ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೇ ಹಾದಿಯಲ್ಲಿರುವರೇ?

Last Updated 31 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

‘ಅಟಲ್‌ಜಿ ಬಯಸಿದ್ದ ಹಾದಿಯಲ್ಲೇ ನಾವು ನಡೆಯುತ್ತಿದ್ದೇವೆ’ (ಪ್ರ.ವಾ., ಆ. 18) ಎಂದು ನರೇಂದ್ರ ಮೋದಿ ಹೇಳಿದ್ದನ್ನು ಓದಿ, ಹೌದಾ?! ಎಂದುಕೊಂಡೆ.

‘ಅಟಲ್’ ಎಂದರೆ ‘ದೃಢ’ ಎಂದರ್ಥ. ‘ವಾಜಪೇಯಿ’ ಒಂದು ಬಗೆಯ ಯಜ್ಞ. ಅವರು ‘ಬಿಹಾರಿ’ ಅಲ್ಲ. (ಮಧ್ಯಪ್ರದೇಶ, ಉತ್ತರ ಪ್ರದೇಶದವರು)!

2004ರ ಲೋಕಸಭಾ ಚುನಾವಣೆಗೆ ಮುನ್ನ ಟಿ.ವಿ. ವಾಹಿನಿ ಒಂದಕ್ಕೆ ನೀಡಿದ ಸಂದರ್ಶನದಲ್ಲಿ, ‘ಕದಂ ಕದಂಪರ್ ಸಂಝೋತಾ ಕರನಾ ಪಡತಾ ಹೈ, ಉಸ್‌ ಕೇ ಲಿಯೇ ಕೀಮತ್ ಭೀ ಚುಕಾನಾ ಹೋಗಾ... ಮುಝೆ ಪಾರ್ಟಿ ಚಲಾನೀ ಹೈ’ (ಹೆಜ್ಜೆ ಹೆಜ್ಜೆಗೂ ರಾಜಿ, ಅದಕ್ಕೆ ಬೆಲೆ ತೆರುವುದು ಅನಿವಾರ್ಯ. ಪಕ್ಷ ನಡೆಸಬೇಕಲ್ಲ!) ಎಂದಿದ್ದರು.

‘ಜನತಂತ್ರ ಧನತಂತ್ರವಾಗುತ್ತ ಹೊರಟಿರುವುದು ಅಪಾಯಕಾರಿ ಸ್ಥಿತಿ’ ಎಂದಿದ್ದರು. ಮುಂದೆ ಸರ್ಕಾರಗಳ ನಿರ್ಧಾರದ ಮೇಲೆ ಬಂಡವಾಳಸ್ಥರ ಪ್ರಭಾವ ಆಗಲೂ ಬಹುದು ಎಂಬ ಅವರ ಮಾತು ಮಾರ್ಮಿಕ.

ಈಗ ಕಲಶ ಯಾತ್ರೆ ಮಾಡುತ್ತಿರುವವರು ತಮ್ಮ ಮನಸ್ಸು, ಕಾರ್ಯಗಳಲ್ಲಿ ಈ ನುಡಿಗಳನ್ನು ‘ಸಂಚಯಿಸಿ’ ಕೊಳ್ಳುವರೇ?

ಎಚ್.ಎಸ್. ಮಂಜುನಾಥ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT