<p><strong>ವಿಧ್ವಂಸ ಕೃತ್ಯಗಳಿಂದ ಆಗ್ನೇಯ ಏಷ್ಯಕ್ಕೆ ಅಪಾಯ: ಇಂದಿರಾ</strong></p>.<p><strong>ಮೆಲ್ಬೋರ್ನ್, ಮೇ 24– </strong>ಬಾಂಬ್ ದಾಳಿಯ ಪೂರ್ಣ ನಿಲುಗಡೆ ವಿಯಟ್ನಾಂ ಶಾಂತಿ ಸಾಧನೆಗೆ ಅತ್ಯಂತ ಅಗತ್ಯ ಎಂದು ಭಾರತದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಇಂದು ಇಲ್ಲಿ ಹೇಳಿದರು.</p>.<p>ಉತ್ತರ ವಿಯಟ್ನಾಂ ಮೇಲೆ ಅಮೆರಿಕ ತನ್ನ ಬಾಂಬ್ ದಾಳಿಯನ್ನು ಬೇಷರತ್ತಾಗಿ ನಿಲ್ಲಿಸಬೇಕೆಂಬುದಕ್ಕೆ ಬೆಂಬಲ ನೀಡಬೇಕೆಂದು ಆಸ್ಟ್ರೇಲಿಯಾ ಸರ್ಕಾರಕ್ಕೆ ತಾವು ಒತ್ತಡ ತರಲಿಲ್ಲ ಎಂದು ಶ್ರೀಮತಿ ಗಾಂಧಿ ಹೇಳಿದರು.</p>.<p>**</p>.<p><strong>‘ಬೆಳೆ ನಿಯಂತ್ರಣ’: ಕೃಷಿ ಆಯೋಗದಿಂದ ಪರಿಶೀಲನೆ</strong></p>.<p><strong>ನವದೆಹಲಿ, ಮೇ 24– </strong>ಭವಿಷ್ಯದ ಕೃಷಿ ತಂತ್ರದಲ್ಲಿ ‘ಬೆಳೆ ನಿಯಂತ್ರಣ’ ಅತಿ ಮುಖ್ಯವಾದ ಲಕ್ಷಣ. ಆಹಾರ ಸಚಿವ ಶಾಖೆ ಇದನ್ನು ರೂಪಿಸಿದೆ.</p>.<p>ಉದ್ದೇಶಿತ ಕೃಷಿ ಆಯೋಗ ಈ ಪ್ರಶ್ನೆಯನ್ನು ವಿವರವಾಗಿ ಪರಿಶೀಲಿಸುವುದೆಂದು ನಿರೀಕ್ಷಿಸಲಾಗಿದೆ.</p>.<p>ಆಹಾರ ಧಾನ್ಯಗಳ ಸ್ವಾವಲಂಬನೆಯೇ ಪ್ರಸ್ತುತ ಕೃಷಿ ತಂತ್ರದ ಗುರಿ. 1970–71ರ ಹೊತ್ತಿಗೆ ಒಮ್ಮೆ ಈ ಗುರಿಯನ್ನು ಸಾಧಿಸಿದ ನಂತರ ಕೃಷಿ ಅಭಿವೃದ್ಧಿಯ ಇಡೀ ಭವಿಷ್ಯ ಬದಲಾಗುತ್ತದೆ.</p>.<p>**</p>.<p><strong>ಕೃಷಿ ಅಭಿವೃದ್ಧಿಗೆ ಅಣುಶಕ್ತಿ ಬಳಕೆ</strong></p>.<p><strong>ಸಿಡ್ನಿ, ಮೇ 24–</strong> ಹಿರೋಷಿಮಾದ ಮೇಲೆ ಪ್ರಥಮ ಅಣುಬಾಂಬ್ ಬೀಳುವುದಕ್ಕೆ ಮುಂಚಿನಿಂದಲೂ ಭಾರತ ಅಣು ವಿಜ್ಞಾನದ ಸಂಶೋಧನೆಯಲ್ಲಿ ತೊಡಗಿತ್ತು ಎಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ತಿಳಿಸಿದರು.</p>.<p>ನ್ಯೂ ಸೌತ್ ವೇಲ್ಸ್ ಸರ್ಕಾರ ಏರ್ಪಡಿಸಿದ್ದ ಔತಣ ಕೂಟದಲ್ಲಿ ಮಾತನಾಡುತ್ತ, ಭಾರತ ಆಸ್ಟ್ರೇಲಿಯದಂತೆ ಕೃಷಿಗೆ ಹೆಚ್ಚು ಪ್ರಾಮುಖ್ಯ ನೀಡುತ್ತಿದೆಯೆಂದು ತಿಳಿಸಿ, ಕೃಷಿ ಅಭಿವೃದ್ಧಿಗಾಗಿ ಅಣು ಉತ್ಪಾದನೆಗಳನ್ನು ಬಳಸುತ್ತಿದೆಯೆಂದು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಧ್ವಂಸ ಕೃತ್ಯಗಳಿಂದ ಆಗ್ನೇಯ ಏಷ್ಯಕ್ಕೆ ಅಪಾಯ: ಇಂದಿರಾ</strong></p>.