<p><strong>ಪಾನನಿರೋಧ ಪ್ರಶ್ನೆ: ವಿಶೇಷ ಅಧಿವೇಶನಕ್ಕೆ ಒತ್ತಾಯ<br /> ನವದೆಹಲಿ, ಜೂನ್ 4– </strong>ರಾಷ್ಟ್ರಾದ್ಯಂತ 1969ರ ಅಕ್ಟೋಬರ್ 2ರ ವೇಳೆಗೆ ಪಾನನಿರೋಧವನ್ನು ಜಾರಿಗೆ ತರುವ ಬಗ್ಗೆ ಚರ್ಚಿಸಲು ಎ.ಐ.ಸಿ.ಸಿ. ವಿಶೇಷ ಅಧಿವೇಶನ ಕರೆಯುವಂತೆ ನೂರಕ್ಕೂ ಹೆಚ್ಚು ಜನ ಸದಸ್ಯರು ಇಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪನವರನ್ನು ಒತ್ತಾಯಪಡಿಸಿದರು.</p>.<p><strong>ಹದಗೆಟ್ಟ ರಾಜಕೀಯ<br /> ನವದೆಹಲಿ, ಜೂನ್ 4 – </strong>ದೇಶದ ರಾಜಕೀಯ ಪರಿಸ್ಥಿತಿ ಬಗ್ಗೆ ಎ.ಐ.ಸಿ.ಸಿ. ಅಧಿವೇಶನ ಇಂದು ಬೆಳಿಗ್ಗೆ ಚರ್ಚೆಯನ್ನು ಮುಂದುವರೆಸಲು ಕಲಾಪ ಆರಂಭಿಸಿದಾಗ ಸಭಾಭವನದಲ್ಲಿ ನೂರಕ್ಕೂ ಕಡಿಮೆ ಪ್ರತಿನಿಧಿಗಳು ಹಾಜರಿದ್ದರು. ಉಳಿದವರು ಕೇಂದ್ರ ಚುನಾವಣಾ ಸಮಿತಿ ಚುನಾವಣೆಯಲ್ಲಿ ಆಸಕ್ತರಾಗಿ ಪಕ್ಕದ ಕೋಣೆಯೊಂದರ ಬಳಿ ಸಾಲುಗಟ್ಟಿ ನಿಂತಿದ್ದರು.</p>.<p><strong>ಐಕಮತ್ಯ ರಕ್ಷಣೆಗೆ ಇಂದಿರಾ ಕರೆ<br /> ನವದೆಹಲಿ, ಜೂನ್ 4–</strong> ದೇಶದಲ್ಲಿ ಐಕಮತ್ಯವನ್ನು ರಕ್ಷಿಸುವುದು ಇಂದಿನ ಆದ್ಯ ಕರ್ತವ್ಯ. ಇದನ್ನು ಸಾಧಿಸದೆ ಪ್ರಗತಿ ಇಲ್ಲ ಎಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ತಮ್ಮನ್ನು ಭೇಟಿ ಮಾಡಿದ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತ ತಿಳಿಸಿದರು.</p>.<p><strong>ಪಕ್ಷದ ನಾಯಕತ್ವದಲ್ಲಿ ನಂಬಿಕೆಗೆ ಇಂದಿರಾ, ಮುರಾರ್ಜಿ ಕರೆ<br /> ನವದೆಹಲಿ, ಜೂನ್ 4 –</strong> ದೇಶದ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಮತ್ತು ಉಪಪ್ರಧಾನಮಂತ್ರಿ ಶ್ರೀ ಮುರಾರ್ಜಿ ದೇಸಾಯ್ ಇಂದು ಎ.ಐ.ಸಿ.ಸಿ. ಸಭೆಯಲ್ಲಿ ಸಮರ್ಥಿಸಿಕೊಂಡರು.</p>.<p>ಗುಂಪು ಹಾಗೂ ಒಳಜಗಳ ತ್ಯಜಿಸಿ, ಪಕ್ಷದ ನಾಯಕರಲ್ಲಿ ಐಕಮತ್ಯ ಮತ್ತು ನಂಬಿಕೆ ಇರಬೇಕೆಂಬುದು ಅವರಿಬ್ಬರ ಭಾಷಣಗಳ ಮುಖ್ಯಾಂಶವಾಗಿತ್ತು.</p>.<p><strong>ಲೋಕಸಭೆಗೆ ಮಂಡಲ್ ಆಯ್ಕೆ<br /> ಪಟ್ಣ, ಜೂನ್ 4 –</strong> ಮಾಧಿಪುರ ಸಂಸತ್ ಚುನಾವಣೆ ಕ್ಷೇತ್ರದಿಂದ ಲೋಕಸಭೆಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಶೋಷಿತ ದಳದ ನಾಯಕ ಹಾಗೂ ಬಿಹಾರ ರಾಜ್ಯದ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಪಿ. ಮಂಡಲ್ ಅವರು ಆಯ್ಕೆಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾನನಿರೋಧ ಪ್ರಶ್ನೆ: ವಿಶೇಷ ಅಧಿವೇಶನಕ್ಕೆ ಒತ್ತಾಯ<br /> ನವದೆಹಲಿ, ಜೂನ್ 4– </strong>ರಾಷ್ಟ್ರಾದ್ಯಂತ 1969ರ ಅಕ್ಟೋಬರ್ 2ರ ವೇಳೆಗೆ ಪಾನನಿರೋಧವನ್ನು ಜಾರಿಗೆ ತರುವ ಬಗ್ಗೆ ಚರ್ಚಿಸಲು ಎ.