ಟಿಕ್ ಟಾಕ್ ಮಾಡಲು ಹೋಗಿ ಬೆನ್ನುಮುರಿ ಮುರಿದುಕೊಂಡಿದ್ದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗ್ರಾಮದ ಕುಮಾರ್ (23), ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದು ನೋವಿನ ಸಂಗತಿ. ಈಗಲಾದರೂ ಸರ್ಕಾರವು ಟಿಕ್ ಟಾಕ್ ವಿಡಿಯೊ ಶೇರಿಂಗ್ ಆ್ಯಪ್ ಅನ್ನು ನಿಷೇಧಿಸಬೇಕು. ಇದರ ಜೊತೆಗೆ ಯುವಜನ ಸಹ ಎಚ್ಚೆತ್ತುಕೊಳ್ಳಬೇಕು. ಈಗಂತೂ ಹಿರಿಯರಿಂದ ಯುವಕರವರೆಗೆ ಹಲವರು ಟಿಕ್ ಟಾಕ್ ಗೀಳು ಹತ್ತಿಸಿಕೊಂಡಿದ್ದಾರೆ. ಯುವಜನ ತಮ್ಮ ಭವಿಷ್ಯವನ್ನು ಮರೆತು ಮನರಂಜನೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ತಮಗಾಗಿ ಹಾಗೂ ಸಮಾಜದ ಹಿತಕ್ಕಾಗಿ ಅವರು ಚಿಂತಿಸಬೇಕಾಗಿದೆ.