<p><strong>ಮೆಲ್ಬೋರ್ನ್, ಮೇ 24– </strong>ಬಾಂಬ್ ದಾಳಿಯ ಪೂರ್ಣ ನಿಲುಗಡೆ ವಿಯಟ್ನಾಂ ಶಾಂತಿ ಸಾಧನೆಗೆ ಅತ್ಯಂತ ಅಗತ್ಯ ಎಂದು ಭಾರತದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಇಂದು ಇಲ್ಲಿ ಹೇಳಿದರು.</p>.<p>ಉತ್ತರ ವಿಯಟ್ನಾಂ ಮೇಲೆ ಅಮೆರಿಕ ತನ್ನ ಬಾಂಬ್ ದಾಳಿಯನ್ನು ಬೇಷರತ್ತಾಗಿ ನಿಲ್ಲಿಸಬೇಕೆಂಬುದಕ್ಕೆ ಬೆಂಬಲ ನೀಡಬೇಕೆಂದು ಆಸ್ಟ್ರೇಲಿಯಾ ಸರ್ಕಾರಕ್ಕೆ ತಾವು ಒತ್ತಡ ತರಲಿಲ್ಲ ಎಂದು ಶ್ರೀಮತಿ ಗಾಂಧಿ ಹೇಳಿದರು.</p>.<p>**</p>.<p><strong>‘ಬೆಳೆ ನಿಯಂತ್ರಣ’: ಕೃಷಿ ಆಯೋಗದಿಂದ ಪರಿಶೀಲನೆ</strong></p>.<p><strong>ನವದೆಹಲಿ, ಮೇ 24– </strong>ಭವಿಷ್ಯದ ಕೃಷಿ ತಂತ್ರದಲ್ಲಿ ‘ಬೆಳೆ ನಿಯಂತ್ರಣ’ ಅತಿ ಮುಖ್ಯವಾದ ಲಕ್ಷಣ. ಆಹಾರ ಸಚಿವ ಶಾಖೆ ಇದನ್ನು ರೂಪಿಸಿದೆ.</p>.<p>ಉದ್ದೇಶಿತ ಕೃಷಿ ಆಯೋಗ ಈ ಪ್ರಶ್ನೆಯನ್ನು ವಿವರವಾಗಿ ಪರಿಶೀಲಿಸುವುದೆಂದು ನಿರೀಕ್ಷಿಸಲಾಗಿದೆ.</p>.<p>ಆಹಾರ ಧಾನ್ಯಗಳ ಸ್ವಾವಲಂಬನೆಯೇ ಪ್ರಸ್ತುತ ಕೃಷಿ ತಂತ್ರದ ಗುರಿ. 1970–71ರ ಹೊತ್ತಿಗೆ ಒಮ್ಮೆ ಈ ಗುರಿಯನ್ನು ಸಾಧಿಸಿದ ನಂತರ ಕೃಷಿ ಅಭಿವೃದ್ಧಿಯ ಇಡೀ ಭವಿಷ್ಯ ಬದಲಾಗುತ್ತದೆ.</p>.<p>**</p>.<p><strong>ಕೃಷಿ ಅಭಿವೃದ್ಧಿಗೆ ಅಣುಶಕ್ತಿ ಬಳಕೆ</strong></p>.<p><strong>ಸಿಡ್ನಿ, ಮೇ 24–</strong> ಹಿರೋಷಿಮಾದ ಮೇಲೆ ಪ್ರಥಮ ಅಣುಬಾಂಬ್ ಬೀಳುವುದಕ್ಕೆ ಮುಂಚಿನಿಂದಲೂ ಭಾರತ ಅಣು ವಿಜ್ಞಾನದ ಸಂಶೋಧನೆಯಲ್ಲಿ ತೊಡಗಿತ್ತು ಎಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ತಿಳಿಸಿದರು.</p>.<p>ನ್ಯೂ ಸೌತ್ ವೇಲ್ಸ್ ಸರ್ಕಾರ ಏರ್ಪಡಿಸಿದ್ದ ಔತಣ ಕೂಟದಲ್ಲಿ ಮಾತನಾಡುತ್ತ, ಭಾರತ ಆಸ್ಟ್ರೇಲಿಯದಂತೆ ಕೃಷಿಗೆ ಹೆಚ್ಚು ಪ್ರಾಮುಖ್ಯ ನೀಡುತ್ತಿದೆಯೆಂದು ತಿಳಿಸಿ, ಕೃಷಿ ಅಭಿವೃದ್ಧಿಗಾಗಿ ಅಣು ಉತ್ಪಾದನೆಗಳನ್ನು ಬಳಸುತ್ತಿದೆಯೆಂದು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>