ಐ.ಸಿ.ಸಿ. ವಿಶೇಷ ಅಧಿವೇಶನ ಕರೆಯುವಂತೆ ನೂರಕ್ಕೂ ಹೆಚ್ಚು ಜನ ಸದಸ್ಯರು ಇಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪನವರನ್ನು ಒತ್ತಾಯಪಡಿಸಿದರು.</p>.<p><strong>ಹದಗೆಟ್ಟ ರಾಜಕೀಯ<br /> ನವದೆಹಲಿ, ಜೂನ್ 4 – </strong>ದೇಶದ ರಾಜಕೀಯ ಪರಿಸ್ಥಿತಿ ಬಗ್ಗೆ ಎ.ಐ.ಸಿ.ಸಿ. ಅಧಿವೇಶನ ಇಂದು ಬೆಳಿಗ್ಗೆ ಚರ್ಚೆಯನ್ನು ಮುಂದುವರೆಸಲು ಕಲಾಪ ಆರಂಭಿಸಿದಾಗ ಸಭಾಭವನದಲ್ಲಿ ನೂರಕ್ಕೂ ಕಡಿಮೆ ಪ್ರತಿನಿಧಿಗಳು ಹಾಜರಿದ್ದರು. ಉಳಿದವರು ಕೇಂದ್ರ ಚುನಾವಣಾ ಸಮಿತಿ ಚುನಾವಣೆಯಲ್ಲಿ ಆಸಕ್ತರಾಗಿ ಪಕ್ಕದ ಕೋಣೆಯೊಂದರ ಬಳಿ ಸಾಲುಗಟ್ಟಿ ನಿಂತಿದ್ದರು.</p>.<p><strong>ಐಕಮತ್ಯ ರಕ್ಷಣೆಗೆ ಇಂದಿರಾ ಕರೆ<br /> ನವದೆಹಲಿ, ಜೂನ್ 4–</strong> ದೇಶದಲ್ಲಿ ಐಕಮತ್ಯವನ್ನು ರಕ್ಷಿಸುವುದು ಇಂದಿನ ಆದ್ಯ ಕರ್ತವ್ಯ. ಇದನ್ನು ಸಾಧಿಸದೆ ಪ್ರಗತಿ ಇಲ್ಲ ಎಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ತಮ್ಮನ್ನು ಭೇಟಿ ಮಾಡಿದ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತ ತಿಳಿಸಿದರು.</p>.<p><strong>ಪಕ್ಷದ ನಾಯಕತ್ವದಲ್ಲಿ ನಂಬಿಕೆಗೆ ಇಂದಿರಾ, ಮುರಾರ್ಜಿ ಕರೆ<br /> ನವದೆಹಲಿ, ಜೂನ್ 4 –</strong> ದೇಶದ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಮತ್ತು ಉಪಪ್ರಧಾನಮಂತ್ರಿ ಶ್ರೀ ಮುರಾರ್ಜಿ ದೇಸಾಯ್ ಇಂದು ಎ.ಐ.ಸಿ.ಸಿ. ಸಭೆಯಲ್ಲಿ ಸಮರ್ಥಿಸಿಕೊಂಡರು.</p>.<p>ಗುಂಪು ಹಾಗೂ ಒಳಜಗಳ ತ್ಯಜಿಸಿ, ಪಕ್ಷದ ನಾಯಕರಲ್ಲಿ ಐಕಮತ್ಯ ಮತ್ತು ನಂಬಿಕೆ ಇರಬೇಕೆಂಬುದು ಅವರಿಬ್ಬರ ಭಾಷಣಗಳ ಮುಖ್ಯಾಂಶವಾಗಿತ್ತು.</p>.<p><strong>ಲೋಕಸಭೆಗೆ ಮಂಡಲ್ ಆಯ್ಕೆ<br /> ಪಟ್ಣ, ಜೂನ್ 4 –</strong> ಮಾಧಿಪುರ ಸಂಸತ್ ಚುನಾವಣೆ ಕ್ಷೇತ್ರದಿಂದ ಲೋಕಸಭೆಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಶೋಷಿತ ದಳದ ನಾಯಕ ಹಾಗೂ ಬಿಹಾರ ರಾಜ್ಯದ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಪಿ. ಮಂಡಲ್ ಅವರು ಆಯ್ಕೆಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>