ಮೈಸೂರು, ಮಾ. 26– ಕುಖ್ಯಾತ ಕಾಡುಗಳ್ಳ ನರಹಂತಕ ವೀರಪ್ಪನ್ ತಂಡಕ್ಕೆ ನೆರವಾಗುತ್ತಿದ್ದು ಕೆಲವು ಕಾಲ ತಂಡದಲ್ಲಿದ್ದ ಐದು ಮಂದಿಯನ್ನು ಕರ್ನಾಟಕ ವಿಶೇಷ ಕಾರ್ಯಾಚರಣೆ ಪಡೆ ಬಂಧಿಸಿದೆ ಎಂದು ಪಡೆಯ ಮುಖ್ಯಸ್ಥ ಶಂಕರಬಿದರಿ ಇಂದು ಪ್ರಕಟಿಸಿದರು.
ಈಗ ಪೊಲೀಸರ ವಶಕ್ಕೆ ಬಂದಿರುವ ಎಲ್ಲ ಐದು ಮಂದಿ ಹರಿಕೃಷ್ಣ, ಶಕೀಲ್ ಅಹ್ಮದ್ ಮೊದಲಾದವರ ಕಗ್ಗೊಲೆಯಲ್ಲಿ (1992ರ ಆಗಸ್ಟ್ 14) ನೇರವಾಗಿ ಪಾಲುಗೊಂಡವರು.
ಕಾಫಿ, ಏಲಕ್ಕಿಗೆ ವಿದೇಶಿ ಮೂಲದ ವೈರಸ್
ಮಡಿಕೇರಿ, ಮಾ. 26– ಕೆಲವೊಂದು ವೈರಸ್ ಮೂಲದ ಕಾಯಿಲೆಗಳು ರಾಜ್ಯದ ಪ್ರಮುಖ ಆರ್ಥಿಕ ಬೆಳೆಗಳಿಗೆ ತಗುಲಿದ್ದು ಮಲೆನಾಡ ಭಾಗದ ಆರ್ಥಿಕ ಪರಿಸ್ಥಿತಿ ಏರುಪೇರಾಗುವ ಅಪಾಯ ಎದುರಾಗಿದೆ.