ಷಿಣ ಆಫ್ರಿಕದ ಮೇಲೆ ಅಂತರ್ರಾಷ್ಟ್ರೀಯ ನಿರ್ಬಂಧ ಹೇರುವ ನಿರೀಕ್ಷೆ ಇದೆ. ದಕ್ಷಿಣ ಆಫ್ರಿಕದ ವಿರುದ್ಧ ತತ್ಕ್ಷಣ ಕ್ರಮ ಕೈಗೊಳ್ಳಬೇಕೆಂದು ಕೇಳುವುದಕ್ಕಾಗಿ ವಿವಿಧ ರಾಷ್ಟ್ರಗಳಿಗೆ ದಕ್ಷಿಣ ಆಫ್ರಿಕ ಯುನೈಟೆಡ್ ಫ್ರಂಟ್ ಪ್ರತಿನಿಧಿಗಳನ್ನು ಕಳುಹಿಸಲಿದೆ.<br /> <br /> <strong>ಭಾರತದ ಅಲಿಪ್ತ ನೀತಿ ಬಗ್ಗೆ ಪಾಶ್ಚಾತ್ಯರ ಆಸಕ್ತಿ</strong><br /> ‘ಭಾರತದ ಆಲಿಪ್ತ ನಿಲುವಿನ ತತ್ವ’ (PHILOSOPHY OF NON ALIGNMENT) ಅನೇಕ ಮಂದಿ ಅಮೆರಿಕನರ ಮನವಿಯನ್ನು ಆಕರ್ಷಿಸಿರುವ ತತ್ವ; ಯೂರೋಪಿನ ಹಲವು ರಾಷ್ಟ್ರಗಳ ವಿಚಾರವಂತ ಜನತೆಯಲ್ಲಿ ಪ್ರಶಂಸೆಯನ್ನು ಪ್ರೇರೇಪಿಸಿರುವ ತತ್ವ.<br /> <br /> ಇದು ನಮ್ಮ ಕನ್ನಡನಾಡಿನ ರಾಜ್ಯಪಾಲ ಶ್ರೀ ಜಯಚಾಮರಾಜ ಒಡೆಯರ್ ಅವರ ಅಭಿಪ್ರಾಯ. ಈ ಅಭಿಪ್ರಾಯಕ್ಕೆ ಸಮರ್ಥನೆಯಾಗಿ ಈ ಬಾರಿಯ ವಿದೇಶ ಪ್ರವಾಸದ ಕಾಲದಲ್ಲಿ ಶ್ರೀ ಜಯಚಾಮರಾಜರು ಅಮೆರಿಕದ ಸಾಂಸ್ಕೃತಿಕ -ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಮತ್ತು ಯುರೋಪಿನ ಕೆಲವು ರಾಷ್ಟ್ರಗಳ ಪ್ರವಾಸ ಕಾಲದಲ್ಲಿ ನೀಡಲಿರುವ ಉಪನ್ಯಾಸಗಳ ವಿಶೇಷವೇ ಇದು ‘ಭಾರತದ ಆಲಿಪ್ತ ನಿಲುವಿನ ತತ್ವ’.<br /> <br /> <strong>ಕಮ್ಯುನಿಸ್ಟ್ ಪಕ್ಷದ ಭವಿಷ್ಯ ನೀತಿ ಬಗ್ಗೆ ನಿರ್ಧಾರ ಮುಂದಕ್ಕೆ</strong><br /> <strong>ಲುಮುಂಬನಗರ (ವಿಜಯವಾಡ), ಏ. 9</strong>- ಕಮ್ಯುನಿಸ್ಟ್ ಪಕ್ಷದ ಭವಿಷ್ಯ ನೀತಿ ಬಗ್ಗೆ ಸುಮಾರು 12 ಗಂಟೆಗಳ ಕಾಲ ನಡೆದ ಚರ್ಚೆ ಪೂರ್ಣವಾಗದೆ ಇದರ ಪರಿಶೀಲನೆಯನ್ನು ಮುಂದಕ್ಕೆ ತಳ್ಳಲಾಯಿತು.<br /> <br /> <strong>ರಾಜ್ಯ ವಿಧಾನಸಭೆಗೆ 125 ಕ್ಷೇತ್ರಗಳಲ್ಲಿ ಪಿ.ಎಸ್.ಪಿ. ಸ್ಪರ್ಧೆ</strong><br /> <strong>ಬೆಂಗಳೂರು, ಏ. 9</strong>- ಕೇಂದ್ರ ಪಾರ್ಲಿಮೆಂಟರಿ ಬೋರ್ಡ್ ನಿರ್ಧರಿಸಿರುವ ಷರತ್ತುಗಳನ್ನು ಪೂರೈಸುವ ಸುಮಾರು 125 ಕ್ಷೇತ್ರಗಳಲ್ಲಿ ರಾಜ್ಯದ ವಿಧಾನಸಭೆಗೆ ಮುಂದಿನ ಮಹಾಚುನಾವಣೆಯಲ್ಲಿ ಪಕ್ಷದ ಸ್ಪರ್ಧಿಗಳನ್ನು ನಿಲ್ಲಿಸಬೇಕೆಂದು ಶ್ರೀ ಕೆ. ಕಣ್ಣನ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಪಿ.ಎಸ್.ಪಿ. ಪಾರ್ಲಿಮೆಂಟರಿ ಸಮಿತಿ ನಿರ್ಧರಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>