ಕೃಷ್ಣಾ ನೀರಿನ ಹಂಚಿಕೆ: ಕೊನೆಯ ಯತ್ನ ವಿಫಲವಾದರೆ ವಿವಾದ ಪಂಚಾಯ್ತಿಗೆ
ನವದೆಹಲಿ, ಏ. 8– ಕೃಷ್ಣಾ, ಗೋದಾವರಿ ಮತ್ತು ನರ್ಮದಾ ನದಿ ನೀರನ್ನು ಕುರಿತ ಅಂತರರಾಜ್ಯ ಜಲ ವಿವಾದಗಳನ್ನು ಪರಸ್ಪರ ಮಾತುಕತೆಗಳ ಮೂಲಕ ಇತ್ಯರ್ಥ ಮಾಡಲು ಈಗ ಕೊನೆಯ ಪ್ರಯತ್ನವನ್ನು ನಡೆಸಲಾಗುತ್ತಿದೆ.
ಈ ವಿಷಯವನ್ನು ಇಂದು ಲೋಕಸಭೆಯಲ್ಲಿ ಕೇಂದ್ರ ನೀರಾವರಿ ಹಾಗೂ ವಿದ್ಯುತ್ ಸಚಿವ ಡಾ. ಕೆ.ಎಲ್. ರಾವ್ ಅವರು ತಿಳಿಸಿದರು.
ಅಂತರರಾಜ್ಯ ನದಿಗಳ ವಿವಾದ ಶಾಸನದ ಪ್ರಕಾರ ಈ ವಿವಾದಗಳನ್ನು ಶೀಘ್ರದಲ್ಲಿಯೇ ಪಂಚಾಯಿತಿಗೆ ಒಪ್ಪಿಸಬಹುದು ಎಂದೂ ಅವರು ಹೇಳಿದರು.
**
ಆಂಧ್ರಕ್ಕೆ ಮೈಸೂರಿನ ನೋಟಿಸ್ ಸೇರಿಲ್ಲ
ಹೈದರಾಬಾದ್, ಏ. 8– ನದಿ ನೀರಿನ ವಿವಾದದ ವಿಷಯದಲ್ಲಿ ಮಹಾರಾಷ್ಟ್ರ ಮತ್ತು ಮೈಸೂರು ಸರ್ಕಾರಗಳು ಕಳುಹಿಸಿಕೊಟ್ಟಿವೆಯೆಂದು ಹೇಳಲಾದ ನೋಟೀಸುಗಳ ಬಗ್ಗೆ ಆ ಸರ್ಕಾರಗಳಿಂದ ತನಗೆ ಪತ್ರಗಳೇನೂ ಬಂದಿಲ್ಲವೆಂದು ಆಂಧ್ರ ಸರ್ಕಾರ ಹೇಳಿದೆ.
**
ಪದವಿ ತ್ಯಾಗ ಪ್ರಶ್ನೆ: ಪದೇ ಪದೇ ಉತ್ತರಿಸುವುದಿಲ್ಲ ಎಂದು ಎಸ್ಸೆನ್
ಬೆಂಗಳೂರು, ಏ. 8– ತಾವು ಈಗಾಗಲೇ ಮುಖ್ಯಮಂತ್ರಿ ಪದವಿ ಬಿಡುವ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಭೆಯಲ್ಲಿ ವ್ಯಕ್ತಪಡಿಸಿರುವ ಕಾರಣ ಪದೇ ಪದೇ ಆ ಪ್ರಶ್ನೆಗೆ ಉತ್ತರ ಕೊಡುವುದಿಲ್ಲವೆಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ವಿಧಾನಸಭೆಯಲ್ಲಿ ಸ್ಪಷ್ಟವಾಗಿ ಹೇಳಿದರು.
**
ಅಧ್ಯಕ್ಷ ಜಾನ್ಸನ್ಗೆ ಹಾನಾಯ್ ಪತ್ರ
ವಾಷಿಂಗ್ಟನ್, ಏ. 8– ಇಂದು ಹಾನಾಯ್ನಿಂದ ತಮಗೆ ಸಂದೇಶವೊಂದು ಬಂದಿದೆಯೆಂದು, ಅಮೆರಿಕ ಹಾಗೂ ಉತ್ತರ ವಿಯಟ್ನಾಂ ಪ್ರತಿನಿಧಿಗಳು ಮಾತುಕತೆ ನಡೆಸುವುದಕ್ಕೆ ದಿನ ಹಾಗೂ ಸ್ಥಳಗಳನ್ನು ನಿರ್ಧರಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಅಧ್ಯಕ್ಷ ಜಾನ್ಸನ್ ಇಂದು ಪ್ರಕಟಿಸಿದರು.