ಕಾಶ್ಮೀರ ಸಮಸ್ಯೆ ಶಾಂತಿಯುತ ಇತ್ಯರ್ಥಕ್ಕೆ ಅಮೆರಿಕ ಯತ್ನ
ವಾಷಿಂಗ್ಟನ್, ಜ. 16 - ಕಾಶ್ಮೀರದ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಬಹು ದಿನಗಳಿಂದ ಇರುವ ವಿವಾದವನ್ನು ಪರಿಹರಿಸುವ ಬಗ್ಗೆ ಅಮೆರಿಕವು ತನ್ನ ಪ್ರಯತ್ನಗಳನ್ನು ಮುಂದುವರಿಸುವುದೆಂದು ಅಮೆರಿಕದ ಅಧ್ಯಕ್ಷ ಕೆನೆಡಿಯವರು ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಬಂದ್
ಮಂಡ್ಯ, ಜ. 16 - ಕಬ್ಬು ಸರಬರಾಜು ಮಾಡುತ್ತಿರುವ ರೈತರು ನಿನ್ನೆ ಬೆಳಿಗ್ಗೆಯಿಂದ ಮುಷ್ಕರ ಹೂಡಿರುವ ಕಾರಣ ದಿನ ಒಂದಕ್ಕೆ 2000 ಟನ್ ಕಬ್ಬು ಅರೆದು 2000 ಮೂಟೆ ಸಕ್ಕರೆ ಉತ್ಪತ್ತಿ ಮಾಡುತ್ತಿದ್ದ ಮಂಡ್ಯ ಸಕ್ಕರೆ ಕಾರ್ಖಾನೆ ಕೆಲಸವನ್ನು ನಿಲ್ಲಿಸಿದೆ.